ಸಿನಿಮಾ ಬಾಕ್ಸಾಫೀಸ್ ನಲ್ಲಿ ಧೂಳೆಬ್ಬಿಸುವಾಗ ಯುವರತ್ನಗೆ ಶಾಕ್ ! ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ಯುವರತ್ನ ಸಿನಿಮಾ ಇದೀಗ ಕರ್ನಾಟಕದಲ್ಲಿ ಸೇರಿದಂತೆ ತೆಲುಗು ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ ಕೋಟಿ ಕೋಟಿ ಬಾಚಿಕೊಂಡಿರುವ ಯುವ ರತ್ನ ಸಿನಿಮಾ ಕನ್ನಡದಲ್ಲಿ ಅದ್ವಿತೀಯ ದಾಖಲೆ ಮಾಡುವ ಸೂಚನೆಗಳನ್ನು ಕೂಡ ನೀಡಿದೆ.

ನಟ ಪುನೀತ್ ರಾಜಕುಮಾರ್ ರವರು ನಟಿಸಿರುವ ಎರಡು ಶೇಡ್ ಪಾತ್ರ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡುವುದರಲ್ಲಿ ಯಶಸ್ವಿಯಾಗಿದ್ದು, ಎಲ್ಲಿ ನೋಡಿದರೂ ಯುವರತ್ನ ಸಿನಿಮಾದ ಕುರಿತು ಉತ್ತಮ ವಿಮರ್ಶೆಗಳು ಕಾಣಿಸುತ್ತಿವೆ. ಇಂತಹ ಸಂದರ್ಭದಲ್ಲಿ ಇವರ ಸಿನಿಮಾಗೆ ಶಾಕ್ ಒಂದು ಎದುರಾಗಿದೆ.

ಹೌದು ಸ್ನೇಹಿತರೇ ಕನ್ನಡ ಭಾಷೆಯ ಸಿನಿಮಾಗಳು ಇತ್ತೀಚಿಗೆ ಇನ್ನಿತರ ಭಾಷೆಗಳಲ್ಲಿ ಬಿಡುಗಡೆಯಾಗುತ್ತಿರುವ ಕಾರಣ ಕನ್ನಡ ಸಿನಿಮಾ ರಂಗಕ್ಕೆ ಪೈರಸಿ ಕಾಟ ದಿನೇ ದಿನೇ ಹೆಚ್ಚಾಗುತ್ತಿದೆ, ಅದೇ ರೀತಿ ಯುವರತ್ನ ಸಿನಿಮಾಗೆ ಕೂಡ ಪೈರಸಿ ಕಾಟ ಕಾಡಲಾರಂಭಿಸಿದ್ದು, ಈಗಾಗಲೇ ಯುವ ರತ್ನ ಸಿನಿಮಾ ಬಹುತೇಕರ ಮೊಬೈಲ್ಗಳಲ್ಲಿ ಡೌನ್ಲೋಡ್ ಆಗಿಬಿಟ್ಟಿದೆ. ಕೆಲವರು ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಮತ್ತಷ್ಟು ಜನರಿಗೆ ತಲುಪಿಸುತ್ತಿದ್ದಾರೆ ಆದರೆ ಚಿತ್ರತಂಡ ಕೂಡಲೇ ಎಚ್ಚೆತ್ತುಕೊಂಡು ಡಿಲೀಟ್ ಮಾಡುತ್ತಿದ್ದರು ಕೂಡ ಯಾವುದೇ ಪ್ರಯೋಜನ ಆಗುವಂತೆ ಕಾಣುತ್ತಿಲ್ಲ. ಒಂದು ವೇಳೆ ನಿಮಗೂ ಕೂಡ ಈ ರೀತಿಯ ಪೈರಸಿಯ ಲಿಂಕ್ ಕಂಡು ಬಂದರೆ ದಯವಿಟ್ಟು ಡಿಲೀಟ್ ಮಾಡಿ, ಸಿನಿಮಾಗಳನ್ನ ಥಿಯೇಟರ್ನಲ್ಲಿ ನೋಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದೇವೆ.

Comments are closed.