ಸನ್ರೈಸರ್ಸ್ ಒಡತಿ ಕಾವ್ಯ ಮಾರನ್ ರವರ ಕುರಿತು ಶಾಕಿಂಗ್ ಹೇಳಿಕೆ ನೀಡಿದ ಗೌತಮ್ ಗಂಭೀರ್ ! ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಗೌತಮ್ ಗಂಭೀರ್ ಅವರು ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕ್ರಿಕೆಟ್ನ ಕುರಿತು ವ್ಯಕ್ತಪಡಿಸಿರುವ ಅಭಿಪ್ರಾಯಗಳು ಬಹುತೇಕ ಸಫಲವಾಗುತ್ತಿಲ್ಲ, ಅದರಲ್ಲಿಯೂ ಆರ್ ಸಿ ಬಿ ತಂಡವನ್ನು ಕಂಡರೆ ಗಂಭೀರ್ ರವರಿಗೆ ಬಹುತೇಕ ಇಷ್ಟವಿಲ್ಲ ಎಂಬಂತೆ ಕಾಣುತ್ತಿದೆ. ಯಾಕೆಂದರೆ ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ಅವರ ನಡುವೆ ಹಲವಾರು ಪಂದ್ಯಗಳಲ್ಲಿ ಕಹಿ ಘಟನೆಗಳು ನಡೆದಿವೆ.

ಅದೇ ಕಾರಣಕ್ಕಾಗಿ ಬಹುತೇಕ ಸಂದರ್ಭದಲ್ಲಿ ಗೌತಮ್ ಗಂಭೀರ್ ಅವರು ವಿರಾಟ್ ಕೊಹ್ಲಿ ಹಾಗೂ ವಿರಾಟ್ ಕೊಹ್ಲಿ ರವರು ಪಾಲ್ಗೊಳ್ಳುತ್ತಿರುವ ಯಾವುದೇ ತಂಡ ಆಗಿರಲಿ ಅದು ಆರ್ಸಿಬಿ ಅಥವಾ ಭಾರತೀಯ ಕ್ರಿಕೆಟ್ ತಂಡ ವಾಗಿರಲಿ ಅದರ ಕುರಿತು ಹಾಗೂ ಆಟಗಾರರ ಆಯ್ಕೆಗಳ ಕುರಿತು ಮಾತನಾಡುತ್ತಾ ನಾಯಕನನ್ನು ಬದಲಾಯಿಸಬೇಕು ಅಥವಾ ಪಂದ್ಯ ಗೆಲ್ಲಲು ಸಾಧ್ಯವಾಗುವುದಿಲ್ಲ ಎಂಬ ಒಂದು ರೀತಿಯ ಕಮೆಂಟ್ ಮಾಡುತ್ತಾರೆ ಎಂದರೆ ತಪ್ಪಾಗಲಾರದು. ಆದರೆ ಇವರ ಹೇಳಿಕೆಗಳು ಬಾರಿ ಟ್ರೋಲ್ ಗೆ ಗುರಿಯಾಗುತ್ತವೆ.

ಆದರೆ ಇದೀಗ ಮೊನ್ನೆ ಆರ್ಸಿಬಿ ತಂಡ ಸನ್ ರೈಸಸ್ ತಂಡದ ಜೊತೆಗಿನ ಪಂದ್ಯದಲ್ಲಿ ಕಾವ್ಯ ಮಾರನ್ ರವರು ಸನ್ರೈಸರ್ಸ್ ತಂಡ ಸೋಲುತ್ತಿದ್ದಾಗ ತೆಗೆದ ಫೋಟೋಗಳು ವೈರಲ್ ಆದ ತಕ್ಷಣ, ಕೆಲವರು ಕಾವ್ಯ ಮಾರನ್ ಯಾಕೆ ಬರಬೇಕಾಗಿತ್ತು ಎಂದು ಪ್ರಶ್ನೆ ಕೇಳಿದಾಗ ಅಲ್ಲಿಯೂ ಕೂಡ ಆರ್ಸಿಬಿ ತಂಡವನ್ನು ಎಳೆದು ತಂದಿರುವ ಗೌತಮ್ ಗಂಭೀರ್ ಅವರು, ನಾನು ಕೊಲ್ಕತ್ತಾ ತಂಡದಲ್ಲಿ ಆಟವಾಡುವಾಗ ಶಾರುಖ್ ಖಾನ್ ರವರು ಇದ್ದರೆ ನನಗೆ ಒಂದು ರೀತಿಯ ಸ್ಪೂರ್ತಿ ಬರುತ್ತಿತ್ತು ತಂಡಕ್ಕೆ ಒಂದು ರೀತಿಯ ಬಲ ಬರುತ್ತಿತ್ತು ಅದೇ ರೀತಿ ಇದೀಗ ಆರ್ಸಿಬಿ ತಂಡದ ವಿರುದ್ಧ ಸನ್ರೈಸರ್ಸ್ ತಂಡಕ್ಕೆ ಬಲತುಂಬಲು ಕಾವ್ಯ ಮಾರನ್ ಬಂದಿದ್ದರು, ಆರ್ಸಿಬಿಬಿ ಸೋಲಿನಿಂದ ಜಸ್ಟ್ ಮಿಸ್ ಆಗಿದೆ ಎಂದು ಹೇಳಿಕೆ ನೀಡುವ ಮೂಲಕ ನಿಜಕ್ಕೂ ಇದು ಟ್ರೋಲ್ ಮಾಡಲು ಕೂಡ ಯೋಗ್ಯವಲ್ಲದ ಹೇಳಿಕೆ ಎಂದು ಜನ ಅಭಿಪ್ರಾಯಪಟ್ಟಿದ್ದಾರೆ.

Comments are closed.