ಇದ್ದಕ್ಕಿದ್ದ ಹಾಗೆ ಗುಡಿಸಿಲಿನಲ್ಲಿ ವಾಸಿಸುವ ಹುಡುಗಿಯ ಜೀವನಕ್ಕೆ ಬಂದ ಕೋಟ್ಯಾಧಿಪತಿ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಸಿನಿಮಾಗಳಲ್ಲಿ ಬಡ ಹುಡುಗನನ್ನು ಶ್ರೀಮಂತ ಹುಡುಗಿ ಪ್ರೀತಿಸಿ ವಿವಾಹವಾಗುವುದು ಹಾಗೂ ಶ್ರೀಮಂತ ಹುಡುಗ ಬಡ ಹುಡುಗಿಯನ್ನು ಪ್ರೀತಿಸಿ ವಿವಾಹವಾಗುವುದು ನೋಡಿರುತ್ತೀರಿ ಇದು ಕೇವಲ ಸಿನಿಮಾದಲ್ಲಿ ಅಷ್ಟೇ ನೋಡಲು ಚಂದ ಎಂದು ಹೇಳಲು ಹಲವಾರು ಜನ ಇದ್ದಾರೆ. ಇದನ್ನು ನಿಜಜೀವನದಲ್ಲಿ ನಡೆದಿದೆಯೆಂದರೆ ಕೇಳಲು ಯಾರು ಕೂಡ ತಯಾರಿರುವುದಿಲ್ಲ ಕೇಳಿದರೂ ಸಹ ನಂಬಲು ಯಾರು ತಯಾರಿರುವುದಿಲ್ಲ. ಆದರೆ ಇದನ್ನು ನೀವು ನಂಬಲೇಬೇಕು ನಿಜ ಜೀವನದಲ್ಲಿ ಕೂಡ ಇಂತಹ ಘಟನೆಗಳು ನಡೆದಿದೆ ಅದರಲ್ಲಿ ಒಂದು ಕಥೆಯನ್ನು ನಾವು ಇಂದು ನಿಮಗೆ ಹೇಳಲು ಹೊರಟಿದ್ದೇವೆ.

ಹೌದು ಸ್ನೇಹಿತರೆ ಎಲ್ಲಾ ಶ್ರೀಮಂತರು ಒಂದೇ ವಿಧವಾಗಿ ಇರುವುದಿಲ್ಲ. ಎಲ್ಲರೂ ಕೇವಲ ಬಡ ಕುಟುಂಬದ ಮಕ್ಕಳನ್ನು ತಮ್ಮ ಕೆಲಸಕ್ಕಾಗಿ ಬಳಸುವುದಿಲ್ಲ ಕೆಲವರು ಅವರನ್ನು ಅದಕ್ಕಿಂತ ಹೆಚ್ಚಾಗಿ ಗೌರವ ಸ್ಥಾನಮಾನಗಳನ್ನು ನೀಡಿ ಗೌರವಿಸುತ್ತಾರೆ. ಒಂದು ಹಳ್ಳಿಯಲ್ಲಿ ಕೂಡ ಹೀಗೆ ನಡೆದಿದೆ. ಒಂದು ಹಳ್ಳಿಯಲ್ಲಿ ಸಬೀನ ಎಂಬ ಹುಡುಗಿ ಇದ್ದಾಳೆ. ಮನೆಯಲ್ಲಿ ಎಷ್ಟು ಬಡತನ ಎಂದರೆ ಎರಡು ಹೊತ್ತಿನ ಊಟಕ್ಕೂ ಕೂಡ ಪರದಾಡುವಂತಹ ಸ್ಥಿತಿ. ಈ ಸಮಯದಲ್ಲಿ ಆಕೆಯ ತಾಯಿ ಅವಳನ್ನು ಶ್ರೀಮಂತರೊಬ್ಬರ ಮನೆಕೆಲಸಕ್ಕೆ ಕಳಿಸುತ್ತಾರೆ.

ಬಡತನ ಕಿತ್ತು ತಿನ್ನುವಂತೆ ಇದ್ದಿದ್ದರಿಂದ ಯಾವುದೇ ವಿದ್ಯಾಭ್ಯಾಸ ಗಳನ್ನು ಪಡೆಯದೆ ಕುಟುಂಬದ ಜವಾಬ್ದಾರಿ ನಿರ್ವಹಿಸಲು ಸಬೀನ ಆ ಶ್ರೀಮಂತರ ಮನೆಗೆ ಮನೆ ಕೆಲಸಕ್ಕೆ ಹೊರಟಳು. ಆ ಶ್ರೀಮಂತ ಮನೆಯ ತಾಯಿ ಸಬಿನಾಳ ಗುಣ ರೂಪ ಹಾಗೂ ನಡತೆ ನೋಡಿ ಸಾಕಷ್ಟು ಮೆಚ್ಚಿ ಇಷ್ಟಪಟ್ಟರು. ಇನ್ನು ತನಗೆ ಇರುವ ಏಕೈಕ ಮಗನಿಗೆ ಸಬೀನಾಳನ್ನೆ ಮದುವೆ ಮಾಡಿಕೊಡಬೇಕೆಂದು ಯೋಚನೆ ಮಾಡಿದಳು ಆಕೆ. ಸ್ನೇಹಿತರೆ ಇದು ಕೇಳುವುದಕ್ಕೆ ನಿಮಗೆ ತಮಾಷೆ ಎಂದೆನಿಸಿದರು ನಿಜವಾಗಿ ನಡೆದಿರುವ ಘಟನೆ.

