ನಮಸ್ಕಾರ ಸ್ನೇಹಿತರೇ ಪುರಾತನ ತಾಳೆಗರಿಗಳಿಗೂ ಹಾಗೂ ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕಿನ ಕೋಡಿ ಮಠಕ್ಕೂ ಎಲ್ಲಿಲ್ಲದ ನಂಟು. ಕೋಡಿ ಮಠದ ಶ್ರೀಗಳು ಹೇಳುವ ಭವಿಷ್ಯ ಹಲವಾರು ಭಾರಿ ರುಜುವಾತಾಗಿದೆ. ಜಗತ್ತು ಕೋವಿಡ್ ನಿಂದ ಸಾಕಷ್ಟು ಕಷ್ಟ ಹಾಗೂ ನಷ್ಟವನ್ನು ಅನುಭವಿಸುತ್ತದೆ ಎಂಬ ಸತ್ಯವನ್ನು ಕೋಡಿ ಮಠದ ಶ್ರೀಗಳು ಮೊದಲೇ ತಿಳಿಸಿದ್ದರು. ನಂತರ ಕೋವಿಡ್ ಜಗತ್ತಿಗೆ ಯಾವ ರೀತಿಯಲ್ಲಿ ಹಾನಿ ಮಾಡಿತು ಎಂಬುದು ನಿಮಗೆ ತಿಳಿದಿರುವ ಸತ್ಯ.
ಸಂಭವಿಸಬಹುದಾದ ಪ್ರಾಕೃತಿಕ ವಿಕೋಪಗಳು, ಅನಾರೋಗ್ಯ, ರಾಜಕೀಯ ವಿದ್ಯಮಾನಗಳುನ್ನು ಕೋಡಿಮಠದಲ್ಲಿರುವ ತಾಳೆಗರಿಗಳ ಸಹಾಯದಿಂದ ಕರಾರುವಕ್ಕಾಗಿ ನುಡಿಯುತ್ತಾರೆ. ಇತ್ತೀಚೆಗೆ ಮಾಧ್ಯಮಗಳ ಜೊತೆ ಮಾತನಾಡಿದ ಕೋಡಿ ಮಠದ ಶ್ರೀಗಳು ಮತ್ತೊಂದು ಜಗತ್ತಿನ ಭವಿಷ್ಯವನ್ನು ನುಡಿದಿದ್ದಾರೆ. ಸದ್ಯ ಕೊರೋನಾ ಮಹಾಮಾರಿಯ ಶಕ್ತಿ ಸಂಪೂರ್ಣವಾಗಿ ಕುಂದಿದೆ. ಮುಂದಿನ ದಿನಗಳಲ್ಲಿ ಅದು ಸಂಪೂರ್ಣವಾಗಿ ದುರ್ಬಲವಾಗಲಿದೆ.
ಮುಂದಿನ ದಿನಗಳಲ್ಲಿ ಲಾಕ್ ಡೌನ್ ನಂತಹ ಸಂಕಷ್ಟಗಳು ಜನತೆಗೆ ಬರುವುದಿಲ್ಲ. ಆದರೇ ಕೆಲವು ವರ್ಷಗಳ ನಂತರ ಗಾಳಿ ಗಂಡಾಂತರ ಎಂಬುದು ಬರುತ್ತದೆ. ಆ ಸಮಯದಲ್ಲಿ ಜನತೆಗೆ ತಿನ್ನಲು ಅನ್ನವಿಲ್ಲದೇ, ಕುಡಿಯಲು ನೀರು ಸಿಗದೇ ಪರದಾಡುತ್ತಾರೆ. ಅಂತಹ ಸಂದರ್ಭದಲ್ಲಿ ಅನೇಕ ಸಂಕಷ್ಟಗಳು ಮನುಕುಲಕ್ಕೆ ಬರುತ್ತವೆ ಎಂದು ಕೋಡಿ ಮಠದ ಶ್ರೀಗಳು ಹೇಳಿದ್ದಾರೆ. ಈಗಾಗಲೇ ಪೃಕೃತಿಗೆ ನೆಲ ಗಂಡಾಂತರ ಹಾಗೂ ಜಲ ಗಂಡಾಂತರ ಬಂದು ಸಾಕಷ್ಟು ಅವಾಂತರ ಎಬ್ಬಿಸಿದೆ. ಇನ್ಮುಂದೆ ಗಾಳಿ ಗಂಡಾಂತರವೂ ಸಹ ಬಂದು, ಬರಗಾಲ ಸೃಷ್ಠಿಸುತ್ತದೆ ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.