ಬಿಗ್ ನ್ಯೂಸ್: ಕನ್ನಡತಿ ಮದುವೆಯ ಸಂಭ್ರಮದಲ್ಲಿ ಇರುವಾಗ ಅಮ್ಮಮ್ಮ ಪಾತ್ರದ ಕುರಿತು ಹೊರ ಬಿತ್ತು ಮಾಹಿತಿ, ಮುಂದೇನು ಆಗಲಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೆ ಇತ್ತೀಚಿನದಿನಗಳಲ್ಲಿ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ಧಾರಾವಾಹಿ ಆಗಿರುವ ಕನ್ನಡತಿ ಧಾರವಾಹಿ ಸಾಕಷ್ಟು ವಿಚಾರಗಳಿಗಾಗಿ ಪ್ರೇಕ್ಷಕರನ್ನು ಕುರ್ಚಿಯ ತುದಿಯಲ್ಲಿ ಕೂರುವಂತೆ ಮಾಡಿದೆ. ಮೊದಲನೇದಾಗಿ ಹೇಳುವುದಾದರೆ ಹರ್ಷ ಹಾಗೂ ಭುವಿ ಮದುವೆ ನಡೆಯುವುದು ಅನುಮಾನ ಎಂಬುದಾಗಿ ಎಲ್ಲರೂ ಕೂಡ ಭಾವಿಸಿದ್ದರು. ಅಮ್ಮಮ್ಮ ರತ್ನಮಾಲಾ ರವರ ಆಸೆಯಂತೆ ಹರ್ಷ ಹಸಿರುಪೇಟೆ ಟೀಚರನ್ನು ಮದುವೆಯಾಗಲು ಸಿದ್ದನಾಗಿದ್ದ.

ಆದರೆ ಆಸ್ತಿ ತಪ್ಪಿ ಹೋಗುತ್ತದೆ ಎನ್ನುವ ಕಾರಣಕ್ಕಾಗಿ ಸಾನಿಯಾ ಹಾಗೂ ತನ್ನ ಹೀರೋ ತಪ್ಪಿ ಹೋಗುತ್ತಾನೆ ಎನ್ನುವ ಕಾರಣಕ್ಕಾಗಿ ವರುದಿನಿ ಇಬ್ಬರೂ ಸೇರಿಕೊಂಡು ಈ ಮದುವೆಯನ್ನು ಆಗದಂತೆ ತಡೆಯಬೇಕು ಎನ್ನುವ ಕಾರಣಕ್ಕೆ ಶತಾಯಗತಾಯ ಎಂಬಂತೆ ಹಲವಾರು ಪ್ರಯತ್ನಗಳನ್ನು ಮಾಡಿದ್ದರು ಆದರೂ ಕೂಡ ಅದು ಫಲಕಾರಿಯಾಗಲಿಲ್ಲ ಇಬ್ಬರೂ ಕೂಡ ಈಗಾಗಲೇ ಮದುವೆಯಾಗಿದ್ದಾರೆ. ಮದುವೆಯಾದ ನಂತರ ಈಗ ಮತ್ತೊಂದು ವಿಚಾರ ಎಲ್ಲರ ಬೇಸರವನ್ನು ಹೆಚ್ಚಿಸುವಂತೆ ಮಾಡಬಹುದಾಗಿದೆ. ಧಾರವಾಹಿಯ ಆರಂಭದಿಂದಲೂ ಕೂಡ ಅಮ್ಮಮ್ಮ ಅವರ ಆರೋಗ್ಯದ ಕುರಿತಂತೆ ಹಲವಾರು ಅನುಮಾನಗಳನ್ನು ವ್ಯಕ್ತಪಡಿಸಲಾಗಿದೆ ಅವರಿನ್ನು ಬದುಕಿ ಬರುವುದು ಅನುಮಾನವೇ ಸರಿ ಎಂಬುದಾಗಿ ಎಲ್ಲರೂ ಹೇಳುತ್ತಿದ್ದರು.

ಬಿಗ್ ನ್ಯೂಸ್: ಕನ್ನಡತಿ ಮದುವೆಯ ಸಂಭ್ರಮದಲ್ಲಿ ಇರುವಾಗ ಅಮ್ಮಮ್ಮ ಪಾತ್ರದ ಕುರಿತು ಹೊರ ಬಿತ್ತು ಮಾಹಿತಿ, ಮುಂದೇನು ಆಗಲಿದೆ ಗೊತ್ತೇ?? 2

ಈಗ ಮದುವೆ ಮುಗಿಸಿಕೊಂಡು ಆಸ್ಪತ್ರೆಗೆ ತೆರಳಿರುವ ಅಮ್ಮಮ್ಮ ಮತ್ತೆ ಬರುವುದು ಅನುಮಾನವಾಗಿದೆ ಎಂಬುದಾಗಿದೆ. ಯಾಕೆಂದರೆ ನಿಜಜೀವನದಲ್ಲಿ ಈ ಪಾತ್ರವನ್ನು ನಿರ್ವಹಿಸುತ್ತಿರುವ ಚಿತ್ಕಲಾ ಬಿರಾದಾರ್ ರವರು ಅಮೇರಿಕಾಗೆ ತೆರಳಿರುವ ಫೋಟೋವನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಧಾರವಾಹಿಯಲ್ಲಿ ಕೂಡ ಅವರ ಪಾತ್ರ ಮುಗಿದಿರಬಹುದು ಹೀಗಾಗಿ ಅವರ ಕಥೆ ಧಾರವಾಹಿಯಲ್ಲಿ ಮುಗಿದಿರಬಹುದು ಎಂಬುದಾಗಿ ಎಲ್ಲರೂ ಕೂಡ ಲೆಕ್ಕಾಚಾರ ಹಾಕಲು ಪ್ರಾರಂಭಿಸಿದ್ದಾರೆ. ಈ ಬಗ್ಗೆ ನೀವೇನು ಹೇಳುತ್ತೀರಿ ಎಂಬುದನ್ನು ಕಾಮೆಂಟ್ ಮಾಡಿ ತಿಳಿಸಿ.