ಕನ್ನಡದ ಇತಿಹಾಸದಲ್ಲಿ ಮೊದಲ ಬಾರಿಗೆ ನಟನಿಗೆ ದೇವಸ್ಥಾನ ಕಟ್ಟಿದ್ದ ಅಭಿಮಾನಿಗಳು, ಇದಕ್ಕೆ ಖರ್ಚಾಗಿದ್ದು ಎಷ್ಟು ಲಕ್ಷ ಗೊತ್ತೇ?? ಯಪ್ಪಾ ಇಷ್ಟೊಂದ?

ನಮಸ್ಕಾರ ಸ್ನೇಹಿತರೇ ಹಲವಾರು ಸ್ಟಾರ್ ನಟರ ಅಭಿಮಾನಿಗಳು ಅವರ ಫೋಟೋವನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡುವುದನ್ನು ನೀವು ಕೇಳಿರುತ್ತೀರಿ ಅಥವಾ ಸುದ್ದಿಮಾಧ್ಯಮಗಳಲ್ಲಿ ನೋಡಿರುತ್ತೀರಿ. ಆದರಿಂದು ಮೊದಲಬಾರಿಗೆ ಕನ್ನಡ ಚಿತ್ರರಂಗದ ಖ್ಯಾತ ನಟರೊಬ್ಬರ ಅಭಿಮಾನಿಗಳು ಸೇರಿ ದೇವಸ್ಥಾನವನ್ನು ಕಟ್ಟಲು ಹೊರಟಿದ್ದಾರೆ.

ಹೌದು ಗೆಳೆಯರೇ ಅವರು ಇನ್ಯಾರು ಅಲ್ಲ ನಮ್ಮೆಲ್ಲರ ನೆಚ್ಚಿನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಅಭಿಮಾನಿಗಳು ಅವರಿಗಾಗಿ ಅವರ ಮೂರ್ತಿಯನ್ನು ಸ್ಥಾಪಿಸಿ ದೇವಸ್ಥಾನವನ್ನು ಕಟ್ಟಿಸಲು ಈಗಾಗಲೇ ಬಹುತೇಕ ಎಲ್ಲಾ ಕಾರ್ಯಗಳನ್ನು ಕೂಡ ಮುಗಿಸಿದ್ದಾರೆ. ಇನ್ನು ಈ ಕಾರ್ಯ ನಡೆಯುತ್ತಿರುವುದು ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಕುರುಕುಂದ ಗ್ರಾಮದಲ್ಲಿ.

ಈಗಾಗಲೇ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೇ ಭಾರತೀಯ ಚಿತ್ರರಂಗದ ಬಹುತೇಕ ಎಲ್ಲಾ ಭಾಷೆಗಳಲ್ಲೂ ಕೂಡ ಕನ್ನಡದ ಕೀರ್ತಿಯನ್ನು ಹಾರಿಸಿರುವ ಕಿಚ್ಚ ಸುದೀಪ್ ರವರಿಗೆ ಬಹುತೇಕ ಎಲ್ಲ ಸಮುದಾಯಗಳಲ್ಲೂ ಕೂಡ ಅಭಿಮಾನಿಗಳಿದ್ದಾರೆ. ಇನ್ನು ಈಗ ಈ ಅಭಿಮಾನಿಗಳು ಕಿಚ್ಚ ಸುದೀಪ್ ರವರು ನಮ್ಮ ನಾಯಕ ಜನಾಂಗದ ಘನತೆಯನ್ನು ಎತ್ತಿಹಿಡಿದಿರುವ ನಟ ಎಂಬ ಕಾರಣಕ್ಕಾಗಿ ಅವರ ಮೇಲಿನ ಅಭಿಮಾನದ ದೃಷ್ಟಿಯಿಂದಾಗಿ ದೇವಸ್ಥಾನದಲ್ಲಿ ಅವರ ಮೂರ್ತಿಯನ್ನು ಈಗಾಗಲೇ ಸ್ಥಾಪಿಸಿದ್ದಾರೆ. ಇನ್ನೂ ಅವರ ಪಕ್ಕದಲ್ಲಿ ವಾಲ್ಮೀಕಿ ಸ್ವಾಮೀಜಿಯ ಮೂರ್ತಿಯನ್ನು ಕೂಡ ಪ್ರತಿಷ್ಠಾಪಿಸಲಾಗುತ್ತದೆ. ಬಹುತೇಕ ಎಲ್ಲಾ ಕಾರ್ಯಗಳು ಕೂಡ ಮುಗಿದಿದ್ದು ಇನ್ನು ಕೇವಲ 20 ದಿನಗಳ ಕಾರ್ಯವಷ್ಟೇ ಮುಗಿಯಲು ಬಾಕಿ ಇದೆ.

ಈಗಾಗಲೇ ದೇವಸ್ಥಾನದ ನಿರ್ಮಾಣಕ್ಕೆ ಬರೋಬ್ಬರಿ 12 ಲಕ್ಷ ಖರ್ಚಾಗಿದ್ದು ಅಭಿಮಾನಿಗಳೇ ಬಹುತೇಕ ಎಲ್ಲವನ್ನು ಸೇರಿ ಖರ್ಚುವೆಚ್ಚಗಳನ್ನು ನೋಡಿಕೊಂಡಿದ್ದಾರೆ. ಇನ್ನು ಇದಕ್ಕಾಗಿ ವಾಚ್ಮೆನ್ ಒಬ್ಬನನ್ನು ಕೂಡ ನೇಮಿಸಿ ಅತನಿಗೆ ತಿಂಗಳಿಗೆ ಅಭಿಮಾನಿಗಳೇ ಕೈಯಿಂದ ಏಳರಿಂದ ಎಂಟು ಸಾವಿರ ರೂಪಾಯಿ ಸಂಭಾವನೆ ನೀಡಲಿದ್ದಾರಂತೆ. ಇನ್ನು ದೇವಸ್ಥಾನದಲ್ಲಿ ಪುನೀತ್ ರಾಜಕುಮಾರ್ ಅವರ ಫೋಟೋವನ್ನು ಕೂಡ ಅಳವಡಿಸಲಿದ್ದಾರಂತೆ. ಈ ಅಭಿಮಾನಿಗಳ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.