ತನ್ನ ಕನಸನ್ನು ಈಡೇರಿಸಕೊಳ್ಳಲು ದಿನೇಶ್ ಕಾರ್ತಿಕ್ ರವರ ಹಾದಿ ಹಿಡಿದ ಸಂಜು ಸ್ಯಾಮ್ಸನ್. ಮಾಡಲು ಹೊರಟಿರುವುದು ಏನು ಗೊತ್ತೇ?

ನಮಸ್ಕಾರ ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಭಾರತೀಯ ಕ್ರಿಕೆಟ್ ತಂಡ ಹಾರ್ದಿಕ್ ಪಾಂಡ್ಯ ರವರ ನಾಯಕತ್ವದಲ್ಲಿ ಐರ್ಲ್ಯಾಂಡ್ ಗೆ ಬಂದು ಬೀಡುಬಿಟ್ಟಿದೆ. ಈಗಾಗಲೇ ಹಿರಿಯ ಆಟಗಾರರು ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಕ್ಕೆ ಹಾಜರಾಗಿರುವ ಕಾರಣದಿಂದಾಗಿ ಸಂಜೆ ಸ್ಯಾಮ್ಸಂಗ್ ಸೇರಿದಂತೆ ಹಲವಾರು ಆಟಗಾರರಿಗೆ ಈ ಸರಣಿಯಲ್ಲಿ ಅವಕಾಶ ನೀಡಲಾಗಿದೆ.
ನಿಮಗೆಲ್ಲರಿಗೂ ಗೊತ್ತಿರಬಹುದು ದಿನೇಶ್ ಕಾರ್ತಿಕ್ ರವರು ಮೂರು ವರ್ಷಗಳಿಂದ ಭಾರತೀಯ ಕ್ರಿಕೆಟ್ ತಂಡದಿಂದ ಹೊರಗಿದ್ದರೆ ಹೀಗಾಗಿ ಆರ್ಸಿಬಿ ತಂಡದಲ್ಲಿ ಅತ್ಯುತ್ತಮವಾಗಿ ಆಟ ಆಡುವ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿ ಸೌತ್ಆಫ್ರಿಕ ಸರಣಿಯಲ್ಲಿ ಕೂಡ ಮಿಂಚಿದ್ದರು.

ಐಪಿಎಲ್ ಸಂದರ್ಭದಲ್ಲಿ ಅವರು ಭಾರತೀಯ ಕ್ರಿಕೆಟ್ ತಂಡ ಕ್ಕಾಗಿ ವಿಶ್ವಕಪ್ ಗೆಲ್ಲಬೇಕು ಅದೇ ನನ್ನ ಆಸೆ ಎಂಬುದಾಗಿ ಹೇಳಿದ್ದರು. ಈಗ ಸಂಜು ಸ್ಯಾಮ್ಸನ್ ಅವ್ರು ಕೂಡ ತಂಡದಲ್ಲಿ ಆಯ್ಕೆಯಾಗಿದ್ದು ಅವರಿಗೂ ಕೂಡ ವಿಶ್ವಕಪ್ ಆಡುವ ಮಹದಾಸೆ ಜೋರಾಗಿಯೇ ಇದೆ. ಮುಂಚಿನಿಂದಲೂ ಕೂಡ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಆಡುತ್ತಿರುವ ಸಂಜು ಸ್ಯಾಮ್ಸನ್ ರವರು ಐಪಿಎಲ್ ನಲ್ಲಿ ಸಾಕಷ್ಟು ಭರ್ಜರಿಯಾಗಿ ಪ್ರದರ್ಶನವನ್ನು ನೀಡಿದರು ಆದರೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಅವ್ರು ಸದಾಕಾಲ ಇಂಜುರಿಯ ಕಾರಣದಿಂದಾಗಿ ಅತಿಥೇಯ ಆಟಗಾರನ ಹಾಗೆ ಆಗಾಗ ಬಂದುಹೋಗುತ್ತಿದ್ದರು. ಆದರೆ ಈಗ ಐರ್ಲೆಂಡ್ ಸರಣಿಗೆ ಆಯ್ಕೆಯಾಗಿರುವ ಅವರು ದುಬೈನಲ್ಲಿ ವಿಶೇಷವಾಗಿ ಟ್ರೈನಿಂಗ್ ಅನ್ನು ಪಡೆದುಕೊಂಡು ಬಂದಿದ್ದಾರೆ.

ತನ್ನ ಕನಸನ್ನು ಈಡೇರಿಸಕೊಳ್ಳಲು ದಿನೇಶ್ ಕಾರ್ತಿಕ್ ರವರ ಹಾದಿ ಹಿಡಿದ ಸಂಜು ಸ್ಯಾಮ್ಸನ್. ಮಾಡಲು ಹೊರಟಿರುವುದು ಏನು ಗೊತ್ತೇ? 2

ಒಂದು ವೇಳೆ ಐರ್ಲೆಂಡ್ ವಿರುದ್ಧದ ಸರಣಿಯಲ್ಲಿ ರನ್ ಹೊಳೆಯನ್ನು ಸುರಿಸಿ ನಂತರ ಇಂಗ್ಲೆಂಡ್ ವಿರುದ್ಧದ ಟಿ-ಟ್ವೆಂಟಿ ಸರಣಿಗೆ ತಂಡದಲ್ಲಿ ಆಯ್ಕೆಯಾಗಿ ಅಲ್ಲಿಯೂ ಕೂಡ ಭರ್ಜರಿ ಪ್ರದರ್ಶನವನ್ನು ನೀಡಿದರೆ ಮಾತ್ರ ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವ ಸಾಧ್ಯತೆ ಇದೆ. ಒಂದೇ ಒಂದು ಚೂರು ಎಡವಿದರು ಕೂಡ ಸಂಜು ಸಮ್ಸನ್ ರವರ ಸ್ಥಾನಕ್ಕೆ ಪೈಪೋಟಿಯನ್ನು ನೀಡುತ್ತಿರುವ ರಿಷಬ್ ಪಂತ್ ಇಶಾನ್ ಕಿಶನ್ ಹಾಗೂ ದಿನೇಶ್ ಕಾರ್ತಿಕ್ ರವರು ಮುನ್ನಡೆಯನ್ನು ಸಾಧಿಸಲಿದ್ದಾರೆ. ಹೀಗಾಗಿ ಇದು ಅವರ ಕೊನೆಯ ಅವಕಾಶ ಎಂದು ಹೇಳಬಹುದಾಗಿದೆ.