Kannada News: ಆರೋಗ್ಯ ಎನ್ನುವುದು ಪ್ರತಿಯೊಬ್ಬರು ಕಾಪಾಡಿಕೊಳ್ಳಬೇಕಾದ ಅಂಶ. ನಾವು ಆರೋಗ್ಯವಾಗಿದ್ದರೆ ಮಾತ್ರ ಏನೇ ಆದರು ಜೀವನವನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುವುದಕ್ಕೆ ಸಾಧ್ಯವಾಗುತ್ತದೆ. ಆದರೆ ಯಾವಾಗಲೂ ಎಲ್ಲರೂ ಆರೋಗ್ಯವಾಗಿಯೇ ಇರುತ್ತೇವೆ ಎಂದು ಹೇಳಲಾಗದು. ಕೆಲವೊಮ್ಮೆ ಆರೋಗ್ಯ ಸಮಸ್ಯೆಗಳು ಇನ್ನು ಕೆಲವೊಮ್ಮೆ ಅಪಘಾತ ಹೀಗೆ ಕೆಲವು ಕಾರಣಗಳಿಂದ ಮನುಷ್ಯ ಆರೋಗ್ಯ ತಪ್ಪುತ್ತಾನೆ. ಇದ್ದಕ್ಕಿದ್ದ ಹಾಗೆ ಆರೋಗ್ಯ ಕೈಕೊಟ್ಟು, ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿ ಬಂದಾಗ, ತಕ್ಷಣವೇ ಎಲ್ಲರೂ ಕರೆ ಮಾಡುವುದು 108 ಆಂಬ್ಯುಲೆನ್ಸ್ ನಂಬರ್ ಗೆ.
ಆಂಬ್ಯುಲೆನ್ಸ್ ಓಡಿಸುವ ಡ್ರೈವರ್ ಹತ್ತಿರ ಇರುವ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಬೇಗ ಚಿಕಿತ್ಸೆ ಸಿಗುವ ಹಾಗೆ ಮಾಡುತ್ತಾರೆ ಎಂದೇ ಎಲ್ಲರೂ ನಂಬಿರುತ್ತಾರೆ, ಆದರೆ ಎಲ್ಲವೂ ನಾವೆಂದುಕೊಂಡ ಹಾಗೆ ಆಗುವುದಿಲ್ಲ, ಬೆಂಗಳೂರಿನ ದೇವನಹಳ್ಳಿಯಲ್ಲಿ ಒಬ್ಬ ಆಂಬ್ಯುಲೆನ್ಸ್ ಡ್ರೈವರ್ ಪ್ರೈವೇಟ್ ಆಸ್ಪತ್ರೆಯವರು ಕಮಿಷನ್ ಕೊಡುತ್ತಾರೆ ಎನ್ನುವ ಕಾರಣಕ್ಕೆ ಬಡ ರೋಗಿಗಳು ಎನ್ನುವುದನ್ನು ನೋಡದೆ, ರೋಗಿಗಳನ್ನು ಪ್ರೈವೇಟ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ. ಇದನ್ನು ಓದಿ..Kannada News: ಕನ್ನಡದಲ್ಲಿ ಮಾತನಾಡಬೇಕು ಎಂದು ಪ್ರಯಾಣಿಕರಿಗೆ ಸರಿಯಾಗಿ ಬಿಸಿ ಮುಟ್ಟಿಸಿದ್ದ ಆಟೋ ಚಾಲಕನ ಕಥೆ ಇಂದು ಏನಾಗಿದೆ ಗೊತ್ತೇ?? ಪಾಪ ಅನಿಸುತ್ತೆ ಕಣ್ರೀ.
ಅಲ್ಲಿ ಬಡವರಿಗೆ ದಿನಕ್ಕೆ 30 ಸಾವಿರ ರೂಪಾಯಿ ಬಿಲ್ ಹಾಕಿದ್ದು, ರೋಗಿಯ ಮನೆಯವರು ಆಂಬ್ಯುಲೆನ್ಸ್ ಡ್ರೈವರ್ ಮತ್ತು ಆಸ್ಪತ್ರೆಯವರ ಮೇಲೆ ಗರಂ ಆಗಿ ಜಗಳ ಆಡಲು ಶುರು ಮಾಡಿದಾಗ, ಆಸ್ಪತ್ರೆಯವರು ಡಿಸ್ಕೌಂಟ್ ಕೊಟ್ಟು ಕಳಿಸಿದ್ದಾರೆ. ಈ ವಿಚಾರ ರಹಸ್ಯವಾಗಿ ಚಿತ್ರೀಕರಣ ಆಗಿದ್ದು, ಡ್ರೈವರ್ ನ ಈ ಕೆಟ್ಟ ಬುದ್ಧಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿ, ಇವನಿಗೆ ಸರಿಯಾಗಿ ಬುದ್ಧಿ ಕಲಿಸಬೇಕು ಎನ್ನುತ್ತಿದ್ದಾರೆ ನೆಟ್ಟಿಗರು. ಮನುಷ್ಯರ ಸ್ಥಿತಿಗತಿಗಳನ್ನ ಅರ್ಥ ಮಾಡಿಕೊಳ್ಳದೆ, ಕಮಿಷನ್ ಆಸೆಗಾಗಿ ಇಂಥ ಕೆಲಸ ಮಾಡುವವರಿಗೆ ಏನು ಮಾಡಬೇಕು ಎಂದು ನಿಮ್ಮ ಅಭಿಪ್ರಾಯವನ್ನು ಕಮೆಂಟ್ಸ್ ಮೂಲಕ ತಿಳಿಸಿ. ಇದನ್ನು ಓದಿ..News: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ವಿಡಿಯೋ ದಲ್ಲಿ ಇರುವ ಮಹಿಳೆ ಯಾರು ಗೊತ್ತೇ? ಹಿಂದಿನಿಂದ ಬಂದವನು ಯಾರು ಗೊತ್ತೇ??