ಧಾರವಾಹಿ ಅಷ್ಟೇ ಅಲ್ಲಾ, ಸಿನಿಮಾಗಳಲ್ಲೂ ಕೂಡ ಬ್ಯುಸಿಯಾಗಿರುವ ನಟ ನಟಿಯರ ಬಗ್ಗೆ ನಿಮಗೆಷ್ಟು ಗೊತ್ತು? ಎಷ್ಟು ಬ್ಯಾಲೆನ್ಸ್ ಮಾಡುತ್ತಿದ್ದಾರೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಇತ್ತೀಚಿಗೆ ಧಾರಾವಾಹಿಗಳಲ್ಲಿ ಹೊಸ ಮುಖಗಳನ್ನು ಪರಿಚಯಿಸಲಾಗುತ್ತಿದೆ. ಪ್ರಮುಖ ಪಾತ್ರಗಳಲ್ಲಿ ಹೊಸ ಹೊಸ ಕಲಾವಿದರು ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನು ಹೊಸಬರು ಎಂದು ಹೇಳುವುದಕ್ಕೂ ಸಾಧ್ಯವಿಲ್ಲದಷ್ಟು, ಅನುಭವವಿದ್ದಷ್ಟೇ ಪಕ್ವವಾಗಿ ನಟಿಸುತ್ತಿರುವುದು ಈ ಕಲಾವಿದರ ಪ್ಲಸ್ ಪಾಯಿಂಟ್. ಹಾಗಾಗಿಯೇ ಧಾರಾವಾಹಿಗೆ ಬಂದು ಕೆಲವೇ ತಿಂಗಳುಗಳಲ್ಲಿ ಕನ್ನಡಿಗರ ಮೆಚ್ಚುಗೆ ಪಡೆಯುವುದು ಮಾತ್ರವಲ್ಲದೇ, ಸಿನಿಮಾಗಳಲ್ಲಿಯೂ ಕೂಡ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕೆಲವರು ಸಿನಿಮಾಕ್ಕಾಗಿ ಧಾರಾವಾಗಿ ನಟನೆಯನ್ನು ನಿಲ್ಲಿಸಿದರೆ, ಇನ್ನೂ ಕೆಲವರು ಇವೆರಡನ್ನೂ ಚೆನ್ನಾಗಿ ಬ್ಯಾಲೆನ್ಸ್ ಮಾಡಿಕೊಂಡು ಹೋಗುತ್ತಿದ್ದಾರೆ. ಯಾರು ಗೊತ್ತಾ ಅಂಥ ನಟ ನಟಿಯರು!

ಮೇಘಾ ಶೆಟ್ಟಿ: ‘ಜೊತೆ ಜೊತೆಯಲಿ’ ಧಾರಾವಾಹಿಯಲ್ಲಿ ಅನು ಸಿರಿಮನೆ ಪಾತ್ರದ ಮೂಲಕ ಫೇಮಸ್ ಆಗಿರುವ ಕರಾವಳಿಯ ಬೆಡಗಿ ಮೇಘಾ ಶೆಟ್ಟಿ ಈಗಾಗಲೇ ಸಾವಿರಾರು ಫಾಲೋವರ್ಸ್ ನ್ನು ಗಳಿಸಿಕೊಂಡಿದ್ದಾರೆ. ಮೊದಲ ಬಾರಿಗೆ ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದರೂ, ನಟನೆಗೆ ಬಂದ ವರ್ಷಗಳಲ್ಲೇ ಆಲ್ಪಂ ಸಾಂಗ್, ಜಾಹೀರಾತು, ಸಿನಿಮಾಗಳಲ್ಲಿಯೂ ತೊಡಗಿಕೊಂಡಿದ್ದಾರೆ. ಸದ್ಯ ನಟಿ ಮೇಘಾ ತ್ರಿಬ್ಬಲ್ ರೈಡಿಂಗ್, ದಿಲ್ ಪಸಂದ್ ಚಿತ್ರಗಳಲ್ಲಿ ನಟಿಸುತ್ತಿದ್ದು, ಧಾರಾವಾಹಿಯಲ್ಲೂ ನಟಿಸಲು ಸಮಯ ಹೊಂದಿಸಿಕೊಳ್ಳುತ್ತಿದ್ದಾರೆ ಮೇಘಾ ಶೆಟ್ಟಿ.

abhi meghana | ಧಾರವಾಹಿ ಅಷ್ಟೇ ಅಲ್ಲಾ, ಸಿನಿಮಾಗಳಲ್ಲೂ ಕೂಡ ಬ್ಯುಸಿಯಾಗಿರುವ ನಟ ನಟಿಯರ ಬಗ್ಗೆ ನಿಮಗೆಷ್ಟು ಗೊತ್ತು? ಎಷ್ಟು ಬ್ಯಾಲೆನ್ಸ್ ಮಾಡುತ್ತಿದ್ದಾರೆ ಗೊತ್ತೇ??
ಧಾರವಾಹಿ ಅಷ್ಟೇ ಅಲ್ಲಾ, ಸಿನಿಮಾಗಳಲ್ಲೂ ಕೂಡ ಬ್ಯುಸಿಯಾಗಿರುವ ನಟ ನಟಿಯರ ಬಗ್ಗೆ ನಿಮಗೆಷ್ಟು ಗೊತ್ತು? ಎಷ್ಟು ಬ್ಯಾಲೆನ್ಸ್ ಮಾಡುತ್ತಿದ್ದಾರೆ ಗೊತ್ತೇ?? 2

