Kannada News: ಅಂದವಾಗಿರುವುದೇ ಈ ಮಹಿಳೆ ಮಾಡಿದ ತಪ್ಪು: ಈಕೆಯ ಅಂದದಿಂದ ಈಕೆಯ ಜೀವನದಲ್ಲಿ ಏನೆಲ್ಲಾ ಆಗಿ ಹೋಗಿದೆ ಗೊತ್ತೇ?

Kannada News: ಈಗಿನ ಕಾಲದಲ್ಲಿ ಹೆಣ್ಣಿಗೆ ಎಲ್ಲಿಯೂ ರಕ್ಷಣೆ ಇಲ್ಲ. ಮನೆಯಲ್ಲಿ, ಉದ್ಯೋಗದಲ್ಲಿ ಎಲ್ಲಾ ಕಡೆ ಆಕೆಗೆ ತೊಂದರೆ ನೀಡುವವರೆ ಹೆಚ್ಚಾಗುತ್ತಿದ್ದಾರೆ. ಇತ್ತೀಚೆಗೆ ಮಹಿಳೆಯೊಬ್ಬರಿಗೆ ಕೆಲಸ ಮಾಡುವ ಕಡೆ ವಿಪರೀತವಾಗಿ ತೊಂದರೆ ಕೊಡಲಾಗುತ್ತಿತ್ತು, ಅದನ್ನು ಸಹಿಸಲಾಗದೆ ಆಕೆ ಎಂಥಹ ಕಠಿಣ ನಿರ್ಧಾರ ತೆಗೆದುಕೊಂಡರು ಅಂದ್ರೆ ನಿಜಕ್ಕೂ ಕಣ್ಣೀರು ಬರುತ್ತೆ. ಈ ಘಟನೆ ನಡೆದಿರುವುದು ನಮ್ಮ ಕೊಡಗಿನಲ್ಲಿ. ಈಕೆಯ ಹೆಸರು ಸೌಮ್ಯ, ಇವರಿಗೆ ಕೆಲ ವರ್ಷಗಳ ಹಿಂದೆ ಮದುವೆಯಾಯಿತು, ಆಕೆಯ ಗಂಡ ಜವಾನನಾಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಕೆಲಸ ಹೋದ ನಂತರ, ಮನೆಯಲ್ಲಿ ಕೂತು ಏನು ಮಾಡುವುದು ಎಂದು ಮನೆ ಹತ್ತಿರ ಇದ್ದ ಮಡಿಕೇರಿ ಸೆಸ್ಕಾಂ ನಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕೆಲಸಕ್ಕೆ ಸೇರಿಕೊಂಡರು.

2022ರ ಮೇ ತಿಂಗಳಿನಲ್ಲಿ ಕೆಲಸಕ್ಕೆ ಸೇರಿಕೊಂಡರು, ಶುರುವಿನಲ್ಲಿ ಎಲ್ಲವೂ ಚೆನ್ನಾಗಿತ್ತು. ಅದೇ ಆಫೀಸ್ ನಲ್ಲಿ ವಿನಃ ಎನ್ನುವ ವ್ಯಕ್ತಿ ಅಸಿಸ್ಟಂಟ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಅವನಿಗೆ ಸೌಮ್ಯ ಮೇಲೆ ಆಸಕ್ತಿ ಇದ್ದು, ಆಕೆಗೆ ತೊಂದರೆ ಕೊಡುತ್ತಿದ್ದ, ತನ್ನ ಜೊತೆಗೆ ವಾಟ್ಸಾಪ್ ನಲ್ಲಿ ಚಾಟ್ ಮಾಡಬೇಕು ಎಂದು ಪೀಡಿಸುತ್ತಿದ್ದ. ಇದರಿಂದ ಬೇಸತ್ತ ಸೌಮ್ಯ ತನ್ನ ಗಂಡನಿಗೆ ಹೇಳಿದಳು, ಗಂಡ ಹೆಂಡತಿ ಇಬ್ಬರು ಕೂಡ ವಿನಯ್ ಗೆ ವಾರ್ನಿಂಗ್ ನೀಡಿದರು. ಆದರೆ ಆತನ ನಡವಳಿಕೆ ಬದಲಾಗಲೇ ಇಲ್ಲ. ತೊಂದರೆ ಕೊಡುವುದು ನಿಲ್ಲಲಿಲ್ಲ. ಇದು ಹೀಗೆ ಮುಂದುವರೆದು ಸೌಮ್ಯಾಳಿಗೆ ಜೀವನದಲ್ಲಿ ನೋವುಗಳೇ ಹೆಚ್ಚಾದವು. ಇದನ್ನು ಓದಿ..Kannada News: ಯಾವುದೇ ಮುಲಾಜಿಲ್ಲದೆ ಅದು ಅದಕ್ಕಾಗಿಯೇ ತಿಂಗಳಿಗೆ ಲಕ್ಷ ಲಕ್ಷ ಖರ್ಚು ಮಾಡುತ್ತೇನೆ ಎಂದು ಒಪ್ಪಿಕೊಂಡ ತಾಪ್ಸಿ; ಈಕೆಗೆ ಇದು ಬೇಕಿತ್ತಾ??

