ಹೂವ ಮಾರಿ, ಬಸ್ ಕ್ಲೀನ್ ಮಾಡಿ ಇಂದು ಕನ್ನಡ ಟಾಪ್ ನಟನಾಗಿ ಬೆಳೆದಿರುವ ನಟ ಯಾರು ಗೊತ್ತೇ???

ನಮಸ್ಕಾರ ಸ್ನೇಹಿತರೇ, ಕನ್ನಡ ಚಿತ್ರರಂಗದಲ್ಲಿ ವಿವಿಧ ನಟರಿಗೆ ವಿವಿಧ ಸವಾಲುಗಳು ಎದುರಾಗಿವೆ, ಆದ ಎಲ್ಲ ಸವಾಲುಗಳನ್ನು ಎದುರಿಸಿದ ನಂತರವೇ ಅವರು ಟಾಪ್ ನಟರಾಗಿದ್ದಾರೆ. ಸುಮ್ಮನೆ ಕೈ ಕಟ್ಟಿ ಕುಳಿತಿದ್ದರೇ ಖಂಡಿತಾ ಅವರು ಟಾಪ್ ನಟರಾಗಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ನಾವು ನೀವು ಎಲ್ಲರೂ ಕೂಡ ಅಷ್ಟೇ ಯಾವುದೇ ಕೆಲಸವನ್ನು ಮಾಡದೇ ಸುಮ್ಮನೆ ಕೈ ಕಟ್ಟಿ ಕುಳಿತರೆ ಯಾವುದೇ ಪ್ರಯೋಜನ ವಿಲ್ಲಾ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಇನ್ನು ಇದೇ ಸಮಯದಲ್ಲಿ ಇಂದು ನಾವು ಕನ್ನಡದ ಟಾಪ್ ನಟನ ಅಸಲಿ ಜೀವನದ ಕಥೆಯನ್ನು ಹೇಳುತ್ತೇವೆ ಕೇಳಿ.

ಸ್ನೇಹಿತರೇ, ಇದೀಗ ಕನ್ನಡ ಟಾಪ್ ನಟರಲ್ಲಿ ಒಬ್ಬರಾಗಿ ಮಿಂಚುತ್ತಿರುವ ನಟನೊಬ್ಬರು ಕಳೆದ ಕೆಲವು ವರ್ಷಗಳ ಹಿಂದೆ ಏನು ಮಾಡಬೇಕು ಎಂಬುದನ್ನು ತಿಳಿಯದೆ ನಟನಾಗಬೇಕು ಎಂಬ ಆಲೋಚನೆಯೊಂದಿಗೆ ನೇರವಾಗಿ ತನ್ನ ಬಳಿ ಇದ್ದ ಸೈಕಲ್ ಮಾರಿ, ಬಂದ ಪುಡಿಗಾಸನ್ನು ಕೈಯಲ್ಲಿ ಹಿಡಿದುಕೊಂಡು ಬೆಂಗಳೂರಿಗೆ ಬಂದರು. ಇಲ್ಲಿ ಬಂದು ಯಶವಂತಪುರದ ಮಾರುಕಟ್ಟೆಯಲ್ಲಿ ತನ್ನ ಮೂರು ಹೊತ್ತಿನ ಊಟಕ್ಕಾಗಿ ಸಿಕ್ಕ ಸಿಕ್ಕ ಎಲ್ಲ ಕೆಲಸವನ್ನು ಕೂಡ ಮಾಡಲು ಆರಂಭಿಸಿದ.

ಹೂವ ಮಾರಿದರು, ಮುಂಜಾನೆ ಎದ್ದ ತಕ್ಷಣ 15 ಬಸ್ ಗಳನ್ನೂ ಚೆನ್ನಾಗಿ ತೊಳೆದು ಶುಭ್ರಗೊಳಿಸಿ ಬಂದ ಹಣದಿಂದ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದರು. ಆದರೆ ಹೀಗೇ ಮಾಡುವಾಗ ತನ್ನ ಕನಸಿನ ಬೆನ್ನಟ್ಟಿ ಹೊರಟು, ಚಿಕ್ಕ ಪುಟ್ಟ ಪಾತ್ರಗಳಲ್ಲಿ ನಟಿಸಲು ಅವಕಾಶ ಪಡೆದು ಕೊಂಡರು. ಕೊನೆಗೆ ಕಲೆಯನ್ನು ಕರಗತ ಮಾಡಿಕೊಂಡು ಕನ್ನಡ ಚಿತ್ರರಂಗದಲ್ಲಿ ಬೆಳೆದರು. ಕೊನೆಗೆ ಒಂದು ದಿನ ಲೂಸಿಯಾ ಸಿನೆಮಾದ ಮೂಲಕ ನಾಯಕ ನಟನಾಗಿ ಪಾದಾರ್ಪಣೆ ಮಾಡಿದರು. ಇದಾದ ಮೇಲೆ ಹಿಂತುರುಗಿ ನೋಡಲು ಕೂಡ ಇಲ್ಲ. ಹೆಚ್ಚಾಗಿ ನೂರಾರು ಕೋಟಿ ಕಲೆಕ್ಷನ್ ಮಾಡದೇ ಇದ್ದರೂ ಯಶಸ್ಸಿಗೇನು ಕಡಿಮೆ ಇಲ್ಲ. ಇದು ನಿಜವಾಗಲು ಪ್ರತಿಯೊಬ್ಬರಿಗೂ ಪಾಠ ಕಲಿಸುವ ಜೀವನ ಪಾಠ.

Comments are closed.