ಕೊನೆಗೂ ಸತ್ಯ ಬಯಲು ಮಾಡಿದ ಬುಲೆಟ್ ಪ್ರಕಾಶ್ ಪುತ್ರ ಪುನೀತ್ ರವರು ಮೇಲೆ ಅಪಾರವಾದ ಗೌರವವಿದೆ, ಆದರೆ.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ನಂತರ ಅವರು ಮಾಡಿರುವ ಸಾಮಾಜಿಕ ಕಾರ್ಯಗಳ ಕುರಿತಂತೆ ಒಂದೊಂದಾಗಿ ನಾವು ತಿಳಿದುಕೊಂಡು ಬರುತ್ತಾ ಬಂದಿದ್ದೇವೆ. ತಾವು ಬದುಕಿದಷ್ಟು ದಿನ ಕೋಟ್ಯಾಂತರ ರೂಪಾಯಿಗಳನ್ನು ಸಾಮಾಜಿಕ ಕಾರ್ಯಗಳಿಗಾಗಿ ಪುನೀತ್ ರಾಜಕುಮಾರ್ ಅವರು ಬಳಸಿಕೊಳ್ಳುತ್ತಿದ್ದರು ಆದರೆ ಅದರ ಕುರಿತಂತೆ ಎಲ್ಲಿಯೂ ಕೂಡ ಬಾಯಿಬಿಟ್ಟಿರಲಿಲ್ಲ.

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ರವರು ಕೇವಲ ತೆರೆಯ ಮೇಲೆ ಮಾತ್ರವಲ್ಲದೆ ತೆರೆಯ ಹಿಂದೆ ಕೂಡ ಹೀರೋ ಆಗಿದ್ದರು. ಕಷ್ಟ ಎಂದು ಬಂದವರಿಗೆ ಹಿಂದೆ ಮುಂದೆ ನೋಡದೆ ಅವರಿಗೆ ಬೇಕಾಗುವ ಸಹಾಯಗಳನ್ನು ಕ್ಷಣಮಾತ್ರದಲ್ಲಿ ಮಾಡಿಕೊಡುತ್ತಿದ್ದರು ನಮ್ಮ ನೆಚ್ಚಿನ ಯುವ ರತ್ನ. ಇನ್ನು ಇವರ ಮರಣಾನಂತರ ಇವರ ಸಮಾಜ ಕಾರ್ಯಗಳ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಲವಾರು ಪೋಸ್ಟ್ಗಳು ಇವರ ಸಾಮಾಜಿಕ ಕಳಕಳಿಯ ಕುರಿತಂತೆ ವಿವರವಾಗಿ ಹೇಳಿದ್ದವು. ಆದರೆ ಅದರಂತೆ ಕೆಲವು ಸುಳ್ಳು ಸುದ್ದಿಗಳು ಕೂಡ ಪೋಸ್ಟ್ ಆಗಿವೆ. ಹೌದು ಇದನ್ನು ನಾವು ಹೇಳುತ್ತಿಲ್ಲ ಬದಲಾಗಿ ಬುಲೆಟ್ ಪ್ರಕಾಶ್ ರವರ ಪುತ್ರ ರಕ್ಷಕ್ ಹೇಳುತ್ತಿದ್ದಾರೆ.

prakash punith | ಕೊನೆಗೂ ಸತ್ಯ ಬಯಲು ಮಾಡಿದ ಬುಲೆಟ್ ಪ್ರಕಾಶ್ ಪುತ್ರ ಪುನೀತ್ ರವರು ಮೇಲೆ ಅಪಾರವಾದ ಗೌರವವಿದೆ, ಆದರೆ.
ಕೊನೆಗೂ ಸತ್ಯ ಬಯಲು ಮಾಡಿದ ಬುಲೆಟ್ ಪ್ರಕಾಶ್ ಪುತ್ರ ಪುನೀತ್ ರವರು ಮೇಲೆ ಅಪಾರವಾದ ಗೌರವವಿದೆ, ಆದರೆ. 2

ಸಾಮಾಜಿಕ ಜಾಲತಾಣಗಳಲ್ಲಿ ಬುಲೆಟ್ ಪ್ರಕಾಶ್ ರವರ ನಿಧನದ ನಂತರ ಅಪ್ಪು ಅವರು ಅವರ ಮನೆಗೆ ಭೇಟಿ ನೀಡಿ ಅವರ ಮಗನಾಗಿರುವ ರಕ್ಷಕ್ ಬಳಿ 5ಲಕ್ಷ ನೀಡಿದ್ದಾರೆ ಎಂದು ಅವರೇ ಹೇಳಿರುವ ಮಾದರಿಯಲ್ಲಿ ಪೋಸ್ಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗಿದೆ. ಇನ್ನು ಇದರ ಕುರಿತಂತೆ ಪ್ರತಿಕ್ರಿಯಿಸಿರುವ ರಕ್ಷಕ್ ಅವರು ಪುನೀತ್ ರಾಜಕುಮಾರ್ ರವರ ಮೇಲೆ ನನಗೆ ಸಾಕಷ್ಟು ಗೌರವವಿದೆ ಆದರೆ ತಂದೆಯ ನಿಧನದ ನಂತರ 5 ಲಕ್ಷ ಕೊಟ್ಟಿದ್ದಾರೆ ಎಂಬ ಮಾಹಿತಿ ಸುಳ್ಳು ಎಂಬುದಾಗಿ ಹೇಳಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.