ನಡೆದಾಡುವ ದೇವರು, ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿ, ಕೋರೋನಾ ಕಾಲದಲ್ಲಿ ಜನತೆಗೆ ಕೊಟ್ಟ ಸಂದೇಶವೇನು ಗೊತ್ತಾ..??

ನಮಸ್ಕಾರ ಸ್ನೇಹಿತರೇ ಉತ್ತರ ಕರ್ನಾಟಕದ ನಡೆದಾಡುವ ದೇವರು, ಸರಳ ಸಾಕ್ಷರ ಜೀವಿ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಬಗ್ಗೆ ಕೇಳಿರುತ್ತಿರಿ. ಅವರ ಪ್ರವಚನಗಳನ್ನು ನೋಡಿರುತ್ತಿರಿ. ಅವರ ಪ್ರವಚನದ ವೇಳೆ ಎಷ್ಟೇ ಗದ್ದಲವಿದ್ದರೂ, ಪಿನ್ ಡ್ರಾಪ್ ಸೈಲೆಂಟ್ ಆಗುತ್ತದೆ ಎಂಬುದನ್ನ ನಾವು ನೀವೆಲ್ಲರೂ ನೋಡಿದ್ದೆವೆ. ವಿಜಯಪುರದ ಜ್ಞಾನ ಯೋಗಾಶ್ರಮದಿಂದ ಹಿಡಿದು ರಾಜ್ಯದ ಹಳ್ಳಿ ಹಳ್ಳಿಗೂ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಗಳ ನಡೆ-ನುಡಿ-ಜೀವನ ಶೈಲಿ-ಹಿತವಚನ ಎಲ್ಲವೂ ಅನುಕರಣೀಯ. ಈಗ ಕೋರೋನಾ ವಿಶ್ವಾದ್ಯಂತ ತನ್ನ ಆರ್ಭಟ ತೋರುತ್ತಿದೆ. ಜನ ಇಹಲೋಕ ತ್ಯಜಿಸಿದ್ದಾರೆ. ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇಂತಹ ಸಂದರ್ಭದಲ್ಲಿ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಗಳು ಜನತೆಗೆ ಒಂದು ಸಂದೇಶ ನೀಡಿದ್ದಾರೆ. ಅದು ಈ ಕೆಳಗಿನಂತಿದೆ.

ನೀವು ಯಾಕೆ ಚಿಂತೆ ಮಾಡುತ್ತೀರಿ, ಎಲ್ಲವನ್ನೂ ಲಾಕ್ ಮಾಡಿಲ್ಲ, ಸೂರ್ಯೋದಯವನ್ನು ಲಾಕ್ ಮಾಡಿಲ್ಲ, ಪ್ರೀತಿಯನ್ನು ಲಾಕ್ ಮಾಡಿಲ್ಲ, ಕುಟುಂಬ ಸಮಯವನ್ನು ಲಾಕ್ ಮಾಡಿಲ್ಲ, ದಯೆ ಲಾಕ್ ಆಗಿಲ್ಲ, ಸೃಜನಶೀಲತೆಯನ್ನು ಲಾಕ್ ಮಾಡಿಲ್ಲ, ಕಲಿಕೆ ಲಾಕ್ ಆಗಿಲ್ಲ, ಸಂಭಾಷಣೆಯನ್ನು ಲಾಕ್ ಮಾಡಲಾಗಿಲ್ಲ, ಕಲ್ಪನೆಯನ್ನು ಲಾಕ್ ಮಾಡಿಲ್ಲ, ಓದುವಿಕೆ ಲಾಕ್ ಆಗಿಲ್ಲ, ಸಂಭಂದವನ್ನು ಲಾಕ್ ಮಾಡಿಲ್ಲ, ಪ್ರಾರ್ಥನೆ ಲಾಕ್ ಆಗಿಲ್ಲ, ಧ್ಯಾನವನ್ನು ಲಾಕ್ ಮಾಡಿಲ್ಲ, ನಿದ್ರೆ ಲಾಕ್ ಆಗಿಲ್ಲ, ಮನೆಯಿಂದ ಕೆಲಸ ಲಾಕ್ ಆಗಿಲ್ಲ, ಭರವಸೆ ಲಾಕ್ ಆಗಿಲ್ಲ, ನಿಮ್ಮಲ್ಲಿರುವುದನ್ನು ಪಾಲಿಸಿ.

ನೀವು ಯಾವಾಗಲೂ ಮಾಡಲು ಬಯಸಿದ್ದನ್ನು ಮಾಡಲು ಲಾಕ್ ಡೌನ್ ಒಂದು ಅವಕಾಶ. ವೆಂಟಿಲೇಟರ್ ಗಿಂತ ಮಾಸ್ಕ್ ಉತ್ತಮವಾಗಿದೆ. ಐಸಿಯುಗಿಂತ ಮನೆ ಉತ್ತಮವಾಗಿದೆ. ಗುಣಪಡಿಸುವುದಕ್ಕಿಂತ ತಡೆಗಟ್ಟುವಿಕೆ ಉತ್ತಮವಾಗಿದೆ. ಆದ್ದರಿಂದ ಸಂತೋಷವಾಗಿರಿ. ನಿಮಗೆ ಸಮಾಧಾನವೆನಿಸಿದರೇ ನಿಮ್ಮ ಹಿತೈಷಿಗೂ ಕಳುಹಿಸಿ.

Comments are closed.