ತಮ್ಮಿಂದನೇ ಎಲ್ಲಾ ಎಂದು ಬಿಲ್ಡ್ ಅಪ್ ಕೊಡುತ್ತಿರುವ ಮೀಡಿಯಾ ಗಳಿಗೆ ಒಮ್ಮೆಲೇ ಗುದ್ದು ನೀಡಿದ ದರ್ಶನ್. ಏನು ಹೇಳಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಾಕಷ್ಟು ದಿನಗಳಿಂದ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಅಭಿಮಾನಿಗಳು ಕ್ರಾಂತಿ ಸಿನಿಮಾದ ಕುರಿತಂತೆ ಅಪ್ಡೇಟ್ ಗಾಗಿ ಕಾಯುತ್ತಿದ್ದರು. ವರಮಹಾಲಕ್ಷ್ಮಿ ಹಬ್ಬದ ದಿನದಂದು ಡಿ ಬಾಸ್ ಅಭಿಮಾನಿಗಳಿಗೆ ಕ್ರಾಂತಿ ಸಿನಿಮಾದಿಂದ ವಿಶೇಷ ಪೋಸ್ಟರ್ ಬಿಡುಗಡೆ ಆಗಿತ್ತು. ಹಬ್ಬದ ದಿನದಂದು ಹಬ್ಬದ ಊಟದಷ್ಟೇ ಸಿಹಿ ಆಗಿರುವ ಪೋಸ್ಟರ್ ಅನ್ನು ನೋಡಿ ಡಿ ಬಾಸ್ ಅಭಿಮಾನಿಗಳಂತೂ ಕರ್ನಾಟಕ ರಾಜ್ಯದಾದ್ಯಂತ ಸೆಲೆಬ್ರೇಶನ್ ಮಾಡಿದ್ದಾರೆ. ಕ್ಲಾಸ್ ಲುಕ್ ನಲ್ಲಿ ಡಿ ಬಾಸ್ ರವರು ಇರುವಂತಹ ಕ್ರಾಂತಿ ಸಿನಿಮಾದ ಪೋಸ್ಟರ್ ವರಮಹಾಲಕ್ಷ್ಮಿ ಹಬ್ಬದ ದಿನದಂದು ಬಿಡುಗಡೆಯಾಗಿತ್ತು.

ಅದೇ ದಿನ ಡಿ ಬಾಸ್ ರವರ 56ನೇ ಸಿನಿಮಾದ ಹೀರೋಯಿನ್ ಅನಾವರಣ ಕಾರ್ಯಕ್ರಮ ಕೂಡ ನಡೆದಿದೆ ಮಾತ್ರವಲ್ಲದೆ 56ನೇ ಸಿನಿಮಾದ ಮುಹೂರ್ತ ಪೂಜೆ ಕೂಡ ನೆರವೇರಿದೆ. ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಸುದ್ದಿ ಮಾಧ್ಯಮಗಳು ಡಿ ಬಾಸ್ ರವರ ಸಿನಿಮಾದ ಕುರಿತಂತೆ ಯಾವುದೇ ಸುದ್ದಿಗಳನ್ನು ಬಿತ್ತರಿಸಬಾರದು ಎನ್ನುವ ಅಘೋಷಿತ ಬ್ಯಾನ್ ಅನ್ನು ಮಾಡಿದ್ದಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರ. ಕ್ರಾಂತಿ ಸಿನಿಮಾದ ಪೋಸ್ಟರ್ ನಲ್ಲಿ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಇಂತಹ ಸೋ ಕಾಲ್ ಮಾಧ್ಯಮಗಳನ್ನು ಪರೋಕ್ಷವಾಗಿಯೇ ಗುಮ್ಮಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ತಮ್ಮಿಂದನೇ ಎಲ್ಲಾ ಎಂದು ಬಿಲ್ಡ್ ಅಪ್ ಕೊಡುತ್ತಿರುವ ಮೀಡಿಯಾ ಗಳಿಗೆ ಒಮ್ಮೆಲೇ ಗುದ್ದು ನೀಡಿದ ದರ್ಶನ್. ಏನು ಹೇಳಿದ್ದಾರೆ ಗೊತ್ತೇ?? 2

ಕ್ರಾಂತಿ ಸಿನಿಮಾದ ಲೇಟೆಸ್ಟ್ ಪೋಸ್ಟರ್ ನಲ್ಲಿ ಲರ್ನ್ ಟು ಫೈಟ್ ಅಲೋನ್ ಅಂದರೆ, ಒಬ್ಬಂಟಿಯಾಗಿ ಹೋರಾಡುವುದನ್ನು ಕಲಿ ಎನ್ನುವ ಬರಹವನ್ನು ಕೂಡ ಹೊಂದಿದೆ. ಈ ಮೂಲಕ ಡಿ ಬಾಸ್ ರವರು ಮಾಧ್ಯಮಗಳು ತಮ್ಮ ವಿರುದ್ಧ ಇದ್ದರೂ ಕೂಡ ಈ ಸಿನಿಮಾದ ಮೂಲಕ ನಾವು ಗೆದ್ದೇ ಗೆಲ್ಲುತ್ತೇವೆ ಎಂಬುದಾಗಿ ಡಿ ಬಾಸ್ ಸಂದೇಶವನ್ನು ರವಾನಿಸಿದ್ದಾರೆ ಎಂದು ಹೇಳಬಹುದಾಗಿದೆ. ಈ ವಿಷಯದ ಕುರಿತಂತೆ ಅಭಿಮಾನಿಗಳು ಸೇರಿದಂತೆ ಹಲವಾರು ಕನ್ನಡ ಸಿನಿಮಾ ರಸಿಕರು ಕೂಡ ಬೆಂಬಲವನ್ನು ಸೂಚಿಸಿದ್ದಾರೆ. ಇದರ ಬಗ್ಗೆ ನಿಮ್ಮ ನಿಲುವೇನು ಎಂಬುದನ್ನು ಕಾಮೆಂಟ್ ಮೂಲಕ ತಿಳಿಸಿ.