ಈ ಬಾರಿಯ ಬಿಗ್ ಬಾಸ್ ನಲ್ಲಿ ಯಾರು ಊಹಿಸದೆ ನಡೆದ ಮೂರು ವಿಚಿತ್ರ ಘಟನೆಗಳು ಯಾವ್ಯಾವು ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡ ಕಿರುತೆರೆಯಲ್ಲಿ ಇದುವರೆಗೂ ಎಂಟು ಬಾರಿ ಬಿಗ್ ಬಾಸ್ ಕಾರ್ಯಕ್ರಮ ಪ್ರಸಾರ ಗೊಂಡಿದೆ, ಏಳು ಸೀಸನ್ ಗಳು ಕೂಡ ಪ್ರೇಕ್ಷಕರ ಮನಗೆಲ್ಲುವಲ್ಲಿ ಬಿಗ್ ಬಾಸ್ ಕಾರ್ಯಕ್ರಮ ಯಶಸ್ವಿಯಾಗಿದ್ದು ಈ ಬಾರಿಯೂ ಕೂಡ ಮತ್ತೊಮ್ಮೆ ಐತಿಹಾಸಿಕ ಪಿಆರ್ಪಿ ಪಡೆದು ಕೊಳ್ಳುತ್ತದೆ ಎನ್ನುವಷ್ಟರಲ್ಲಿ ಕಾರ್ಯಕ್ರಮ ನಿಂತು ಹೋಗಿದೆ, ದಿನೇ ದಿನೇ ತನ್ನ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳುತ್ತಾ ಕೊನೆಯ ಹಂತದಲ್ಲಿ ಎಂದಿನಂತೆ ಮತ್ತಷ್ಟು ಕುತೂಹಲ ಕೆರಳಿಸಿದ್ದ ಮನೆಗೆ ಈ ಬಾರಿ ಇತರ ಏಳು ಸೀಸನ್ ಗಳಿಗಿಂತ ಕೊಂಚ ವಿಚಿತ್ರ ಘಟನೆಗಳಿಗೆ ಸಾಕ್ಷಿಯಾಗಿದೆ. ಹೀಗೆ ಯಾರೂ ಊಹಿಸದ ರೀತಿಯಲ್ಲಿ ನಡೆದ ಮೂರು ವಿಚಿತ್ರ ಘಟನೆಗಳ ಕುರಿತು ನಾವು ತಿಳಿಸುತ್ತೇವೆ ಕೇಳಿ

ಮೊದಲನೆಯದಾಗಿ ಕಳೆದ ಏಳು ಸೀಸನ್ ಗಳಲ್ಲಿ ಪ್ರತಿಯೊಂದು ವಾರವೂ ಕೂಡ ಕಿಚ್ಚ ಸುದೀಪ್ ರವರು ತಪ್ಪದೆ ಬಿಗ್ ಬಾಸ್ ಕಾರ್ಯಕ್ರಮ ನಡೆಸಿ ಕೊಡುತ್ತಿದ್ದರು, ಆದರೆ ಈ ಬಾರಿ ಅನಾರೋಗ್ಯದ ಕಾರಣ ಕಿಚ್ಚ ಸುದೀಪ್ ರವರು ಕೆಲವೊಂದು ವಾರಗಳನ್ನು ತಪ್ಪಿಸಿ ಕೊಂಡಿದ್ದಾರೆ ಹಾಗೂ ಈ ವಾರಗಳಲ್ಲಿ ವಾಹಿನಿಯು ಇನ್ಯಾವುದೇ ನಟರನ್ನು ಕರೆಸದೆ ಕಾರ್ಯಕ್ರಮ ನಡೆಸಿಕೊಡಲು ಅನುವು ಮಾಡಿಕೊಟ್ಟಿಲ್ಲ. ಈ ಮೂಲಕ ಈ ಕಾರ್ಯಕ್ರಮ ನಡೆಸುವುದು ಕಿಚ್ಚ ಸುದೀಪ್ ರವರು ಮಾತ್ರ ಎಂಬುದನ್ನು ಮತ್ತೊಮ್ಮೆ ಸಾರಿ ಹೇಳಿದೆ.

ಇನ್ನು ಎರಡನೆಯದಾಗಿ ಇದೇ ಮೊಟ್ಟ ಮೊದಲ ಬಾರಿಗೆ ಬಿಗ್ ಬಾಸ್ ಕಾರ್ಯಕ್ರಮ 100 ದಿನಗಳಿಂದ ಮುನ್ನ ನಿಂತು ಹೋಗಿದೆ ಕೆಲವೊಂದು ಸೀಸನ್ ಗಳಲ್ಲಿ ನೂರು ದಿನಗಳಾದ ಬಳಿಕ ಕೂಡ ಎರಡು-ಮೂರು ವಾರಗಳ ಕಾಲ ಕಾರ್ಯಕ್ರಮವನ್ನು ಮುಂದುವರಿಸಲಾಗಿತ್ತು, ಆದರೆ ಈ ಬಾರಿ ಅರ್ಧಕ್ಕೆ ನಿಂತಿರುವುದು ಪರೀಕ್ಷಕರಿಗೆ ನಿಜಕ್ಕೂ ಬೇಸರ ತರಿಸಿದೆ.

ಇನ್ನು ಕೊನೆಯದಾಗಿ ಇದೇ ಮೊಟ್ಟ ಮೊದಲ ಬಾರಿಗೆ ಸ್ಪರ್ಧಿಯೊಬ್ಬರು ನಾಮಿನೇಟ್ ಆಗದೆ ಹಾಗೂ ಎಲಿಮಿನೇಟ್ ಆಗದೆ ತಮ್ಮ ವೈಯಕ್ತಿಕ ನಿರ್ಧಾರದಿಂದ ತಾವು ಮನೆಯಿಂದ ಹೊರಗಡೆ ಹೋಗುವ ಮೂಲಕ ಮತ್ತೊಬ್ಬರು ಸ್ಪರ್ಧೆಯನ್ನು ಉಳಿಸುವ ಕೆಲಸ ಮಾಡಿದ್ದಾರೆ, ಬಿಗ್ ಬಾಸ್ ಮನೆಗೆ ಹೊಳಗಡೆ ಹೋದ ಕೆಲವೇ ಕೆಲವು ದಿನಗಳಲ್ಲಿ ಒಂದು ವಾರ ಕಳೆಯದೆ ಸ್ಪರ್ಧೆ ಒಬ್ಬರು ವೈಯಕ್ತಿಕ ನಿರ್ಧಾರದಿಂದ ಹೊರ ಬಂದದ್ದು ಇದೇ ಮೊದಲು ಅವರು ಮತ್ತ್ಯಾರು ಅಲ್ಲ ಅವರೇ ವೈಜಯಂತಿ ಅಡಿಗ.

Comments are closed.