ಐದು ವರ್ಷ ಪ್ರೀತಿಸಿ ಮದುವೆಯಾದ, ಕಷ್ಟ ಎಂದ ಸ್ನೇಹಿತನಿಗೆ ಮನೆಯಲ್ಲಿ ಜಾಗ ನೀಡಿದ. ಆದರೆ ಆ ಸ್ನೇಹಿತ ಹೆಂಡತಿ ಮಾಡಿದ್ದೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಮ್ಮ ಜನರಿಗೆ ಪ್ರೀತಿಯ ಹಾಗೂ ಸ್ನೇಹದ ಅರ್ಥ ಗೊತ್ತಿಲ್ಲ ದಂತಾಗಿ ಹೋಗಿಬಿಟ್ಟಿದೆ. ಯಾರು ಕೂಡ ಜಗತ್ತನ್ನು ಭಾವನಾತ್ಮಕವಾಗಿ ನೋಡುತ್ತಿಲ್ಲ ಎಲ್ಲರೂ ತಮ್ಮ ಸ್ವಾರ್ಥದ ಹಿಂದೆ ಹೋಗಿಬಿಟ್ಟಿದ್ದಾರೆ. ಹೌದು ಸ್ನೇಹಿತರೆ ಇಂದಿನ ಯುಗದಲ್ಲಿ ಜನರು ತಮ್ಮ ಸ್ವಾರ್ಥಕ್ಕಾಗಿ ಬೇರೆಯವರಿಗೆ ಏನು ಬೇಕಾದರೂ ಆಗಲಿ ಎಂಬ ಭಾವನೆಯನ್ನು ಹೊಂದಿದ್ದಾರೆ. ಇದಕ್ಕೆ ಒಂದು ಉದಾಹರಣೆ ಎಂಬಂತೆ ಇಂದು ಒಂದು ನೈಜ ಘಟನೆಯನ್ನು ಹೇಳಲು ಹೊರಟಿದ್ದೇವೆ.

ಹೌದು ಸ್ನೇಹಿತರೆ ಈ ಘಟನೆ ನಡೆದಿರುವುದು ಬೆಂಗಳೂರಿನಲ್ಲಿ. ಹೌದು ಸ್ನೇಹಿತರೆ ರಂಜಿತಾ ಎಂಬ ಹುಡುಗಿ ಮತ್ತು ಕಾರ್ತಿಕ್ ಎಂಬ ಹುಡುಗ ಐದು ವರ್ಷಗಳಿಂದ ಪ್ರೀತಿಸಿ ಮದುವೆಯಾಗಿ ಬೆಂಗಳೂರಿನ ಬಂಡಿಕಾಳಮ್ಮ ದೇವಸ್ಥಾನದ ಬಳಿ ಮನೆ ಮಾಡಿಕೊಂಡು ಸಂಸಾರ ಸಾಗಿಸುತ್ತಿದ್ದರು. ಇನ್ನು ಮಾಡಲು ಒಳ್ಳೆ ಕೆಲಸ ಹಾಗೂ ಸಂಭಾವನೆ ಕೂಡ ಇತ್ತು ಈ ಸಂಸಾರದಲ್ಲಿ ಎಲ್ಲವೂ ಕೂಡ ಸರಿಯಾಗಿತ್ತು ಇಬ್ಬರು ಸಂತೋಷದಿಂದ ಇದ್ದರು. ಆದರೆ ಸಮಸ್ಯೆ ಬಂದಿದ್ದೆ ಕಾರ್ತಿಕ್ ನ ಗೆಳೆಯ ನಿಂದಾಗಿ. ಕಾರ್ತಿಕ್ ತನ್ನ ಗೆಳೆಯ ಸಂಜೀವ ನಿಗೆ ಇರಲು ಎಲ್ಲೂ ಕೂಡ ಜಾಗವಿಲ್ಲವೇ ಎಂದು ತನ್ನ ಮನೆಯಲ್ಲೇ ಇರಲು ಅವಕಾಶ ಮಾಡಿಕೊಟ್ಟಿದ್ದರು. ಆದರೆ ಉಂಡ ಮನೆಗೆ ಎರಡು ಎಣಿಸುವುದು ಅಂದರೆ ಇದೇ ಸ್ನೇಹಿತರೆ.

ಹೌದು ಸ್ನೇಹಿತರೆ ರಂಜಿತಾಳ ಸಂಜೀವನಿಗೆ ಮನಸೋಲುತ್ತಾಳೆ. ಇತ್ತ ಸಂಜೀವ ಕೂಡ ಕಾರ್ತಿಕನ ಪತ್ನಿ ರಂಜಿತಾಳನ್ನು ತನ್ನ ಬುಟ್ಟಿಗೆ ಬೀಳೆಸಿಕೊಳ್ಳುತ್ತಾನೆ. ಇದು ಎಷ್ಟರಮಟ್ಟಿಗೆ ಹೋಗುತ್ತದೆ ಎಂದರೆ ಇಬ್ಬರೂ ಕೂಡ ಕಾರ್ತಿಕ್ ಇಲ್ಲದಿದ್ದಾಗ ಚಕ್ಕಂದ ಆಡಲು ಪ್ರಾರಂಭಿಸುತ್ತಾರೆ. ಆದರೆ ಕಾರ್ತಿಕ್ ಇದರ ಯಾವ ಪರಿವೇ ಇಲ್ಲದಂತೆ ಮುಗ್ಧನಂತೆ ಇದ್ದ. ಇನ್ನು ಇವರಿಬ್ಬರು ಸೇರಿಕೊಂಡು ಕಾರ್ತಿಕ್ ನನ್ನು ಮುಗಿಸುವ ಪ್ಲಾನ್ ಮಾಡುತ್ತಾರೆ. ಹೌದು ಸ್ನೇಹಿತರೆ ಇದಕ್ಕಾಗಿ ಇಬ್ಬರು ಕೂಡ ಆತ ಮನೆಗೆ ಬಂದಾಗ ಚೆನ್ನಾಗಿ ಕುಡಿಸುತ್ತಾರೆ. ಜ್ಞಾನ ತಪ್ಪಿದ ಮೇಲೆ ಸಂಜೀವ ಕಾರ್ತಿಕ್ ನನ್ನು ತನ್ನ ಸ್ನೇಹಿತರ ಸಹಾಯದಿಂದ ಚನ್ನಪಟ್ಟಣದ ಮೋರಿ ಒಳಗಡೆ ಎಸೆಯುತ್ತಾನೆ. ನೋಡಿದ್ರಲ್ಲ ಸ್ನೇಹಿತರೆ ಸ್ನೇಹಿತನ ಮೇಲೆ ಕನಿಕರ ತೋರಿ ಮನೆಯಲ್ಲಿ ಜಾಗ ಕೊಟ್ಟಿದ್ದಕ್ಕೆ ಆತ ಮಾಡಿದ್ದೇನು ಎಂಬುದು.

Comments are closed.