ಮುಗ್ಧ ಸನ್ನಿಧಿಗೆ ಮೋಸ, ಮತ್ತೊಮ್ಮೆ ಪ್ರೇಕ್ಷಕರ ಕೆಂಗಣ್ಣಿಗೆ ಗುರಿಯಾದ ಅರವಿಂದ್, ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಅರವಿಂದ್ ರವರು ಜೋಡಿ ಟಾಸ್ಕ್ ಮುಗಿದ ಬಳಿಕ ಪ್ರೇಕ್ಷಕರ ಮನಗೆಲ್ಲುವಲ್ಲಿ ಸ್ಪರ್ಧಿಗಳಲ್ಲಿ ಮೊದಲನೇ ಸ್ಥಾನ ಪಡೆದು ಕೊಂಡಿದ್ದರು ಎಂದರೆ ತಪ್ಪಾಗಲಾರದು ಏಕೆಂದರೆ ಜೋಡಿ ಟಾಸ್ಕ್ ನಲ್ಲಿ ಹಾಗೂ ನಂತರದ ಮುಂದಿನ ಕೆಲವು ವಾರಗಳ ಕಾಲ ಅರವಿಂದ ಅವರು ಬಹಳ ಅತ್ಯುತ್ತಮವಾಗಿ ಆಟ ಆಡಿ ಉತ್ತಮ ನಡವಳಿಕೆಯ ಮೂಲಕ ಕೂಡ ಪ್ರೇಕ್ಷಕರ ಮನಗೆದ್ದಿದ್ದರು. ಆದರೆ ಇದೇ ಸಮಯದಲ್ಲಿ ಅದ್ಯಾಕೋ ತಿಳಿದಿಲ್ಲ ಕಳೆದ ಕೆಲವು ವಾರಗಳಿಂದ ಅರವಿಂದ ಅವರು ನಡೆದುಕೊಳ್ಳುವ ರೀತಿ ಬಹುತೇಕ ಜನರಿಗೆ ಇಷ್ಟವಾಗುತ್ತಿಲ್ಲ.

ಎಲ್ಲಿ ನೋಡಿದರೂ ಕೂಡ ಅರವಿಂದ್ ರವರ ಕುರಿತು ಅಸಮಾಧಾನದ ಮಾತುಗಳು ಬಹುತೇಕ ಜನರ ಬಾಯಲ್ಲಿ ಕೇಳಿ ಬರುತ್ತಿವೆ. ತಾವು ಎರಡು ಮೊಟ್ಟೆ ತಿಂದಿದಿದ್ದರೂ ಕೂಡ ನಿಧಿ ಸುಬ್ಬಯ್ಯ ರವರಿಗೆ ಮೊಟ್ಟೆಯ ಕುರಿತು ಪ್ರಶಾಂತ್ ರವರಿಗೆ ಕೇಳಿ ಎಂದು ಹೇಳಿ ಕೊಡುವ ಮೂಲಕ ಮತ್ತೊಮ್ಮೆ ಅದೇ ರೀತಿಯ ಕೆಲಸಕ್ಕೆ ಕೈ ಹಾಕಿದ್ದರು. ಇಷ್ಟು ಸಾಲದೆಂಬಂತೆ ವಿವಿಧ ವಿದ್ಯಮಾನಗಳ ಮೂಲಕ ಕ್ರೀಡಾ ಸ್ಪೂರ್ತಿಯನ್ನು ಮರೆತು ಆಟವಾಡಿ ಅದರಲ್ಲಿಯೂ ಬಾಲನ್ನು ತಲೆಯಿಂದ ತಳ್ಳುವ ಕ್ರೀಡೆಯಲ್ಲಿ ಅರವಿಂದ್ ಅವರ ನಡೆದುಕೊಂಡ ರೀತಿ ಒಬ್ಬರಿಗೂ ಕೂಡ ಇಷ್ಟವಾಗಿಲ್ಲ.

ಇಷ್ಟೆಲ್ಲ ಚರ್ಚೆಗಳು ನಡೆಯುತ್ತಿರುವಾಗ ಕಿಚ್ಚ ರವರ ಕಿವಿಮಾತು ಬಂದರೂ ಕೂಡ ಅರವಿಂದ್ ರವರು ನೆನ್ನೆ ನಡೆದ ಟಾಸ್ಕ್ ನಲ್ಲಿ ಗೆದ್ದ ಆರ್ನೂರು ಅಂಕಗಳನ್ನು ಸರಿಯಾಗಿ ಆರು ಜನಕ್ಕೆ ವಿಂಗಡನೆ ಮಾಡುವಾಗ, ಸನ್ನಿಧಿ ರವರು ಹೆಚ್ಚಿನ ಪಾಲನ್ನು ಪಡೆದು ಕೊಳ್ಳಬೇಕಾಗಿತ್ತು. ಯಾಕೆಂದರೆ ಎಲ್ಲರೂ ಕೇವಲ 100 ಅಂಕ ಮಾತ್ರ ಬಾಜಿ ಕಟ್ಟಿದ್ದರು. ಆದರೆ ಸನ್ನಿಧಿ ರವರು 120 ಕಟ್ಟಿದ್ದರು, ಆರು ಜನರು ಒಟ್ಟಾಗಿ 600 ಅಂಕಗಳನ್ನು ತಾವು ಕಟ್ಟಿದ ಬಾಜಿದ ಪ್ರಕಾರ ವಿಭಜನೆ ಮಾಡಿ ಕೊಳ್ಳಬೇಕಾಗಿತ್ತು. ಆದರೆ ಅರವಿಂದ್ ರವರು ಆರು ಜನ ಇದ್ದೇವೆ. ಎಲ್ಲರಿಗೂ ನೂರು ನೂರು ಎಂದು ಮಾತನಾಡಿದರು, ಸನ್ನಿಧಿ ರವರು 120 ಕಟ್ಟಿದ್ದೇನೆ ಎಂದರೂ ಕೂಡ ಹಾಗೆ ಹೀಗೆ ಮಾತನಾಡಿ ಸನ್ನಿಧಿ ರವರನ್ನು ಒಂದು ರೀತಿಯ ಕನ್ಫ್ಯೂಸ್ ಮಾಡಿದರು ಎಂದರೆ ತಪ್ಪಾಗಲಾರದು, ಕನಿಷ್ಠ ಪಕ್ಷ ಎಲ್ಲರಿಗೂ ಒಂದೆರಡು ಅಂಕಗಳು ಕಡಿಮೆ ನೀಡಿ ವೈಷ್ಣವಿ ದವರಿಗೆ ಹೆಚ್ಚು ನೀಡಬಹುದಾಗಿತ್ತು ಎಂಬುದು ಪ್ರೇಕ್ಷಕರ ಅಭಿಪ್ರಾಯ.

Comments are closed.