ಹಲವಾರು ವರ್ಷಗಳ ಬಳಿಕ ಮತ್ತೊಮ್ಮೆ ಸಿಹಿ ಸುದ್ದಿ ಹಂಚಿಕೊಂಡ ವಿಜಯಸೂರ್ಯ ಹಾಗೂ ವೈಷ್ಣವಿ, ಅಭಿಮಾನಿಗಳಿಗೆ ಸಿಹಿ ಸುದ್ದಿ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಒಂದುಕಾಲದಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕಂಡಿದ್ದ ಧಾರಾವಾಹಿ ಎಂದರೆ ಅದು ಅಗ್ನಿಸಾಕ್ಷಿ ಎಂದರೆ ಯಾವ ಅನುಮಾನವೂ ಇಲ್ಲ. ಯಾಕೆಂದರೆ ಅಗ್ನಿಸಾಕ್ಷಿ ಧಾರಾವಾಹಿ ಎಷ್ಟರಮಟ್ಟಿಗೆ ಯಶಸ್ಸು ಸಾಧಿಸಿತ್ತು. ಹೌದು ಗೆಳೆಯರೇ ವಿಜಯಸೂರ್ಯ ಹಾಗೂ ವೈಷ್ಣವಿ ಗೌಡರವರ ಕೆರಿಯರ್ ನಲ್ಲಿ ಮೊದಲ ಧಾರವಾಹಿ ಅಗ್ನಿಸಾಕ್ಷಿ ಆಗಿತ್ತು. ಅಗ್ನಿಸಾಕ್ಷಿ ಬರೋಬ್ಬರಿ ಏಳು ವರ್ಷಗಳ ಕಾಲ ಪ್ರಸಾರವಾಗಿತ್ತು. ಅಷ್ಟರಮಟ್ಟಿಗೆ ಟಿಆರ್ ಪಿ ಹಾಗೂ ಪ್ರೇಕ್ಷಕರ ಮೆಚ್ಚುಗೆಯನ್ನು ಗಳಿಸಿದಂತ ಟಾಪ್ ನಂಬರ್ ಒನ್ ದಾರವಾಹಿ ಆಗಿತ್ತು.

ಇವರಿಬ್ಬರ ಸಿದ್ದಾರ್ಥ್ ಹಾಗೂ ಸನ್ನಿಧಿ ಪಾತ್ರಗಳು ಸಾಕಷ್ಟು ದೊಡ್ಡಮಟ್ಟದಲ್ಲಿ ಜನಪ್ರಿಯವಾಗಿದ್ದವು. ಎಷ್ಟೋ ಜನರು ಇವರಿಬ್ಬರ ಹೆಸರನ್ನೇ ಮರೆತು ಕೇವಲ ಸಿದ್ದಾರ್ಥ್ ಸನ್ನಿಧಿ ಎಂಬುದಾಗಿ ಅವರಿಬ್ಬರನ್ನು ಕರೆಯುತ್ತಿದ್ದರು. ಪ್ರೇಕ್ಷಕರು ಇವರಿಬ್ಬರು ನಿಜಜೀವನದಲ್ಲೂ ಕೂಡ ಮದುವೆಯಾಗಲಿ ಎಂಬುದಾಗಿ ಹಾರೈಸಿದ್ದರು. ಆದರೆ ವಿಜಯಸೂರ್ಯ ರವರು ಅರ್ಧದಲ್ಲಿಯೇ ಧಾರವಾಹಿಯನ್ನು ಬಿಟ್ಟು ತಾಯಿ ತೋರಿಸಿರುವ ಹುಡುಗಿಯನ್ನು ಮದುವೆಯಾಗಿ ಒಂದು ಗಂಡು ಮಗುವನ್ನು ಕೂಡ ಪಡೆಯುತ್ತಾರೆ. ನಿಮಗೆಲ್ಲ ತಿಳಿದಿರುವಂತೆ ವೈಷ್ಣವಿ ಅವರು ಬಿಗ್ ಬಾಸ್ ನಲ್ಲಿ ಕೂಡ ಕಾಣಿಸಿಕೊಂಡಿದ್ದರು.

agnisakshi | ಹಲವಾರು ವರ್ಷಗಳ ಬಳಿಕ ಮತ್ತೊಮ್ಮೆ ಸಿಹಿ ಸುದ್ದಿ ಹಂಚಿಕೊಂಡ ವಿಜಯಸೂರ್ಯ ಹಾಗೂ ವೈಷ್ಣವಿ, ಅಭಿಮಾನಿಗಳಿಗೆ ಸಿಹಿ ಸುದ್ದಿ ಏನು ಗೊತ್ತೇ??
ಹಲವಾರು ವರ್ಷಗಳ ಬಳಿಕ ಮತ್ತೊಮ್ಮೆ ಸಿಹಿ ಸುದ್ದಿ ಹಂಚಿಕೊಂಡ ವಿಜಯಸೂರ್ಯ ಹಾಗೂ ವೈಷ್ಣವಿ, ಅಭಿಮಾನಿಗಳಿಗೆ ಸಿಹಿ ಸುದ್ದಿ ಏನು ಗೊತ್ತೇ?? 2

ಆದರೆ ಇವರಿಬ್ಬರ ಜೋಡಿಯನ್ನು ಇಷ್ಟಪಟ್ಟಿದ್ದ ಅಭಿಮಾನಿಗಳಿಗೆ ಈಗ ಒಂದು ಹೊಸ ಸುದ್ದಿ ಬಂದಿದ್ದು ಸಂತೋಷವನ್ನು ನೀಡುವುದು ಗ್ಯಾರಂಟಿ. ಹೌದು ಗೆಳೆಯರೇ ರಾಮ್ ಜಿ ನಿರ್ದೇಶನದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಡಾ ಕರ್ಣ ಎನ್ನುವ ಹೊಸ ಧಾರವಾಹಿ ಪ್ರಾರಂಭವಾಗಲಿದ್ದು ಇದರಲ್ಲಿ ಮತ್ತೊಮ್ಮೆ ಸನ್ನಿಧಿ ಹಾಗೂ ವಿಜಯ್ ಸೂರ್ಯ ಜೊತೆಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಇದರ ಕುರಿತಂತೆ ಇನ್ನೂ ಕೂಡ ಅಧಿಕೃತ ಮಾಹಿತಿ ಹೊರ ಬಂದಿಲ್ಲವಾದರೂ ಮೂಲಗಳ ಪ್ರಕಾರ ಇವರಿಬ್ಬರೂ ಮತ್ತೆ ಇದೇ ಧಾರವಾಹಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಕನ್ಫರ್ಮ್ ಆಗಿದೆ. ಈ ವಿಚಾರದ ಕುರಿತಂತೆ ನೀವೇನು ಹೇಳುತ್ತೀರಿ ಎಂಬುದನ್ನು ಕಾಮೆಂಟ್ ಬಾಕ್ಸ್ನಲ್ಲಿ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.