ಹಾವಿಗೆ ಹೆದರಿ ಇದ್ದ ಮನೆ ಖಾಲಿ ಮಾಡಿದ ಕನ್ನಡದ ನಟ ಯಾರು ಗೊತ್ತೇ?? ಅಸಲಿಗೆ ಅಲ್ಲಿ ನಡೆದ್ದದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ದುನಿಯಾ ಈಗ ಎಷ್ಟೇ ಆಧುನಿಕವಾಗಿ ಬೆಳೆದಿದ್ದರೂ ಕೂಡ ಒಂದು ನಂಬಿಕೆ ಆಚರಣೆ ಅಂದಿನಿಂದ ಇಂದಿನ ಕಾಲದವರೆಗೂ ಕೂಡ ಅದೇ ರೀತಿಯಾಗಿ ನಡೆದುಕೊಂಡು ಬಂದಿರುತ್ತದೆ. ನಮ್ಮ ಸನಾತನ ಧರ್ಮದಲ್ಲಿ ಪುರಾತನಕಾಲದಿಂದಲೂ ಕೂಡ ಪ್ರಾಣಿ ಪಕ್ಷಿಗಳನ್ನು ಪರಿಸರವನ್ನು ನಾವು ದೈವ ಸಮಾನವಾಗಿ ಪೂಜಿಸಿಕೊಂಡುಬಂದ ವರು.

ಇದೇನಪ್ಪ ಇಂದು ಈ ರೀತಿಯ ವಿಷಯಗಳನ್ನು ಹೇಳುತ್ತಿದ್ದಾರೆ ಎಂದು ನೀವು ಅಂದುಕೊಳ್ಳಬಹುದು ಸ್ನೇಹಿತರೆ. ಇದಕ್ಕೆ ಮುಖ್ಯವಾದ ಕಾರಣವೊಂದಿದೆ ಅದೇನೆಂದರೆ ಇದು ನೇರವಾಗಿ ಸಂಬಂಧಪಟ್ಟಿರುವುದಿಲ್ಲ ಚಿತ್ರರಂಗದ ಖ್ಯಾತ ನಟರ ಕುರಿತಂತೆ. ಹೌದು ಸ್ನೇಹಿತರೆ ನಿಮಗೆಲ್ಲ ಪಂಚಭಾಷಾ ನಟಿ ಕುಷ್ಬೂ ರವರ ಕುರಿತಂತೆ ಗೊತ್ತೇ ಇರುತ್ತದೆ. ಕುಷ್ಬೂ ರವರು ಚೆನ್ನೈನ ಸಾಲಿಗ್ರಾಮದ ಬಳಿ ಒಂದು ಮನೆಯನ್ನು ಖರೀದಿಸುತ್ತಾರೆ. ಕೆಲವರ ಪ್ರಕಾರ ಆ ಮನೆಯಲ್ಲಿ ಹಿಂದೆ ಒಂದು ದೊಡ್ಡ ಹಾವಿನ ಹುತ್ತ ಇತ್ತಂತೆ. ಖುಷ್ಬು ರವರು ಈ ಮನೆಯನ್ನು ಖರೀದಿಸಿದ ನಂತರ ಅಲ್ಲೇ ಇರಲು ಪ್ರಾರಂಭಿಸಿದರು. ಆದರೆ ಇದಾದ ಕೆಲವೇ ದಿನಗಳಲ್ಲಿ ಕುಷ್ಬೂ ರವರ ಆರ್ಥಿಕ ಸ್ಥಿತಿ ಕೆಳಮಟ್ಟಕ್ಕೆ ಹೋಗಲು ಆರಂಭವಾಯಿತು. ಹೌದು ಸ್ನೇಹಿತರೆ ಇದಕ್ಕೆ ಮುಖ್ಯ ಕಾರಣ ಹಾವು ಎನ್ನುವುದು ತಿಳಿದುಬರುತ್ತದೆ.

ಇನ್ನು ಎಲ್ಲೆಂದರಲ್ಲಿ ಖುಷ್ಬೂ ರವರಿಗೆ ಹಾವು ಕಾಣಲು ಪ್ರಾರಂಭವಾಗುತ್ತದೆ ಇದರಿಂದಾಗಿ ವಿಪರೀತವಾಗಿ ಟೆನ್ಶನ್ ಮಾಡಿಕೊಂಡು ಈ ಮನೆಯನ್ನು ಮಾರಾಟಕ್ಕೆ ಇರುತ್ತಾರೆ. ಇನ್ನು ಈ ಮನೆಯನ್ನು ಆ ಕಾಲಕ್ಕೆ ದಕ್ಷಿಣ ಭಾರತದ ಬಹುಬೇಡಿಕೆಯ ನಟರಾಗಿ ಇದ್ದಂತಹ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ರವರು ಖರೀದಿಸುತ್ತಾರೆ. ಅರ್ಜುನ್ ಸರ್ಜಾ ರವರಿಗೆ ಈ ಮನೆಯನ್ನು ತೆಗೆದುಕೊಳ್ಳಬೇಡ ಇಲ್ಲಿ ಹಾವಿನ ದೋಷ ಇದೆ ಎಂದು ಹೇಳಿದರೂ ಕೂಡ ಅದನ್ನು ಕೇಳದೆ ತೆಗೆದುಕೊಳ್ಳುತ್ತಾರೆ ಮತ್ತು ಮನೆಯಲ್ಲಿ ಹೋಮ-ಹವನಗಳು ಪೂಜೆಯನ್ನು ಕೂಡ ಮಾಡುತ್ತಾರೆ. ಆದರೆ ದಿನಕಳೆದಂತೆ ಅರ್ಜುನ್ ಸರ್ಜಾರ ಅವರಿಗೂ ಕೂಡ ಇಲ್ಲಿ ಹಾವಿನ ಸಮಸ್ಯೆ ಎದುರಾಗುತ್ತದೆ ಎಲ್ಲೆಂದರಲ್ಲಿ ಹಾವು ಕಾಣಸಿಗುತ್ತದೆ. ಕೊನೆಗೆ ಯಾವುದೇ ದಾರಿಕಾಣದೆ ಅರ್ಜುನ್ ಸರ್ಜಾ ರವರು ಕೂಡ ಈ ಮನೆಯನ್ನು ಖಾಲಿ ಮಾಡಿಕೊಂಡು ಹೋಗುತ್ತಾರೆ. ಈಗಲೂ ಕೂಡ ಈ ಮನೆಯಲ್ಲಿ ಹಾವಿನ ಹುತ್ತ ಬೆಳೆದಿದ್ದು ಇಲ್ಲಿ ಎಲ್ಲರೂ ಬಂದು ಪೂಜೆ ಸಲ್ಲಿಸುತ್ತಾರೆ ಎಂಬ ಸುದ್ದಿ ಕೇಳಿ ಬರುತ್ತದೆ.

Comments are closed.