ನಮಸ್ಕಾರ ಸ್ನೇಹಿತರೇ ಭೂಮಿ ಮೇಲೆ ಜನಿಸುವ ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಯಶಸ್ಸನ್ನು ಸಾಧಿಸಬೇಕೆಂಬ ಆಸೆ ಮತ್ತು ಕನಸು ಸದಾ ಇರುತ್ತದೆ. ಆದರೇ ಕೆಲವೊಮ್ಮೆ ನೀರಿಕ್ಷಿತ ಪ್ರಮಾಣದ ಯಶಸ್ಸು ಲಭಿಸುವುದಿಲ್ಲ. ಅದಕ್ಕಾಗಿಯೇ ಚಾಣಕ್ಯ ಐದು ನೀತಿಗಳನ್ನ ಹೇಳಿದ್ದಾರೆ. ಈ ಐದು ನೀತಿಗಳನ್ನ ಅನುಸರಿಸಿದರೇ ಜೀವನದಲ್ಲಿ ಖಂಡಿತವಾಗಿ ಯಶಸ್ವಿಯಾಗಬಹುದು ಎಂದು ಹೇಳಿದ್ದಾರೆ. ಬನ್ನಿ ಆ ನೀತಿಗಳನ್ನ 2022 ರಲ್ಲಿ ಅನುಸರಿಸುವ ಮೂಲಕ ಯಶಸ್ವಿಯಾಗೋಣ. ಆ ನೀತಿಗಳು ಈ ಕೆಳಗಿನಂತಿವೆ.
1.ಮಾಡಿದ ತಪ್ಪನ್ನೇ ಮತ್ತೊಮ್ಮೆ ಮಾಡದಿರಿ – ಮನುಷ್ಯ ತಾನು ಮಾಡಿದ ತಪ್ಪುಗಳಿಂದ ಪಾಠ ಕಲಿಯಬೇಕು. ತಪ್ಪಿನಿಂದ ತಿದ್ದಿಕೊಂಡು ಜೀವನದಲ್ಲಿ ಮುಂದೆಂದೂ ಆ ತಪ್ಪನ್ನು ಪುನರಾವರ್ತಿಸಬಾರದು. ಹಾಗಾಗಿ ಚಾಣಕ್ಯ ಮಾಡಿದ ತಪ್ಪನ್ನ ಮತ್ತೊಮ್ಮೆ ಮಾಡಬೇಡಿ ಎಂದು ಹೇಳುತ್ತಾನೆ.
2.ಕೋಪ ಮತ್ತು ಅಹಂಕಾರವನ್ನು ಬಿಟ್ಟು ಬಿಡಿ – ಮನುಷ್ಯನ ಅವನತಿಗೆ ಕೋಪ ಮತ್ತು ಅಹಂಕಾರವೇ ಕಾರಣ. ಹಾಗಾಗಿ ಆ ಎರಡು ಗುಣಗಳನ್ನ ಇಂದಿನಿಂದಲೇ ಬಿಟ್ಟು ಮುಂದೆ ಸಾಗಿ.
3.ಮಾಧುರ್ಯ ಮತ್ತು ವಿನಮ್ರತೆಯ ಭಾವ ಬೆಳೆಸಿಕೊಳ್ಳಿ – ಮನುಷ್ಯ ಸಂಘಜೀವಿ. ಸಮಾಜದಲ್ಲಿ ನಮ್ಮ ಮಾತು ಹಾಗೂ ನಡತೆ ಮೂಲಕ ಜನರ ವಿಶ್ವಾಸ ಗಳಿಸಬೇಕು. ಹಾಗಾಗಿ ಮಾತು ಮಾಧುರ್ಯವಾಗಿ ಮತ್ತು ನಡತೆಯಲ್ಲಿ ವಿನಮ್ಯರಾಗಿರಿ ಎಂದು ಚಾಣಕ್ಯ ಸಲಹೆ ನೀಡುತ್ತಾರೆ.
4.ಸಮಯದ ಮಹತ್ವ ಅರಿಯಿರಿ – ಸಮಯ ಬಹಳ ಮುಖ್ಯವಾದದ್ದು. ಒಂದು ಭಾರಿ ಸಮಯ ಹೋದರೇ ಮತ್ತೆಂದೂ ವಾಪಸ್ ಬರುವುದಿಲ್ಲ. ಹಾಗಾಗಿ ಇರುವ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಸಮಯವನ್ನ ವ್ಯರ್ಥ ಮಾಡಬೇಡಿ ಎಂದು ಚಾಣಕ್ಯ ಸಲಹೆ ನೀಡುತ್ತಾರೆ.
5.ಶಿಸ್ತು – ಚಾಣಕ್ಯ ಹೆಚ್ಚು ಪ್ರತಿಪಾದಿಸುವ ನೀತಿಯೆಂದರೇ ಅದು ಶಿಸ್ತು.ಜೀವನದಲ್ಲಿ ಶಿಸ್ತನ್ನ ಪಾಲಿಸಿದರೇ ನಾವು ಹೆಚ್ಚು ಯಶಸ್ಸುಗಳಿಸುತ್ತೇವೆ. ಹೀಗಾಗಿ ಚಾಣಕ್ಯ ಶಿಸ್ತಿನ ಮನೋಭಾವ ಬೆಳೆಸಿಕೊಳ್ಳಿ ಎಂದು ಹೇಳುತ್ತಾರೆ. ಚಾಣಕ್ಯ ಹೇಳಿದ ಈ ನೀತಿಗಳನ್ನ ದಿನನಿತ್ಯ ಜೀವನದಲ್ಲಿ ಅಳವಡಿಸಿಕೊಂಡು 2022ರಲ್ಲಿ ಯಶಸ್ಸನ್ನ ನಿಮ್ಮದಾಗಿಸಿಕೊಳ್ಳಿ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.