ಅಭಿಷೇಕ್ ದಾಸ್: ಧಾರಾವಾಹಿಯ ಜೊತೆ ಸಿನಿಮಾದಲ್ಲೂ ಬ್ಯುಸಿಯಾಗಿರುವ ಇನ್ನೊಬ್ಬ ನಟ ಅಭಿಷೇಕ್. ಗಟ್ಟಿಮೇಳ ಧಾರಾವಾಹಿಯಲ್ಲಿ ವಿಕ್ರಾಂತ್ ವಸಿಷ್ಠ ಪಾತ್ರದಲ್ಲಿ ಕಣಿಸಿಕೊಂಡ ಇವರು ಪ್ರೇಕ್ಷಕರಿಗೆ ಹತ್ತಿರವಾಗಿದ್ದು ಈ ಪಾತ್ರದ ಮೂಲಕವೇ. ಈಗ ಧಾರಾವಾಹಿ ಮಾತ್ರವಲ್ಲ, ಸಾಲು ಸಾಲು ಸಿನಿಮಾಗಳಲ್ಲಿಯೂ ಬ್ಯುಸಿಯಾಗಿದ್ದಾರೆ. ಈಗಾಗಲೇ ಅಂಬಿ ನಿಂಗ್ ವಯಸ್ಸಾಯ್ತೋ, ಶಾರ್ಟ್ ಥ್ರಿಲ್ಲರ್ ಚಿತ್ರಗಳಲ್ಲಿ ಅಭಿನಯಿಸಿದ್ದು, ಇದೀಗ ಎರಡು ಹೊಸ ಚಿತ್ರಗಳಿಗೂ ಸಹಿ ಹಾಕಿದ್ದಾರೆ. ಸದ್ಯ ‘ನಗುವಿನ ಹೂಗಳ ಮೇಲೆ’ ಚಿತ್ರದ ನಟನೆಯಲ್ಲಿ ಬ್ಯುಸಿಯಾಗಿದ್ದರೂ ಧಾರಾವಾಹಿ ನಟನೆ ಬಿಡದೇ ಎರಡನ್ನೂ ಸಮವಾಗಿ ಬ್ಯಾಲೆನ್ಸ್ ಮಾಡುತ್ತಿದ್ದಾರೆ.

ಸ್ವಾಮಿನಾಥನ್ ಅನಂತರಾಮನ್: ಕರ್ಲಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಮಿಥುನ ರಾಶಿ’ ಧಾರಾವಾಹಿಯಲ್ಲಿ ಪ್ರಮುಖ ಪಾತ್ರವಾದ ಮಿಥುನ್ ಆಗಿ ಸ್ವಾಮಿನಾಥನ್ ಅನಂತರಾಮನ್ ಖ್ಯಾತಿಗಳಿಸಿದ್ದಾರೆ. ಇದೀಗ ಸಿನಿಮಾ ನಟನೆಯ ಕಡೆಗೂ ಒಲವು ತೋರಿಸಿರುವ ಸ್ವಾಮಿನಾಥನ್ ಆಯುರ್ವೇದ ವೈದ್ಯನಾಗಿ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಪರಮೇಶ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರ ಐದು ಭಾಷೆಯಲ್ಲಿ ಬಿಡುಗಡೆ ಆಗುತ್ತಿದ್ದು, ನಟ ರಾಘವೇಂದ್ರ ರಾಜ್ ಕುಮಾರ್ ಕೂಡ ಇದರಲ್ಲಿದ್ದಾರೆ. ಮೊದಲ ಸಿರಿಯಲ್ ಮಿಥುನ ರಾಶಿಯ ನಟನೆಯನ್ನು ಮುಂದುವರಿಸುತ್ತಾ, ಹಿರಿತೆರೆಯ ನಟನೆಯ ಕಡೆಗೂ ಗಮನಹರಿಸಿದ್ದಾರೆ.

ಚಂದನ್ ಕುಮಾರ್: ಹಿರಿತೆರೆ ಮತ್ತು ಕಿರುತೆರೆ ಎರದೂ ಪರದೆಯ ಮೇಲೆ ಕಾಣಿಸಿಕೊಳ್ಳುತ್ತಿರುವ ಕಲಾವಿದರ ಪೈಕಿ ಚಂದನ್ ಕುಮಾರ್ ಕೂಡ ಒಬ್ಬರು. ಕಿರುತೆರೆಯ ಕೆಲವು ಹೆಸರಾಂತ ಧಾರಾವಾಹಿಗಳಲ್ಲಿ ನಟಿಸಿರುವ ಚಂದನ್ ಇತ್ತೀಚಿಗಷ್ಟೇ ನಟಿ ಕವಿತಾ ಗೌಡ ಅವರ ಜೊತೆಗೆ ದಾಂಪತ್ಯ ಜೀವನಕ್ಕೂ ಕಾಲಿಟ್ಟಿದ್ದಾರೆ. ರಾಧ ಕಲ್ಯಾಣ, ಲಕ್ಷ್ಮೀ ಬಾರಮ್ಮ, ಸರ್ವಮಂಗಳ ಮಾಂಗಲ್ಯೆ ಮೊದಲಾದ ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ. ಪ್ರಸ್ತುತ ಮರಳಿ ಮನಸಾಗಿದೆ ಸೀರಿಯಲ್ ನಲ್ಲಿ ನಟಿಸುತ್ತಿರುವ ಚಂದನ್ ಕೆಲವು ಕನ್ನಡ ಚಿತ್ರಗಳಲ್ಲಿ ಈಗಾಗಲೇ ನಟಿಸಿದ್ದಾರೆ. ಮಾತ್ರವಲ್ಲ ತಮಿಳು ಚಿತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ. ಈಗ ತೆಲುಗು ಭಾಷೆಯ ಸೀರಿಯಲ್ ನಲ್ಲಿಯೂ ಕೂಡ ನಟಿಸುತ್ತಿದ್ದಾರೆ.

Comments are closed.