ಗೋಲ್ಡನ್ ಪಾಸ್ಟ್ ಗೆದ್ದದ್ದು, ರಾಜೀವ್, ಆದರೆ ಜನತೆಯ ಮನ ಗೆದ್ದದ್ದು ಯಾರು ಗೊತ್ತಾ??ಅಸಮಾಧಾನ ವ್ಯಕ್ತಪಡಿಸಿದ ಪ್ರೇಕ್ಷಕರು

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ನೆನ್ನೆ ಕಿಚ್ಚ ಸುದೀಪ್ ರವರು ಕಾರಣಾಂತರಗಳಿಂದ ತಪ್ಪಿಸಿ ಕೊಂಡಿದ್ದ ಕಾರಣ ಆಟಗಾರರಿಗೆ ಗೋಲ್ಡನ್ ಪಾಸ್ ಎಂಬ ಅವಕಾಶವನ್ನು ನೀಡಿ, ಗೋಲ್ಡನ್ pass ಪಡೆದವರು ನಾಮಿನೇಷನ್ ಆದಾಗ ಈ ಪಾಸ್ ಬಳಸಿಕೊಂಡು ನಾಮಿನೇಷನ್ ನಿಂದ ತಪ್ಪಿಸಿ ಕೊಳ್ಳಬಹುದು ಎಂಬ ಅವಕಾಶವನ್ನು ನೀಡಿದರು.

ಅದೇ ಕಾರಣಕ್ಕಾಗಿ ವಿಶೇಷ ಟಾಸ್ಕ್ ಒಂದನ್ನು ನೀಡಿ ಸ್ಪರ್ಧಿಗಳು ಇತರರ ಭಾವಚಿತ್ರವಿರುವ ಬ್ಯಾಗನ್ನು ತೆಗೆದುಕೊಂಡು ಬಸ್ ಹತ್ತ ಬೇಕಾಗಿತ್ತು, ಈ ಸಮಯದಲ್ಲಿ ಸ್ಪರ್ಧಿಗಳು ತಮ್ಮದೇ ಆದ ಬ್ಯಾಗ್ ತೆಗೆದುಕೊಂಡು ಬಸ್ ಹತ್ತು ವಂತೆ ಇರಲಿಲ್ಲ ಎಂಬ ನಿಯಮವನ್ನು ಆಟದಲ್ಲಿ ಸೇರಿಸಲಾಗಿತ್ತು. ಅದೇ ಸಮಯದಲ್ಲಿ ಎಲ್ಲಾ ಸ್ಪರ್ಧಿಗಳು ಇತರ ಬ್ಯಾಗ್ ಗಳನ್ನೂ ತೆಗೆದುಕೊಂಡು ಬಸ್ ಹತ್ತುತ್ತಿದ್ದರು.

ಇಂತಹ ಸಂದರ್ಭದಲ್ಲಿ ರಾಜೀವ್ ರವರು ಬಹಳ ಲೆಕ್ಕಾಚಾರ ಹಾಕಿಕೊಂಡು ಆಟವಾಡಿದ್ದು ಎಲ್ಲರಿಗೂ ತಿಳಿಯುವಂತೆ ಇತ್ತು, ಎಲ್ಲರ ಮುಂದೆ ಇಷ್ಟು ದಿವಸ ಕ್ರೀಡಾ ಸ್ಪೂರ್ತಿಯ ಕುರಿತು ಮಾತನಾಡಿ ಒಳ್ಳೆಯ ಭಾವನೆ ಮೂಡಿಸಿದ್ದ ರಾಜೀವ್ ರವರು ಒಮ್ಮೆಲೆ ಆಟದಲ್ಲಿ ಸಂಪೂರ್ಣ ಲೆಕ್ಕಾಚಾರದಲ್ಲಿ ಆಟವಾಡಿ ಕೇವಲ ಗೋಲ್ಡನ್ ಪಾಸ್ ಗಾಗಿ ಈ ರೀತಿ ನಡೆದು ಕೊಂಡಿರುವುದು ನಿಜಕ್ಕೂ ವಿಪರ್ಯಾಸ ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ಸಮಯದಲ್ಲಿ ಮತ್ತೊಬ್ಬ ಆಟಗಾರರಾಗಿರುವ ಶಮಂತ್ ರವರು ತಾವು ಮುಂದೆ ಹೋದರೆ ತಮಗೆ ಗೋಲ್ಡನ್ ಪಾಸ್ ಸಿಗುವುದಿಲ್ಲ ಎಂದು ತಿಳಿದಿದ್ದರೂ ಕೂಡ ಬಹಳ ವೇಗವಾಗಿ ಬಸ್ ಹತ್ತುವ ಮೂಲಕ ಗೋಲ್ಡನ್ ಪಾಸ್ ಅವಕಾಶವನ್ನು ಶುಭ ರವರಿಗೆ ಬಿಟ್ಟು ಕೊಟ್ಟಿದ್ದರು, ಆದರೆ ಇದೇ ರೀತಿಯ ಸಮಯ ಬಂದಾಗ ರಾಜೀವ್ ರವರು ಶುಭ ಪೂಂಜಾ ರವರಿಗೆ ಅಂತಲೂ ತಾವು ವೇಗವಾಗಿ ಓಡದೆ ಶುಭಪುಂಜ ರವರು ಬಸ್ ಹತ್ತುವಂತೆ ನೋಡಿ ಕೊಂಡರು. ಇದು ಎಷ್ಟರ ಮಟ್ಟಿಗೆ ಸರಿ ಕ್ರೀಡಾ ಸ್ಪೂರ್ತಿಯ ಬಗ್ಗೆ ಪಾಠಗಳನ್ನು ಮಾಡುತ್ತಿದ್ದ ರಾಜೀವ್ ರವರು ಈ ರೀತಿ ಮಾಡಿದ್ದು ಸರಿ ಹೇಗೆ ಎಂದು ಪ್ರಶ್ನೆ ಕೇಳುತ್ತಿದ್ದಾರೆ.

Comments are closed.