ದುಡಿದ ಎಲ್ಲಾ ಸಂಪತ್ತು ದಾನ ಮಾಡಿದ ನಟಿ ಆರತಿ, ಈಗ ಏನು ಮಾಡುತ್ತಿದ್ದಾರೆ ಗೊತ್ತಾ?? ನಿಜಕ್ಕೂ ಗ್ರೇಟ್ ಅಂತೀರಾ.

ನಮಸ್ಕಾರ ಸ್ನೇಹಿತರೇ ಚಂದನವನದ ತಾರೆಯರಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಸಿನಿ ಪ್ರಿಯರ ಮನಸ್ಸನ್ನು ಗೆದ್ದವರು ರಂಗ ನಾಯಕಿ, ನಟಿ ಆರತಿ. ತಾವು ಟಾಪ್ ನಟಿಯಾಗಿ ಬೇಡಿಕೆಯ ನಟಿ ಎನಿಸಿಕೊಂಡಿರುವಾಗಲೇ ಚಿತ್ರರಂಗದಿಂದ ದೂರ ಸರಿದವರು ತಾರೆ ಆರತಿ. ತಮ್ಮ ಮಗಳಿಗೋಸ್ಕರ ಚಿತ್ರದಲ್ಲಿ ನಟಿಸುವುದನ್ನೇ ಬಿಟ್ಟು ಇದೀಗ ಅಮೇರಿಕದಲ್ಲಿ ವಾಸವಾಗಿದ್ದಾರೆ. ಪತಿ ಚಂದ್ರಶೇಖರ್ ಗೌಡ್ರ ಜೊತೆ ಸೆರಿ ಸಾಕಷ್ಟು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ ಆರತಿ.

ತಮಗೆ ಬೆಷ್ಟಿದ್ದರೂ ಸಾಲುವುದಿಲ್ಲ ಎನ್ನುವ ಈ ಸಮಾಜದಲ್ಲಿ ನಟಿ ಆರತಿ ವಿಭಿನ್ನವಾಗಿ ಕಾಣುತ್ತಾರೆ. ಯಾಕೆಂದರೆ ಅವರು ಬಡವರಿಗೆ ಸಹಾಯ ಮಾಡುವುದರಲ್ಲಿಯೇ ತಮ್ಮ ಸಂಪೂರ್ಣ ದುಡಿಮೆಯನ್ನು ಮುಡುಪಿಟ್ಟಿದ್ದಾರೆ ಎಂದರೆ ಆಶ್ಚರ್ಯಪಡಲೇಬೇಕು. ಜಿ. ಎಸ್ ಶಿವರುದ್ರಪ್ಪ ಅವರ ಪುತ್ರ ಜಿ ಎಸ್ ಜಯದೇವ ಅವರೇ ಸ್ಪೂರ್ತಿಯಂತೆ. ಜಯದೇವ ಅವರ ದೀನದಯಾಳು ಆಶ್ರಯ ಮನೆಗೆ ವಿಶಾಲವಾದ ಹಾಸ್ಟೇಲ್ ಕಟ್ತಿಸಿಕೊಟ್ಟು 2 ಕೋಟಿ ಹಣ ಠೇವಣೆ ಇರಿಸಿ ಅದರಿಂದ ಬರುವ ಹಣವನ್ನು ವಿದ್ಯಾರ್ಥಿ ವೇತನ ನೀಡಲು ಬಳಸುತ್ತಿದ್ದಾರೆ. ಅಷ್ಟೇ ಅಲ್ಲ ತಮ್ಮ ಬೆಳ್ಳಿ ತೆರೆ ಮನೆಯನ್ನೆ ಮಾರಿ 15 ಕೋಟಿ ಹಣವನ್ನು ಬಡವರ ಉದ್ಧಾರಕ್ಕಾಗಿಯೇ ಮೀಸಲಿಟ್ಟಿದ್ದಾರೆ ನಟಿ ಆರತಿ.

40 ಶಾಲೆಗಳನ್ನು ದತ್ತು ಪಡೆದು ವಿದ್ಯಾರ್ಥಿಗಳ ಸಂಪೂರ್ಣ ವಿದ್ಯಾಭ್ಯಾಸದ ಖರ್ಚನ್ನು ಅವರೇ ಭರಿಸುತ್ತಿದ್ದಾರೆ. ಇನ್ನು ಉತ್ತರ ಕರ್ನಾಟಕದ 20 ಹಳ್ಳಿಗಳನ್ನು ದತ್ತು ಪಡೆದು ಅಲ್ಲಿ ಶೌಚಾಲಯ, ಶಾಲೆಗಳನ್ನು ನಿರ್ಮಿಸುವುದು ಮಾತ್ರವಲ್ಲದೇ ಸ್ವಯಂ ಉದ್ಯೋಗ ಕಲಿಕಾ ಕೇಂದ್ರಗಳನ್ನೂ ಸ್ಥಾಪಿಸಿ ನೊಂದವರ ಪಾಲಿನ ದೇವರಾಗಿದ್ದಾರೆ ಎಂದರೆ ಅತಿಶಯೋಕ್ತಿಯಲ್ಲ. ತಾವು ದುಡಿದ ಹಣವನ್ನು ಸಮಾಜ ಕಲ್ಯಾಣ ಕಾರ್ಯಕ್ಕೆ ಬಳಸಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ನಟಿ ಆರತಿ ನಿಜಕ್ಕೂ ಇತರರಿಗೆ ಮಾದರಿ.

Comments are closed.