ನಿಜಕ್ಕೂ ರಶ್ಮಿಕಾ ರವರ ಪಾತ್ರ ಪುಷ್ಪ 2 ನಲ್ಲಿ ಬೇಗ ಮುಗಿದು ಹೋಗಲಿದೆಯೇ?? ಚಿತ್ರ ತಂಡದಿಂದ ಬಂತು ಸ್ಪಷ್ಟ ಉತ್ತರ. ಕನ್ನಡಿಗರು ಬೇಜಾರಾಗಿದ್ದು ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೆ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಕಾಂಬಿನೇಷನ್ ನಟನೆಯಲ್ಲಿ ಹಾಗೂ ಸುಕುಮಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರದ ಮೊದಲ ಭಾಗ ಈಗಾಗಲೇ ಬಿಡುಗಡೆಯಾಗಿ ಪ್ರಪಂಚದಾದ್ಯಂತ 350 ಕೋಟಿಗೂ ಅಧಿಕ ಹಣವನ್ನು ಗಳಿಸಿ ಸಾಮರ್ಥ್ಯವನ್ನು ಸಾಬೀತು ಪಡಿಸಿ ದಕ್ಷಿಣಭಾರತ ಚಿತ್ರದ ತಾಕತ್ತನ್ನು ಮತ್ತೊಮ್ಮೆ ಬಾಲಿವುಡ್ ನಲ್ಲಿ ಕೂಡ ಮಿಂಚಿಸಿದೆ. ಇನ್ನು ಪುಷ್ಪ ಚಿತ್ರದ ಎರಡನೇ ಭಾಗದ ಕುರಿತಂತೆ ಹಲವಾರು ಗಾಳಿಸುದ್ದಿಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಹೌದು ಗೆಳೆಯರಿಗೂ ಪುಷ್ಪ ಚಿತ್ರದ ಎರಡನೇ ಭಾಗದಲ್ಲಿ ಕೊಡಗಿನ ಕುವರಿ ಆಗಿರುವ ರಶ್ಮಿಕ ಮಂದಣ್ಣ ನವರ ಪಾತ್ರ ಬೇಗನೆ ಮುಗಿಯುತ್ತದೆ ಅವರನ್ನು ಮುಗಿಸಲಾಗುತ್ತದೆ ಎಂಬುದಾಗಿ ಹೇಳಲಾಗುತ್ತಿತ್ತು.
ಎಲ್ಲಾ ಗಾಳಿಸುದ್ದಿಗಳನ್ನು ಕೂಡ ಕೆಡಿಸಿಕೊಂಡಿರುವ ಚಿತ್ರದ ನಿರ್ಮಾಪಕ ಆಗಿರುವ ವೈ ರವಿಶಂಕರ್ ಇದೆಲ್ಲ ಕೇವಲ ಗಾಳಿಸುದ್ದಿಗಳು ಮಾತ್ರ ಹಾಗೇನು ಇಲ್ಲ ಎಂಬುದಾಗಿ ಎಲ್ಲ ಗಾಳಿಸುದ್ದಿಯನ್ನು ತಿಳಿಗೊಳಿಸಿದ್ದಾರೆ. ಇನ್ನು ಚಿತ್ರದ ಚಿತ್ರೀಕರಣವು ಕೂಡ ಜುಲೈ ಮುಕ್ತಾಯದ ಹಂತದಿಂದ ಪ್ರಾರಂಭವಾಗಲಿದೆ ಎಂಬುದಾಗಿ ತಿಳಿದುಬಂದಿದೆ. ಈ ಸುದ್ದಿಯನ್ನು ಕೇಳಿರುವ ಕನ್ನಡಿಗರು ಈಗಾಗಲೇ ತುಂಬಾನೇ ಬೇಸರದಲ್ಲಿದ್ದಾಗ ಎಂದು ಹೇಳಬಹುದಾಗಿದೆ. ಹೌದು ಗೆಳೆಯರೇ ಮೊದಲಿನಿಂದಲೂ ನಿಮಗೆ ತಿಳಿದಿರುವ ಹಾಗೆ ರಶ್ಮಿಕಾ ಮಂದಣ್ಣ ಹಾಗೂ ಕನ್ನಡಿಗರಿಗೂ ಎಣ್ಣೆ ಸೀಗೆಕಾಯಿ ಸಂಬಂಧ ಇದ್ದ ಹಾಗೆ.
ಹೀಗಾಗಿ ಅವರ ಪಾತ್ರವನ್ನು ಬೇಗ ಮುಗಿಸಿ ಅವರ ಮುಖವನ್ನು ನೋಡಲು ನಮಗೆ ಸಾಧ್ಯವಿಲ್ಲ ಎಂಬುದಾಗಿ ಅಸಹನೆಯ ಮಾತುಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಆಡಿದ್ದಾರೆ. ಕೆಜಿಎಫ್ ಸರಣಿ ಚಿತ್ರಗಳಂತೆ ಪುಷ್ಪ ಚಿತ್ರ ಕೂಡ ಇತ್ತೀಚಿನ ದಿನಗಳಲ್ಲಿ ದೊಡ್ಡಮಟ್ಟದಲ್ಲಿ ಬಾಲಿವುಡ್ ಸೇರಿದಂತೆ ಹೊರ ರಾಜ್ಯಗಳಲ್ಲಿ ಸಖತ್ ಸೌಂಡ್ ಮಾಡುತ್ತಿದ್ದು ಮುಂದಿನ ದಿನಗಳಲ್ಲಿ ಬಿಡುಗಡೆಯಾದ ನಂತರ ಯಾವ ರೀತಿಯಲ್ಲಿ ಕಲೆಕ್ಷನ್ ವಿಚಾರದಲ್ಲಿ ಸದ್ದು ಮಾಡುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.
Comments are closed.