ಮೊದಲ ರಾಜರಾಣಿಯಲ್ಲಿ ಎಲ್ಲರ ಮನಗೆಲ್ಲುವಂತೆ ನಿರೂಪಣೆ ಮಾಡಿದ್ದ ಅನುಪಮಾ ಬದಲು, ಬೇರೆ ನಿರೂಪಕಿ ಬರಲು ಕಾರಣವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯ ರಿಯಾಲಿಟಿ ಶೋ ಕಾರ್ಯಕ್ರಮಗಳು ಈಗ ಒಂದಾದಮೇಲೊಂದರಂತೆ ಪ್ರೇಕ್ಷಕರಿಗೆ ಮನರಂಜನೆ ನೀಡಲು ಸ್ಪರ್ಧೆಗೆ ಬಿದ್ದವರಂತೆ ಪ್ರಸಾರವನ್ನು ಆರಂಭಿಸಿದ್ದಾರೆ. ಹೀಗಾಗಿ ಆ ಕಾರ್ಯಕ್ರಮಗಳನ್ನು ನಡೆಸಿಕೊಡುವ ವ್ಯಕ್ತಿಗಳನ್ನು ಕೂಡ ವಾಹಿನಿಯವರು ಪ್ರೇಕ್ಷಕರು ಆಕರ್ಷಿತರಾಗುವಂತೆ ಆಯ್ಕೆ ಮಾಡುತ್ತಾರೆ.

ಇಂದು ನಾವು ಮಾತನಾಡಲು ಹೊರಟಿರುವುದು ರಾಜ-ರಾಣಿ ಕಾರ್ಯಕ್ರಮದ ಕುರಿತಂತೆ. ಹೌದು ಗೆಳೆಯರೆ ಮೊದಲ ಆವೃತ್ತಿ ಈಗಾಗಲೇ ಯಶಸ್ವಿ ಯಿಂದ ಮುಗಿದಿದ್ದು ದೊಡ್ಡಮಟ್ಟದಲ್ಲಿ ಕಲರ್ಸ್ ಕನ್ನಡ ವಾಹಿನಿಗೆ ಯಶಸ್ಸನ್ನು ಈ ಕಾರ್ಯಕ್ರಮ ತಂದುಕೊಟ್ಟಿತ್ತು. ಈ ಕಾರ್ಯಕ್ರಮದಲ್ಲಿ ನಿರೂಪಕಿಯಾಗಿ ನಟಿ ಅನುಪಮ ಗೌಡರವರು ಕಾಣಿಸಿಕೊಂಡಿದ್ದರು. ಇವರ ಜೊತೆಗೆ ಕಾರ್ಯಕ್ರಮದ ತೀರ್ಪುಗಾರರಾಗಿ ಸೃಜನ್ ಲೋಕೇಶ್ ಹಾಗೂ ತಾರಾ ರವರು ಕಾಣಿಸಿಕೊಂಡಿದ್ದರು. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಿದ್ದಂತಹ ರಾಜ-ರಾಣಿ ರಿಯಾಲಿಟಿ ಶೋ ಕಾರ್ಯಕ್ರಮದ ಮೊದಲ ಆವೃತ್ತಿಯನ್ನು ನೇಹಾಗೌಡ ಹಾಗೂ ಚಂದನ್ ಇಬ್ಬರೂ ಗೆದ್ದುಕೊಂಡಿದ್ದರು. ದಂಪತಿಗಳ ನಡುವಿನ ಸಂಬಂಧವನ್ನು ಪ್ರೇಕ್ಷಕರಿಗೆ ತೋರ್ಪಡಿಸುವ ಕಾರ್ಯಕ್ರಮ ಇದಾಗಿತ್ತು.

ಮೊದಲ ರಾಜರಾಣಿಯಲ್ಲಿ ಎಲ್ಲರ ಮನಗೆಲ್ಲುವಂತೆ ನಿರೂಪಣೆ ಮಾಡಿದ್ದ ಅನುಪಮಾ ಬದಲು, ಬೇರೆ ನಿರೂಪಕಿ ಬರಲು ಕಾರಣವೇನು ಗೊತ್ತೇ?? 2

ರಾಜ-ರಾಣಿ ಕಾರ್ಯಕ್ರಮದ ಎರಡನೇ ಸೀಸನ್ ಕೂಡ ಇದೇ ಜೂನ್ 11 ರಿಂದ ಪ್ರಾರಂಭವಾಗಲಿದೆ ಎಂಬುದಾಗಿ ತಿಳಿದುಬಂದಿದ್ದು ಈ ಕಾರ್ಯಕ್ರಮ ಪ್ರಾರಂಭವಾಗುವ ಮುನ್ನವೇ ಅಭಿಮಾನಿಗಳಿಗೆ ಒಂದು ಬೇಸರದ ವಿಚಾರ ಹೊರಬಂದಿದೆ. ಹೌದು ಗೆಳೆಯರೆ ಮೊದಲ ಆವೃತ್ತಿಯ ಕಾರ್ಯಕ್ರಮವನ್ನು ಚೆನ್ನಾಗಿ ನಿರೂಪಣೆ ಮಾಡಿಕೊಟ್ಟಿದ್ದ ಅನುಪಮ ಗೌಡರವರು ಈ ಬಾರಿಯ ರಾಜ ರಾಣಿ ಸೀಸನ್-2 ಕಾರ್ಯಕ್ರಮದ ನಿರೂಪಣೆಯಿಂದ ಹೊರಬಂದಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಸದ್ಯದ ಮಟ್ಟಿಗೆ ಅನುಪಮಾ ಗೌಡರವರು ವೈಯಕ್ತಿಕ ಕಾರಣದಿಂದಾಗಿ ಈ ಕಾರ್ಯಕ್ರಮದಿಂದ ಹೊರ ಬಂದಿದ್ದಾರೆ ಎಂಬುದಾಗಿ ತಿಳಿದುಬಂದಿದ್ದು ಹೊಸ ನಿರೂಪಕರು ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ ಎಂಬುದಾಗಿ ತಿಳಿದುಬಂದಿದೆ. ಇದರಿಂದ ಅನುಪಮಾ ಗೌಡ ರವರ ಅಭಿಮಾನಿಗಳಿಗೆ ಬೇಸರವಾಗಿರುವುದು ಸುಳ್ಳಲ್ಲ.