ನಯನತಾರ-ವಿಜ್ಞೇಶ್ ಮದುವೆಯಾಗಿ ಇಷ್ಟು ದಿನವಾದರೂ ಕೂಡ ಹನಿಮೂನ್ ಗೆ ಹೋಗದೆ ಏನು ಮಾಡುತ್ತಿದ್ದಾರೆ ಗೊತ್ತೇ? ಕಾರಣ ತಿಳಿದರೆ ನಿಜಕ್ಕೂ ದಂಗಾಗ್ತೀರಾ.
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇತ್ತೀಚಿಗಷ್ಟೇ ದಕ್ಷಿಣ ಭಾರತ ಚಿತ್ರರಂಗದ ನಟಿ ಹಾಗೂ ನಿರ್ದೇಶಕ ಜೋಡಿ ಗಳಾಗಿರುವ ನಯನತಾರಾ ಹಾಗೂ ವಿಘ್ನೇಶ್ ರವರು ಇಬ್ಬರು ಕೂಡ ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೌದು ಗೆಳೆಯರೇ ಮಹಾಬಲಿಪುರಂನ ಪ್ರತಿಷ್ಠಿತ ಖಾಸಗಿ ರೆಸಾರ್ಟ್ ನಲ್ಲಿ ಇಬ್ಬರು ಕೂಡ ಮದುವೆಯಾಗುವ ಮೂಲಕ ಇತ್ತೀಚಿನ ದಿನಗಳಲ್ಲಿ ಮದುವೆಯಾಗಿರುವ ಸೆಲಬ್ರಿಟಿಗಳ ಪಟ್ಟಿಯಲ್ಲಿ ಶಾಮೀಲಾಗಿದ್ದಾರೆ.
ಇನ್ನು ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇವರಿಬ್ಬರ ಮದುವೆಗೆ ರಾಜ್ಯದ ಮುಖ್ಯಮಂತ್ರಿ ಸ್ಟಾಲಿನ್ ರವರಿಂದ ಹಿಡಿದು ರಜನಿಕಾಂತ್ ಕಮಲ್ ಹಾಸನ್ ಶಾರುಖ್ ಖಾನ್ ರವರ ವರೆಗೆ ಬಹುತೇಕ ಎಲ್ಲಾ ಸ್ಟಾರ್ ಸೆಲೆಬ್ರಿಟಿಗಳು ಕೂಡ ಮದುವೆಗೆ ಹಾಜರಾಗಿ ಇವರಿಬ್ಬರಿಗೂ ಆಶೀರ್ವದಿಸಿದ್ದಾರೆ. ಇನ್ನು ಸಾಮಾನ್ಯವಾಗಿ ಸೆಲೆಬ್ರಿಟಿಗಳು ಮದುವೆಯಾದಮೇಲೆ ಕಣ್ತಂಪು ಮಾಡುವ ದೂರದೂರದ ವಿದೇಶಿ ಪ್ರವಾಸಿ ತಾಣಗಳಿಗೆ ಹನಿಮೂನ್ಗೆ ಹೋಗುವುದು ಸಾಮಾನ್ಯ ಎನ್ನುವುದು ನಿಮಗೆಲ್ಲ ತಿಳಿದಿದೆ ಆದರೆ ನಯನತಾರ ಹಾಗೂ ವಿಘ್ನೇಶ್ ಇಬ್ಬರೂ ಕೂಡ ಮದುವೆಯಾದ ಮೇಲೆ ಇದುವರೆಗೂ ಹನಿಮೂನ್ ಗೆ ಹೋಗದೆ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಇದರ ನಡುವೆಯೇ ಅವರು ಮಾಡುತ್ತಿರುವ ಇನ್ನೊಂದು ಒಳ್ಳೆಯ ಕಾರ್ಯ ಈಗ ಎಲ್ಲರ ಮನಸ್ಸನ್ನು ನಿಜವಾಗಿ ಕೂಡ ಗೆದ್ದಿದೆ.
ಹೌದು ಗೆಳೆಯರೇ ಈ ಸಂದರ್ಭದಲ್ಲಿ ಬಹುತೇಕ ಎಲ್ಲಾ ಮಕ್ಕಳಿಗೂ ಹಾಗೂ ವೃದ್ಧರಿಗೂ ಮಧ್ಯಾಹ್ನದ ಉಚಿತ ಊಟವನ್ನು ಇಬ್ಬರು ದಂಪತಿಗಳು ಈಗ ಒದಗಿಸುವ ಮೂಲಕ ಅವರೆಲ್ಲರ ಆಶೀರ್ವಾದಕ್ಕೆ ಪಾತ್ರರಾಗುತ್ತಿದ್ದರು. ಹೌದು ಗೆಳೆಯರೇ ಇದುವರೆಗೂ ಅನಾಥಾಶ್ರಮ ಹಾಗೂ ವೃದ್ಧಾಶ್ರಮ ಸೇರಿದಂತೆ ಹಲವಾರು ದೇವಸ್ಥಾನಗಳಲ್ಲಿ ಕೂಡ 18 ಸಾವಿರಕ್ಕೂ ಅಧಿಕ ಮಕ್ಕಳಿಗೆ ಮತ್ತು ಒಂದು ಲಕ್ಷಕ್ಕೂ ಅಧಿಕ ಜನರಿಗೆ ಸ್ವಾದಿಷ್ಟ ಸೌತ್ ಇಂಡಿಯನ್ ಊಟದ ವ್ಯವಸ್ಥೆಯನ್ನು ಮಾಡುವ ಮೂಲಕ ತಮ್ಮ ಮದುವೆಯ ಸಂತೋಷವನ್ನು ಅರ್ಥಪೂರ್ಣವಾಗಿ ಅಶಕ್ತರ ಮುಖದಲ್ಲಿ ಸಂತೋಷವನ್ನು ಮೂಡಿಸುವ ಮೂಲಕ ಇಬ್ಬರು ದಂಪತಿಗಳು ಆಚರಿಸಿಕೊಂಡಿದ್ದಾರೆ ಎಂದು ಹೇಳಬಹುದಾಗಿದೆ. ಈ ವಿಚಾರದ ಕುರಿತಂತೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ.
Comments are closed.