Kannada News: ಅಂದವಾಗಿರುವುದೇ ಈ ಮಹಿಳೆ ಮಾಡಿದ ತಪ್ಪು: ಈಕೆಯ ಅಂದದಿಂದ ಈಕೆಯ ಜೀವನದಲ್ಲಿ ಏನೆಲ್ಲಾ ಆಗಿ ಹೋಗಿದೆ ಗೊತ್ತೇ? 2

ಇದರಿಂದ ಯಾರು ಊಹಿಸದ ಭಯಂಕರ ನಿರ್ಧಾರ ತೆಗೆದುಕೊಂಡು ಗಂಡ ಮನೆಯಲ್ಲಿ ಇಲ್ಲದೆ ಇದ್ದಾಗ, ಕೀಟನಾಶಕ ಸೇವಿಸಿ, ಪ್ರಾಣ ಕಳೆದುಕೊಂಡಿದ್ದಾಳೆ. ಗಂಡ ಮನೆಗೆ ಬಂದು ಸೌಮ್ಯಾಳನ್ನು ಆ ಸ್ಥಿತಿಯಲ್ಲಿ ನೋಡಿ ಬೆಚ್ಚಿ ಬಿದ್ದಿದ್ದಾನೆ. ಈ ಘಟನೆ ಬಗ್ಗೆ ಪೊಲೀಸರ ಬಳಿ ದೂರು ನೀಡಿದ್ದು, ಸೌಮ್ಯಾಳ ಗಂಡ ನೀಡಿದ ಕಂಪ್ಲೇಂಟ್ ಮ ಅನುಸಾರ ವಿನಯ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಈ ವಿಷಯ ಗೊತ್ತಾದ ಬಳಿಕ, ಎಲ್ಲರೂ ಕೂಡ ಕಂಪ್ಲೇಂಟ್ ಕೊಡುವುದನ್ನು ಈ ಮೊದಲೇ ಮಾಡಿದ್ದರೆ, ಸೌಮ್ಯ ಪ್ರಾಣ ಉಳಿಯುತ್ತಿತ್ತು ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ಯಾರದ್ದೋ ಸ್ವಾರ್ಥಕ್ಕೆ ಅನ್ಯಾಯವಾಗಿ ಒಂದು ಜೀವ್ ಬಲಿಯಾಗಿದೆ. ಇದನ್ನು ಓದಿ..Bhagyalakshmi: ಲಕ್ಷ್ಮಿಯನ್ನು ಹೊರಹಾಕುವ ಸ್ಕೆಚ್ ಕಾವೇರಿಯದ್ದೇ: ಕೀರ್ತಿ ಗೆ ಫುಲ್ ಸಪೋರ್ಟ್. ಆದರೆ ಮುಂದೇನು ಆಗಲಿದೆ ಗೊತ್ತೇ? ಪ್ರೇಕ್ಷಕರು ಊಹಿಸದ ಟ್ವಿಸ್ಟ್.