ಸ್ವಂತ ತಂದೆ ತಾಯಿ ವಿರುದ್ಧವೇ ಪೊಲೀಸ್ ಠಾಣೆ ಮೆಟ್ಟಿಲೇರಿದ ತಲಪತಿ ವಿಜಯ್, ಕಾರಣವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತ ಚಿತ್ರರಂಗದಲ್ಲಿ ಸಾಕಷ್ಟು ಪ್ರತಿಭಾನ್ವಿತ ಹಾಗೂ ಯಶಸ್ವಿ ನಟರಿದ್ದಾರೆ. ಅವರಲ್ಲಿ ತಮಿಳು ಚಿತ್ರರಂಗದ ತಲಪತಿ ಎಂದೇ ಖ್ಯಾತರಾಗಿರುವ ವಿಜಯ್ ಜೋಸೆಫ್ ರವರು ಯಾವಾಗಲೂ ಪ್ರತ್ಯೇಕ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇದಕ್ಕೆ ಮುಖ್ಯವಾದ ಕಾರಣವೆಂದರೆ ಅವರು ತಮ್ಮ ಚಿತ್ರಗಳಲ್ಲಿ ಕೂಡ ಜನರಿಗೆ ಉತ್ತಮವಾದಂತಹ ಸಂದೇಶವನ್ನು ಸಾರಲು ಪ್ರಯತ್ನಿಸುತ್ತಾರೆ. ಇದನ್ನು ಕೇವಲ ಒಂದೆರಡು ಚಿತ್ರಗಳಲ್ಲಿ ಮಾತ್ರವಲ್ಲದೆ ಪ್ರತಿ ಚಿತ್ರಗಳಲ್ಲಿ ಕೂಡ ವಿಜಯ್ ಜೋಸೆಫ್ ರವರು ಮಾಡುತ್ತಾರೆ.

ಹೌದು ಸ್ನೇಹಿತರೆ ತಮಿಳು ಚಿತ್ರರಂಗದ ಈಗಿನ ಕಾಲದ ಅತ್ಯಂತ ಯಶಸ್ವಿ ನಟ ಯಾರೆಂದು ಕೇಳಿದರೆ ಖಂಡಿತವಾಗಿ ಎಲ್ಲರೂ ನೀಡುವ ಉತ್ತರ ಒಂದೇ ಅದು ತಲಪತಿ ವಿಜಯ್. ಹೌದು ಸ್ನೇಹಿತರೇ ತಲಪತಿ ವಿಜಯ್ ಅವರ ಯಶಸ್ಸು ಕೇವಲ ತಮಿಳುನಾಡಿಗೆ ಮಾತ್ರ ಸೀಮಿತವಾಗದೆ ದೇಶ-ವಿದೇಶಗಳಲ್ಲಿಯೂ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ನಟನೆ ನೃತ್ಯ ಸಾಹಸ ಮುಖಭಾವ ಹೀಗೆ ಯಾವುದೇ ವಿಧವಾದ ಸಿನಿಮಾ ಜ್ಞಾನವನ್ನು ತೆಗೆದುಕೊಂಡರೂ ಸಹ ಅದರಲ್ಲಿ ತಲಪತಿ ವಿಜಯ್ ಅವರು ಮಾಸ್ಟರ್ ಆಗಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚಿಗೆ ತಲಪತಿ ವಿಜಯ್ ಅವರು ಸಾಕಷ್ಟು ಸುದ್ದಿಯಲ್ಲಿದ್ದಾರೆ ಕಾರಣ ಅವರ ಕುಟುಂಬದಿಂದ. ಹೌದು ಸ್ನೇಹಿತರೆ ಇದಕ್ಕೆ ಕಾರಣ ಏನು ಹಾಗೂ ಇದರ ಕುರಿತಂತೆ ಸವಿವರವಾಗಿ ನಿಮಗೆ ಹೇಳುತ್ತೇವೆ ಬನ್ನಿ.

ಹೌದು ಸ್ನೇಹಿತರೆ 2020 ಯಲ್ಲಿ ವಿಜಯ್ ರವರ ತಂದೆಯಾಗಿರುವ ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ರಾಗಿರುವ ಚಂದ್ರಶೇಖರ್ ರವರು ತಳಪತಿ ವಿಜಯ್ ಅವರ ಅಭಿಮಾನಿ ಬಳಗವನ್ನು ವಿಜಯ್ ಮಕ್ಕಳ್ ಇಯಕ್ಕಮ್ ಎನ್ನುವ ಪಕ್ಷವನ್ನಾಗಿ ಬದಲಿಸಿ ಚುನಾವಣಾ ಆಯೋಗದಡಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಇನ್ನು ರಾಜಕೀಯವೆಂದರೆ ವಿಜಯ್ ಅವರಿಗೆ ಆಗುವುದಿಲ್ಲ. ಹೀಗಾಗಿಯೇ ಈ ಪಕ್ಷ ನನಗೆ ಸಂಬಂಧವಿಲ್ಲ ಇಲ್ಲಿ ನನ್ನ ಹೆಸರನ್ನು ಜೋಡಿಸುವ ಮೂಲಕ ನನ್ನ ಅಭಿಮಾನಿಗಳನ್ನು ತಪ್ಪುದಾರಿಗೆ ಎಳೆಯಲಾಗುತ್ತಿದೆ ಮಾಡಲಿ ಮುಂದಿನ ದಿನಗಳಲ್ಲಿ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ಮೊದಲೇ ಹೇಳಿದ್ದರು.

ಆದರೆ ಅವರ ತಂದೆ ಹಾಗುತ್ತಾ ಇದಕ್ಕೆ ಕಿವಿಗೊಡದ ಇದನ್ನು ಪಕ್ಷವನ್ನಾಗಿ ಮುಂದುವರಿಸಿಕೊಂಡು ಹೋಗಿದ್ದರು. ಈಗ ತಲಪತಿ ವಿಜಯ್ ಅವರು ತಮ್ಮ ತಂದೆ ಹಾಗೂ ತಾಯಿ ಸೇರಿದಂತೆ ಒಟ್ಟು 11 ಜನರ ವಿರುದ್ಧ ದೂರು ನೀಡಿದ್ದು ಇದನ್ನು ಈಗಲೇ ಸ್ಥಗಿತಗೊಳಿಸುವಂತೆ ಕೋರಿದ್ದಾರೆ. ಈಗಾಗಲೇ ಇದು ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಲ್ಲಿ ಕೂಡ ಸಾಕಷ್ಟು ಸುದ್ದಿಯಾಗಿದ್ದು ಮುಂದಿನ ದಿನಗಳಲ್ಲಿ ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂದು ಕಾಯಬೇಕಾಗಿದೆ. ಇನ್ನು ಈ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.