ಕೋಟ್ಯಾಂತರ ರೂಪಾಯಿ ಆಸ್ತಿಯನ್ನು ಹೊಂದಿರುವ ಆಕೆ ತನ್ನ ಒಬ್ಬನೇ ಮಗನಿಗೆ ಬಡತನದಿಂದ ಬಂದಿರುವ ಸಬೀನಾಳನ್ನು ಮದುವೆ ಮಾಡಿ ಕೊಡುವ ಯೋಚನೆ ಮಾಡಿದ್ದನ್ನು ಕೇಳಿದ ಬಡ ತಾಯಿ ಒಮ್ಮೆ ಆಶ್ಚರ್ಯ ಹಾಗೂ ಭಯದಿಂದ ಕಂಗಾಲಾದರು. ಯಾಕೆಂದರೆ ನೀವೆಲ್ಲ ಕೇಳಿರುವಂತೆ ಶ್ರೀಮಂತ ಮನೆಯವರು ನಮ್ಮೊಂದಿಗೆ ತಮಾಷೆ ಮಾಡುತ್ತಿರುವುದು ಅಥವಾ ಆಟವಾಡುತ್ತಿರುವ ಎಂಬ ಭ’ಯವಿರುತ್ತದೆ. ಆದರೆ ಆ ಶ್ರೀಮಂತ ತಾಯಿ ಹಾಗೆಲ್ಲಾ ಏನೂ ಇಲ್ಲ ನೀವೇನು ಆಲೋಚನೆ ಮಾಡಬೇಡಿ ನಮಗೆ ನಿಮ್ಮ ಮಗಳ ಗುಣ ರೂಪ ನಡತೆ ಹಾಗೂ ಎಲ್ಲರನ್ನೂ ಆದರಿಸುವ ರೀತಿ ನನಗೆ ಇಷ್ಟವಾಗಿದೆ.

ಅದಕ್ಕಾಗಿ ನನಗೆ ಇರುವ ಒಬ್ಬನೇ ಒಬ್ಬ ಮಗ ಅಮೀರ್ ಗೆ ಅವಳು ತಕ್ಕದಾದ ಹೆಂಡತಿ ಎಂಬುದು ನಮ್ಮ ಮನಸ್ಸಿಗೆ ಬಂದಿದೆ ಅದಕ್ಕಾಗಿ ಇವರಿಬ್ಬರ ಮದುವೆಯಾಗಲಿ ಎಂಬುದು ನಮ್ಮ ಆಸೆ ಎಂದು ಹೇಳಿದರು. ಸ್ನೇಹಿತರೆ ತಾಯಿಯ ಮಾತನ್ನು ಆಕೆಯ ಮಗ ಕೋಟ್ಯಾಧೀಶ ಅಮೀರ್ ಕೂಡ ತಳ್ಳಿ ಹಾಕಲಿಲ್ಲ. ಸಬೀನಾ ಳನ್ನು ಮದುವೆಯಾಗಲು ಆಕೆಯ ಊರಿಗೆ ಹೆಲಿಕಾಪ್ಟರ್ನಲ್ಲಿ ಬಂದಿಳಿದ. ಆ ಹಳ್ಳಿಯಲ್ಲಿ ಕಾರು ಬಂದರೆ ಇಡೀ ಊರಿಗೆ ಊರು ಸೇರುತ್ತಿತ್ತು ಅದೊಂದು ದೊಡ್ಡ ವಿಷಯವಾಗಿ ಇರುತ್ತಿತ್ತು. ಇನ್ನು ಹೆಲಿಕಾಪ್ಟರ್ ಬಂದರೆ ಕೇಳಬೇಕೆ ಇಡೀ ಊರಿಗೆ ಊರೇ ಅಮೀರ್ ಹಾಗೂ ಸಬಿನಾಳ ಮದುವೆಗೆ ಬಂದು ಸಾಕ್ಷಿಯಾಯಿತು.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ರೂಪ ನಡತೆ ಗುಣ ಮಾತುಗಳು ಎಷ್ಟು ಚೆನ್ನಾಗಿರುತ್ತೆ ಅದರ ಮೇರೆಗೆ ಭಗವಂತ ನಮ್ಮ ಭವಿಷ್ಯದ ಮುಂದಿನ ದಿನಗಳನ್ನು ಬರೆದಿರುತ್ತಾನೆ ಎಂಬುದು ಈ ಕಥೆಯಿಂದ ನಾವು ತಿಳಿದುಕೊಳ್ಳಬಹುದು. ಅದಕ್ಕೆ ಅಲ್ಲವೇ ಸಂಸ್ಕೃತದಲ್ಲಿ ಒಂದು ಶ್ಲೋಕ ಇರುವುದು ಋಣಾನುಬಂಧ ರೂಪೇಣ ಪಶು ಪತಿ ಸುತಾಲಯ ಎಂಬುದು. ಈ ನೈಜ ಜೀವನದ ಘಟನೆ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.