ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಅಭಿಮಾನಿಗಳಿಗೆ ಮತ್ತೊಂದು ಕಹಿ ಸುದ್ದಿ. ಟಿವಿ ಫ್ಯಾನ್ಸ್ ಗೆ ಮತ್ತೊಮ್ಮೆ ನಿರಾಸೆ. ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಕಿರುತೆರೆ ಇತಿಹಾಸದಲ್ಲಿ ಹಲವಾರು ರಿಯಾಲಿಟಿ ಶೋಗಳು ಬಂದು ಕನ್ನಡ ಪ್ರೇಕ್ಷಕರ ಮನವನ್ನು ತಣಿಸಿ ಮನೋರಂಜನೆಯನ್ನು ನೀಡಿವೆ. ದಾರವಾಹಿ ಹಾಗೂ ಸಿನಿಮಾಗಳಷ್ಟೆ ಕನ್ನಡ ಪ್ರೇಕ್ಷಕರು ಕಿರುತೆರೆಯ ವಿಶೇಷ ಕಾರ್ಯಕ್ರಮಗಳನ್ನು ಕೂಡ ಮೆಚ್ಚುತ್ತಾರೆ. ಇನ್ನು ಕಿರುತೆರೆಯ ಕಾರ್ಯಕ್ರಮಗಳಲ್ಲಿ ಸಿಂಗಿಂಗ್ ಕಾರ್ಯಕ್ರಮಗಳು ಕೂಡ ಮೇಲ್ಪಂಕ್ತಿಯಲ್ಲಿ ಕಾಣಸಿಗುತ್ತದೆ. ಅವುಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎದೆತುಂಬಿ ಹಾಡುವೆನು ಕಾರ್ಯಕ್ರಮ ಕೂಡ ಒಂದು.

ಕನ್ನಡ ಚಿತ್ರರಂಗ ಮಾತ್ರವಲ್ಲದೇ ಇಡೀ ಭಾರತ ದೇಶದ ಕಂಡಂತಹ ಧೀಮಂತ ಹಾಗೂ ಶ್ರೇಷ್ಠ ಗಾಯಕರಲ್ಲಿ ಒಬ್ಬರಾಗಿರುವಂತಹ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರ ಮುಂದಾಳತ್ವದಲ್ಲಿ ನಡೆದುಕೊಂಡು ಬರುತ್ತಿದ್ದ ಎದೆ ತುಂಬಿ ಹಾಡುವೆನು ಕಾರ್ಯಕ್ರಮ ಹಲವಾರು ವರ್ಷಗಳ ಮುಂಚೆ ಅದೆಷ್ಟು ಸಂಗೀತಗಾರರಿಗೆ ಆಶ್ರಯವನ್ನು ಹಾಗೂ ಒಂದು ವೇದಿಕೆಯನ್ನು ನೀಡಿದ್ದು ಎಂದರೆ ಖಂಡಿತವಾಗಿ ತಪ್ಪಾಗಲಾರದು. ನಂತರ ಅವರ ನೆನಪಿಗಾಗಿ ಮತ್ತೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಈಗ ಎದೆತುಂಬಿ ಹಾಡುವೆನು ಕಾರ್ಯಕ್ರಮ ಆಗಸ್ಟ್ 14ರಂದು ಎಸ್ ಪಿ ಬಾಲಸುಬ್ರಹ್ಮಣ್ಯಮ್ ರವರ ಪುತ್ರನಾಗಿರುವ ಚರಣ್ ರವರೆ ಬಂದು ಲಾಂಚ್ ಮಾಡಿದ್ದರು.

ede tumbi haaduvenu | ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಅಭಿಮಾನಿಗಳಿಗೆ ಮತ್ತೊಂದು ಕಹಿ ಸುದ್ದಿ. ಟಿವಿ ಫ್ಯಾನ್ಸ್ ಗೆ ಮತ್ತೊಮ್ಮೆ ನಿರಾಸೆ. ಏನು ಗೊತ್ತೇ??
ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಅಭಿಮಾನಿಗಳಿಗೆ ಮತ್ತೊಂದು ಕಹಿ ಸುದ್ದಿ. ಟಿವಿ ಫ್ಯಾನ್ಸ್ ಗೆ ಮತ್ತೊಮ್ಮೆ ನಿರಾಸೆ. ಏನು ಗೊತ್ತೇ?? 2

ಈಗಾಗಲೇ ಎದೆತುಂಬಿ ಹಾಡುವೇನು ಕಾರ್ಯಕ್ರಮ ಹಲವಾರು ಗಾನಕೋಗಿಲೆ ಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡುವಷ್ಟರ ಮಟ್ಟಿಗೆ ಪ್ರತಿಭೆಗಳನ್ನು ಹುಡುಕಿದೆ ಎಂದರೆ ತಪ್ಪಾಗಲಾರದು. ರೆಟ್ರೋ ಮಾಸ್ ಮೆಲೋಡಿಯಸ್ ಹೀಗೆ ಹಲವಾರು ಶೈಲಿಯ ಹಾಡುಗಳನ್ನು ಹಾಡಿ ಪ್ರೇಕ್ಷಕರನ್ನು ಹಾಗು ತೀರ್ಪುಗಾರರನ್ನು ಹೆಚ್ಚಿಸುವಂತಹ ಕಾರ್ಯವನ್ನು ಈಗಾಗಲೇ ಈ ಹಾಡುವ ಹಕ್ಕಿಗಳು ಮಾಡಿದ್ದಾರೆ. ಇನ್ನು ಸದ್ಯ ಕಾರ್ಯಕ್ರಮ ಫೈನಲ್ ಹಂತಕ್ಕೆ ತಲುಪುವ ಮಟ್ಟಕ್ಕೆ ಬಂದಿದ್ದು ಕೇವಲ ಮೂರು ವಾರಗಳಷ್ಟೇ ಪ್ರಸಾರವಾಗುವುದು ನಿರ್ಧಾರವಾಗಿದೆ. ಪ್ರತಿಯೊಬ್ಬರ ಮನೆಯಲ್ಲಿ ಕೂಡ ಎದೆ ತುಂಬಿ ಹಾಡುವೆನು ಕಾರ್ಯಕ್ರಮಕ್ಕಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದರು. ಇತ್ತೀಚಿಗಷ್ಟೇ ಈ ಕಾರ್ಯಕ್ರಮಕ್ಕೆ ರೋರಿಂಗ್ ಸ್ಟಾರ್ ಶ್ರೀ ಮುರಳಿ ಹಾಗೂ ನಟಿ ಆಶಿಕಾ ರಂಗನಾಥ್ ರವರು ಕೂಡ ಆಗಮಿಸಿದ್ದರು.

Comments are closed.