ಡಾಲಿ ಧನಂಜಯ್ ಇಷ್ಟದ ಮಟ್ಟಕ್ಕೆ ಬೆಳೆಯಲಿ ಯಾರು ಕಾರಣ ಗೊತ್ತೇ?? ಗಾಡ್ ಫಾದರ್ ನಂತೆ ನಿಂತು ಬೆಳೆಸಿದ ಕಾಣದ ಕೈ ಯಾರದು ಗೊತ್ತೆ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಡಾಲಿ ಧನಂಜಯ್ ರವರಿಗೆ ಅತ್ಯಂತ ಹೆಚ್ಚು ಯಶಸ್ಸು ತಂದು ಕೊಟ್ಟಿರುವ ಚಿತ್ರವೆಂದರೆ ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ಟಗರು ಚಿತ್ರದಲ್ಲಿ ಪಾತ್ರ. ಅಲ್ಲಿಯವರೆಗೂ ಕೂಡ ಡಾಲಿ ಧನಂಜಯ್ ರವರು ಆಗೊಮ್ಮೆ-ಈಗೊಮ್ಮೆ ಬಿಡುಗಡೆಯಾಗುವ ಕನ್ನಡ ಚಿತ್ರದ ನಾಯಕನಾಗಿ ಕಾಣಿಸಿಕೊಂಡಿದ್ದರು. ಅವರಿಗೆ ಸರಿಹೊಂದುವಂತಹ ಪಾತ್ರವನ್ನು ಆಗಲಿ ಕತೆಯನ್ನು ಆಗಲಿ ಯಾವ ನಿರ್ದೇಶಕ ನಿರ್ಮಾಪಕರು ಕೂಡ ಸಿನಿಮಾ ಮಾಡಿರಲಿಲ್ಲ.

ಟಗರು ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಭರವಸೆಯ ನಾಯಕನಟನೊಬ್ಬ ಸಿಗುವಂತೆ ಆಯಿತು ಎಂದರೆ ಖಂಡಿತವಾಗಿ ತಪ್ಪಾಗಲಾರದು. ಇನ್ನು ಟಗರು ಚಿತ್ರದ ನಂತರ ಡಾಲಿ ಧನಂಜಯ್ ಅವರ ಪ್ರತಿಭೆಯ ಅನಾವರಣ ಕನ್ನಡ ಚಿತ್ರರಂಗಕ್ಕೆ ಆಗಿದ್ದು ಹಲವಾರು ಪ್ರಮುಖ ಪಾತ್ರದಲ್ಲಿ ಧನಂಜಯ್ ರವರು ಕಾಣಿಸಿಕೊಂಡಿದ್ದು ಇತ್ತೀಚಿಗೆ ತೆಲುಗು ಚಿತ್ರರಂಗದ ಪುಷ್ಪ ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಇನ್ನು ಈಗ ಡಾಲಿ ಧನಂಜಯ್ ನಟಿಸಿ ನಿರ್ಮಿಸಿರುವ ಬಡವ ರಾಸ್ಕಲ್ ಚಿತ್ರ ಇದೇ ಡಿಸೆಂಬರ್ 24ರಿಂದ ರಾಜ್ಯದ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ತೆರೆಕಾಣಲಿದೆ. ಇದೇ ವಿಶೇಷವಾಗಿ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮವನ್ನು ಕೂಡ ಹಮ್ಮಿಕೊಳ್ಳಲಾಗಿತ್ತು.

daali dhananjaya | ಡಾಲಿ ಧನಂಜಯ್ ಇಷ್ಟದ ಮಟ್ಟಕ್ಕೆ ಬೆಳೆಯಲಿ ಯಾರು ಕಾರಣ ಗೊತ್ತೇ?? ಗಾಡ್ ಫಾದರ್ ನಂತೆ ನಿಂತು ಬೆಳೆಸಿದ ಕಾಣದ ಕೈ ಯಾರದು ಗೊತ್ತೆ??
ಡಾಲಿ ಧನಂಜಯ್ ಇಷ್ಟದ ಮಟ್ಟಕ್ಕೆ ಬೆಳೆಯಲಿ ಯಾರು ಕಾರಣ ಗೊತ್ತೇ?? ಗಾಡ್ ಫಾದರ್ ನಂತೆ ನಿಂತು ಬೆಳೆಸಿದ ಕಾಣದ ಕೈ ಯಾರದು ಗೊತ್ತೆ?? 2

ಈ ಕಾರ್ಯಕ್ರಮಕ್ಕೆ ಕರುನಾಡ ಚಕ್ರವರ್ತಿ ಶಿವಣ್ಣ ಹಂಸಲೇಖ ಲೂಸ್ ಮಾದ ಯೋಗಿ ನಿನಾಸಂ ಸತೀಶ್ ಹೀಗೆ ಹಲವಾರು ಗಣ್ಯರು ಕೂಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಾದಬ್ರಹ್ಮ ಹಂಸಲೇಖ ರವರು ಡಾಲಿ ಧನಂಜಯ್ ರವರ ಗುಣಗಾನವನ್ನು ಮಾಡಿದ್ದಾರೆ. ಅವರ ಗಾಡ್ಫಾದರ್ ನಿಂದಾಗಿ ಇಂದಿಗೂ ಕೂಡ ಡಾಲಿ ಧನಂಜಯ್ ರವರು ಚಿತ್ರರಂಗದಲ್ಲಿ ಸಾಕಷ್ಟು ಯಶಸ್ವಿಯಿಂದ ಕಂಡುಬರುತ್ತಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಹೌದು ನಾದಬ್ರಹ್ಮ ಹಂಸಲೇಖ ರವರು ಧನಂಜಯ್ ಅವರಲ್ಲಿರುವ ವಿನಯತೆಯೇ ಅವರ ಗಾಡ್ ಫಾದರ್ ಆ ವಿನಯದಿಂದಾಗಿಯೇ ಇಂದಿಗೂ ಕೂಡ ಎಲ್ಲರ ಅಚ್ಚುಮೆಚ್ಚಾಗಿ ದ್ದಾರೆ ನಮ್ಮ ಧನಂಜಯ್ ಎಂಬುದಾಗಿ ಹೇಳಿದ್ದಾರೆ. ಇಷ್ಟೊಂದು ಡಾಲಿ ಧನಂಜಯ್ ರವರು ಬೆಳವಣಿಗೆ ಹೊಂದಲು ಕಾರಣ ಕೂಡ ಅದೇ ವಿನಯತೆ ಎಂಬುದಾಗಿ ಎಲ್ಲರಿಗೂ ಮನದಟ್ಟಾಗುವಂತೆ ಹಂಸಲೇಖರವರು ತಿಳಿಸಿದ್ದಾರೆ.

Comments are closed.