Kannada News: ಕನ್ನಡತಿಯಲ್ಲಿ ಹೊಸ ಟ್ವಿಸ್ಟ್, ದಿಡೀರ್ ಎಂದು ಬದಲಾದ ಹರ್ಷ, ಈ ಬದಲಾವಣೆ ಇಂದೇ ಇರುವ ಪ್ಲಾನ್ ಏನು ಗೊತ್ತೇ??

Kannada News: ಕನ್ನಡತಿ ಧಾರವಾಹಿಯಲ್ಲಿ ಈಗ ಯಾರು ಊಹಿಸದ ಟ್ವಿಸ್ಟ್ ನೀಡಲಾಗಿದೆ. ಧಾರವಾಹಿ ನೋಡುತ್ತಿದ್ದ ವೀಕ್ಷಕರು ಕೂಡ, ರತ್ನಮಾಲಾ ಭುವಿ ಹೆಸರಿಗೆ ಆಸ್ತಿ ಬರೆದಿರುವುದು ಗೊತ್ತಾದರೆ ಭುವಿ ಮತ್ತು ಹರ್ಷನ ನಡುವೆ ವೈಮನಸ್ಸು ಮೂಡುತ್ತದೆ ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅದೆಲ್ಲವೂ ಈಗ ಉಲ್ಟಾ ಹೊಡೆದಿದೆ. ಈ ಕಡೆ ಸಾನಿಯಾ ಹರ್ಷನನ್ನು ಅರೆಸ್ಟ್ ಮಾಡಿಸಲು ಪ್ರಯತ್ನಪಟ್ಟಾಗ ಭುವಿ ಹಳೆಯ ಅಸ್ತ್ರ, ಸಾನಿಯಾ ಅಮ್ಮಮ್ಮ ಅವರನ್ನು ಕೊಲ್ಲುವ ಪ್ರಯತ್ನ ಮಾಡಿದ ವಿಡಿಯೋ ತೋರಿಸಿ ಬಾಯಿ ಮುಚ್ಚಿಸಿದ್ದಾಳೆ.

ಇತ್ತ ಹರ್ಷನಿಗೆ ಅಮ್ಮಮ್ಮ ಭುವಿ ಹೆಸರಿಗೆ ಆಸ್ತಿ ಬರೆದಿರುವ ವಿಷಯ ಮೊದಲೇ ಗೊತ್ತಿತ್ತು ಎನ್ನುವ ಹಾಗೆ ತೋರಿಸಲಾಗುತ್ತಿದೆ. ಈ ವಿಷಯದಲ್ಲಿ ಭುವಿಗೆ ಹರ್ಷನ ಮೇಲೆ ಅನುಮಾನ ಶುರುವಾಗಿದೆ, ತಂಗಿ ಬಿಂದು ಜೊತೆ ಭುವಿ ಇದೇ ವಿಚಾರವಾಗಿ ಮಾತನಾಡುತ್ತಾಳೆ, “ಅಮ್ಮಮ್ಮ ನನ್ನ ಹೆಸರಿಗೆ ಆಸ್ತಿ ಬರೆದಿರುವ ವಿಷಯ ಹರ್ಷ ಅವರಿಗೆ ಗೊತ್ತಿತ್ತು, ಆದರೆ ಈ ವಿಷಯದ ಬಗ್ಗೆ ನನಗೆ ಅನುಮಾನ ಇದೆ..” ಎಂದು ಹೇಳುತ್ತಾಳೆ. ಅದೇ ಸಮಯಕ್ಕೆ ಹರ್ಷ ಕೂಡ ಅಲ್ಲಿಗೆ ಬಂದು, ಭುವಿ ಹೇಳುವ ಮಾತನ್ನು ಕೇಳಿಸಿಕೊಂಡು ಅಲ್ಲಿಂದ ಹೊರಟು ಹೋಗುತ್ತಾನೆ. ತಂಗಿ ಸುಚಿ ಹತ್ತಿರ ಬಂದು ಬೇಸರ ಮಾಡಿಕೊಂಡು ಹೇಳುತ್ತಾನೆ. ಇದನ್ನು ಓದಿ..Biggboss Kannada: ಇನ್ನು ಮುಂದೆ ಅಸಲಿ ಆತ ಶುರು: ಪ್ರಶಾಂತ್ ಹಾಗೂ ರೂಪೇಶ್ ರಾಜಣ್ಣ ಸ್ನೇಹ ಬ್ರೇಕ್: ಕೆರಳಿದ ರೂಪೇಶ್ ಮಾಡಿದ್ದೇನು ಗೊತ್ತೆ?

Kannada News: ಕನ್ನಡತಿಯಲ್ಲಿ ಹೊಸ ಟ್ವಿಸ್ಟ್, ದಿಡೀರ್ ಎಂದು ಬದಲಾದ ಹರ್ಷ, ಈ ಬದಲಾವಣೆ ಇಂದೇ ಇರುವ ಪ್ಲಾನ್ ಏನು ಗೊತ್ತೇ?? 2

ಭುವಿ ಅವರಿಗೆ ನನ್ನ ಮೇಲೆ ಅನುಮಾನ ಇದೆ, ನನಗೆ ಏನು ಮಾಡಬೇಕು ಅಂತ ಗೊತ್ತಿಲ್ಲ..ಎಂದು ಹೇಳುತ್ತಾನೆ. ಆಗ ಸುಚಿ ಆ ವಿಷಯಾನ ಮಾತನಾಡಿ ಕ್ಲಿಯರ್ ಮಾಡ್ಕೊ ಎಂದು ಹೇಳುತ್ತಾಳೆ..ಅದಕ್ಕೆ ಹರ್ಷ ಒಪ್ಪಿಕೊಳ್ಳುವುದಿಲ್ಲ. ಭುವಿಯನ್ನು ಪ್ರೀತಿಯಿಂದ ಗೆಲ್ಲಬೇಕು ಎಂದುಕೊಂಡಿರುವ ಹರ್ಷ, ಭುವಿಗಾಗಿ ಒಂದು ಸುಂದರವಾದ ಸರ್ಪ್ರೈಸ್ ಪ್ಲಾನ್ ಮಾಡಿದ್ದಾನೆ. ಸಿನಿಮಾ ಥಿಯೇಟರ್ ನಲ್ಲಿ ಸರ್ಪ್ರೈಸ್ ಕೊಡಲು ಪ್ಲಾನ್ ಮಾಡಿರುವ ಹರ್ಷ, ಭುವಿ ಇರುವ ಜಾಗಕ್ಕೆ ಕಾರ್ ಕಳಿಸಿದ್ದಾನೆ. ಹರ್ಷನ ಈ ಪ್ಲಾನ್ ಹೇಗೆ ವರ್ಕ್ ಆಗುತ್ತದೆ ಎಂದು ಕಾದು ನೋಡಬೇಕಿದೆ. ಇದನ್ನು ಓದಿ.. Kannada News: ಮತ್ತೆ ಕಿರುತೆರೆಗೆ ಎಂಟ್ರಿ ಕೊಟ್ಟ ಅನಿರುದ್; ಸಂಭಾವನೆ ದಾಖಲೆಗಲ್ಲಿ ಪುಡಿ ಪುಡಿ ಮಾಡಿ ಪಡೆಯುತ್ತಿರುವ ಸಂಭಾವನೆ ಎಷ್ಟು ಗೊತ್ತೇ?