ಇದ್ದಕ್ಕಿದ್ದಂತೆ ಮಂಜು ಪಾವಗಡ ಅವರಿಗೆ ಕರೆ ಮಾಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದೇನು ಗೊತ್ತೇ?? ಶಾಕ್ ಆದ ಮಂಜು.

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಕನ್ನಡ 8 ಗೆದ್ದನಂತರ ಮಂಜು ಪಾವಗಡ ರವರಿಗೆ ಹಲವಾರು ಗಣ್ಯಾತಿಗಣ್ಯ ರಿಂದ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಹಲವಾರು ನಟ ನಟಿಯರು ಕೂಡ ವಿಡಿಯೋ ಮೂಲಕ ಅಭಿನಂದನೆಗಳನ್ನು ತಿಳಿಸಿದ್ದಾರೆ. ಆದರೆ ಬಿಗ್ ಬಾಸ್ ಗೆದ್ದು ಮಂಜು ಪಾವಗಡ ರವರು ಹೊರಗೆ ಬಂದ ನಂತರ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕರುನಾಡ ಚಕ್ರವರ್ತಿ ಶಿವಣ್ಣ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೀಗೆ ಹಲವಾರು ಮಂದಿ ಕರೆ ಮಾಡಿ ಔತಣ ಕೂಟವನ್ನು ಏರ್ಪಡಿಸಿ ಮುಂದಿನ ಚಿತ್ರಗಳಲ್ಲಿ ಅವಕಾಶ ನೀಡುವ ಭರವಸೆಯನ್ನು ಕೂಡ ಹೇಳಿದ್ದರು.

ಇನ್ನು ಈಗಾಗಲೇ ಹಲವಾರು ಚಿತ್ರಗಳು ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡ ರವರ ಬಳಿ ಬರುವ ನಿರೀಕ್ಷೆ ಕೂಡ ಇದೆ. ಈ ಹಿಂದೆ ಮಜಾಭಾರತ ದಿನಗಳಿಂದಲೂ ಕೂಡ ಮಂಜು ಪಾವಗಡ ರವರನ್ನು ನೋಡಿರುವವರು ಅವರನ್ನು ಮೆಚ್ಚಿ ಕನ್ನಡ ಚಿತ್ರರಂಗಕ್ಕೆ ಸೂಕ್ತವಾದ ಕಾಮಿಡಿ ನಟ ಎಂಬುದಾಗಿ ಕೂಡ ಹೇಳಿದ್ದರು. ಬಿಗ್ ಬಾಸ್ ನಲ್ಲಿ ಕೂಡ ತಮ್ಮ ನಟನೆಯ ವಿಶ್ವರೂಪವನ್ನು ಜನರಿಗೆ ತೋರಿಸಿದ್ದರು. ಇನ್ನು ಇತ್ತೀಚಿಗಷ್ಟೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಕೂಡ ಮಂಜು ಪಾವಗಡ ರವರಿಗೆ ಕರೆಮಾಡಿ ಗುಡ್ ನ್ಯೂಸ್ ಒಂದನ್ನು ನೀಡಿದ್ದಾರೆ.

ಹೌದು ಸ್ನೇಹಿತರೆ ಆ ಗುಡ್ ನ್ಯೂಸ್ ಮತ್ತಿನ್ನೇನು ಅಲ್ಲ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ತಾವು ಮಾತುಕೊಟ್ಟಂತೆ ತಮ್ಮ ಮುಂದಿನ ಚಿತ್ರದಲ್ಲಿ ಬಿಗ್ ಬಾಸ್ ವಿನ್ನರ್ ಮಂಜು ಪಾವಗಡ ರವರಿಗೆ ಅವಕಾಶ ನೀಡುತ್ತಿದ್ದಾರೆ. ಹೌದು ಸ್ನೇಹಿತರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮುಂದಿನ ಚಿತ್ರದ ಅನೌನ್ಸ್ಮೆಂಟ್ ಇದೇ ಸೆಪ್ಟೆಂಬರ್ 10ರಂದು ನಡೆಯಲಿದೆ. ಅದೇ ಚಿತ್ರದಲ್ಲಿ ಮಂಜು ಪಾವಗಡ ರವರು ಕೂಡ ಪ್ರಮುಖ ಪಾತ್ರವೊಂದರಲ್ಲಿ ನಟಿಸಲಿದ್ದಾರೆ ಎಂಬ ಮಾಹಿತಿ ಈಗಾಗಲೇ ಹೊರಬಿದ್ದಿದೆ. ಇನ್ನು ಮಂಜು ಪಾವಗಡ ರವರು ಮೊದಲ ಕನ್ನಡ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೊಂದಿಗೆ ನಟಿಸುತ್ತಿರುವುದು ಅವರ ಅದೃಷ್ಟವೆಂದು ಹೇಳಬಹುದಾಗಿದೆ. ಈ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.