ಮನೆಯಿಂದ ಸ್ಪರ್ಧಿಯನ್ನು ಹೊರಹಾಕಲು ಎಲಿಮಿನೇಷನ್ ನಡೆಸಿಕೊಡಲು ಸುದೀಪ್ ಅಲ್ಲ, ಬರುತ್ತಿದ್ದಾರೆ ವಿಶೇಷ ಅತಿಥಿ, ಯಾರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನೋಡುತ್ತಾ ನೋಡುತ್ತಾ ಈ ಬಾರಿಯ ಬಿಗ್ ಬಾಸ್ ಕನ್ನಡ ಸೀಸನ್ 2 ಮುಕ್ತಾಯದ ಹಂತಕ್ಕೆ ಬಂದು ತಲುಪಿದೆ. ಫೆಬ್ರವರಿ ತಿಂಗಳಲ್ಲಿ ಪ್ರಾರಂಭವಾಗಿದೆ ಅಂತಹ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ನಡೆಸಿಕೊಳ್ಳುವ ಬಿಗ್ ಬಾಸ್ ಕನ್ನಡ ಸೀಸನ್ 8 ಈಗ ಇನ್ನೇನು 13 ದಿನಗಳು ಬಾಕಿ ಉಳಿದಿದೆ. ಈಗಾಗಲೇ ಬಿಗ್ ಬಾಸ್ ಅನ್ನು ಯಾರು ಗೆಲ್ಲುತ್ತಾರೆ ಎಂಬ ಲೆಕ್ಕಾಚಾರಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ವ್ಯಾಪಕವಾಗಿ ನಡೆಯುತ್ತಿದೆ.

ಶುಭಪುಂಜ ದಿವ್ಯ ಉರುಡುಗ ಬಿಎಸ್ ಸುರೇಶ್ ಅರವಿಂದ ಕೆಪಿ ಪ್ರಶಾಂತ್ ಸಂಬರ್ಗಿ ಚಕ್ರವರ್ತಿ ಚಂದ್ರಚುಡ್ ಮಂಜು ಪಾವಗಡ ಶಮಂತ್ ವೈಷ್ಣವಿ ಗೌಡ ಹೀಗೆ ಎಲ್ಲಾ ಅಭ್ಯರ್ಥಿಗಳ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ನೆಚ್ಚಿನ ಅಭ್ಯರ್ಥಿಗಳಿಗೆ ಎನ್ನುತ್ತಾರೆ ಎಂಬುದಾಗಿ ಪ್ರಚಾರ ಮಾಡುತ್ತಿದ್ದಾರೆ. ಮಾತ್ರವಲ್ಲದೆ ಈ ಬಾರಿಯ ವಾರಂತ್ಯದಲ್ಲಿ ಎಲಿಮಿನೇಷನ್ ಕೂಡ ಆಗಿರಲಿಲ್ಲ. ಹಾಗಾಗಿ ಬಿಗ್ ಬಾಸ್ ಕೊನೆಯ ಎಲಿಮಿನೇಷನ್ ಈ ವಾರದ ಮಧ್ಯದಲ್ಲಿ ನಡೆಯುತ್ತಿದೆ ಎಂಬುದಾಗಿ ಹೇಳಿದ್ದಾರೆ. ಈ ಬಾರಿಯ ಎಲಿಮಿನೇಷನ್ ಸಾಮಾನ್ಯವಾಗಿ ನಡೆಯೋದಿಲ್ಲ. ಸಾಮಾನ್ಯವಾಗಿ ವಾರಾಂತ್ಯದಲ್ಲಿ ಕಿಚ್ಚ ಸುದೀಪ್ ರವರು ಬಂದು ಎಲಿಮಿನೇಷನ್ ಆಗಿರುವ ಅಭ್ಯರ್ಥಿ ಅವರ ಹೆಸರು ಹೇಳಿ ಹೊರಗೆ ಕರಿಸುವುದು ಕಾಮನ್.

ಆದರೆ ಈ ಬಾರಿಯ ಮಿಡ್ ವೀಕ್ ಎಲಿಮಿನೇಷನ್ ವಿಶೇಷ ಅತಿಥಿಗಳ ಮೂಲಕ ತಿಳಿಸಿದ್ದಾರೆ. ಹೌದು ಸ್ನೇಹಿತರೆ ಈ ಬಾರಿ ಮಿಡ್ ವೀಕ್ ಎಲಿಮಿನೇಷನ್ ವಿಭಿನ್ನ ಮಾದರಿಯಲ್ಲಿ ನಡೆಯುವ ಸೂಚನೆ ಇದೆ. ಈ ಬಾರಿಯ ಎಲಿಮಿನೇಷನ್ ಅನ್ನು ಆರ್ ಜೆ ಶ್ರದ್ಧಾ ರವರ ನಡೆಸಲಿದ್ದಾರೆ. ತಮ್ಮ ಲವಲವಿಕೆಯ ಮಾತಿನ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಷನಲ್ ಸ್ಟಾರ್ ಆಗಿರುವ ಆರ್ ಜೆ ಸದಾ ರವರು ಈ ಬಾರಿಯ ಎಲಿಮಿನೇಷನ್ ಅನ್ನು ಮಾಡಲಿದ್ದಾರೆ ಎಂಬ ಸುದ್ದಿ ಈಗಾಗಲೇ ಖಾತ್ರಿಯಾಗಿದೆ. ಮನೆಯ ಎಲಿಮಿನೇಶನ್ ಅಲ್ಲಿ ಯಾವ ಅಭ್ಯರ್ಥಿ ಎಲಿಮಿನೇಷನ್ ಆಗಬಹುದು ಎಂಬುದು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Comments are closed.