Kannada News: ಕ್ಷಣಿಕ ಸುಖಕ್ಕಾಗಿ ಗಂಡ ಮಕ್ಕಳನ್ನು ಬಿಟ್ಟು ಮತ್ತೊಬ್ಬನ ಜೊತೆ ಕುಣಿದುಕೊಂಡು ಹೋದಳು: ಆದರೆ ನಂತರ ಏನಾಯ್ತು ಗೊತ್ತೇ??

Kannada News: ಕ್ಷಣಿಕ ಸುಖಕ್ಕಾಗಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುವ ಅದೆಷ್ಟೋ ಜನರ ಬಗ್ಗೆ ನಾವು ಆಗಾಗ ನೋಡುತ್ತಿರುತ್ತೇವೆ. ತಮಗೆ ಸಿಕ್ಕಿರುವ ಅತ್ಯುತ್ತಮ ಬದುಕನ್ನು ನಡೆಸಿಕೊಂಡು ಹೋಗುವುದನ್ನು ಬಿಟ್ಟು ಆಸೆ, ಮೋಹಗಳಿಗೆ ಬಿದ್ದು ತಮ್ಮ ಬದುಕನ್ನೇ ಸರ್ವನಾಶ ಮಾಡಿಕೊಳ್ಳುವ ಅದೆಷ್ಟೋ ಜನರ ಬಗ್ಗೆ ನಾವು ಸುದ್ದಿಯಲ್ಲಿ ಓದುತ್ತಿರುತ್ತೇವೆ. ಅದರಲ್ಲೂ ಕೆಲವು ಮಹಿಳೆಯರು ದೈಹಿಕ ಆಕರ್ಷಣೆಗೆ ಒಳಪಟ್ಟು ತಮ್ಮ ಮುದ್ದಿನ ಸಂಸಾರದ ಬಗ್ಗೆ ತಲೆ ಕೆಡಿಸಿಕೊಳ್ಳದೆ ಪರಪುರುಷನ ಜೊತೆಗೆ ಓಡಿ ಹೋಗುವುದು, ಅನೈತಿಕ ಸಂಬಂಧ ಇರಿಸಿಕೊಳ್ಳುವುದು ಇತ್ಯಾದಿ ಈ ರೀತಿ ಮಾಡುತ್ತಾರೆ. ಅಷ್ಟು ಮಾತ್ರವಲ್ಲ ಅದರಿಂದಾಗಿ ತಮ್ಮ ಕ್ಷಣಿಕ ಸುಖಕ್ಕಾಗಿ ತಮ್ಮ ಬದುಕನ್ನೇ ಹಾಳು ಮಾಡಿಕೊಂಡು ಬಿಡುತ್ತಾರೆ. 35 ವರ್ಷದ ವಿವಾಹಿತ ಮಹಿಳೆಯೊಬ್ಬಳು 21 ವರ್ಷದ ಯುವಕನ ಹಿಂದೆ ಬಿದ್ದು ನಂತರ ಅವಳ ಪಾಡು ಏನಾಗಿದೆ ಎಂದರೆ ನಿಜಕ್ಕೂ ಶಾಕಿಂಗ್ ಎನಿಸುತ್ತದೆ. 35 ವರ್ಷದ ಈಗಾಗಲೇ ಮದುವೆಯಾಗಿರುವ ಮಹಿಳೆಯೊಬ್ಬಳು 21 ವರ್ಷದ ಯುವಕನ ಜೊತೆಗೆ ಓಡಿಹೋಗಿರುವ ಘಟನೆ ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದಿದೆ.

ಗೀತಾ ಎಂಬ ಈಗಾಗಲೇ ಮದುವೆಯಾಗಿ ಎರಡು ಮಕ್ಕಳಿರುವ ಮಹಿಳೆ 21 ವರ್ಷದ ರಮೇಶ್ ಎಂಬ ಯುವಕನ ಜೊತೆಗೆ ಓಡಿ ಹೋಗಿದ್ದಾಳೆ (ಹೆಸರು, ಊರು ಬದಲಿಸಲಾಗಿದೆ). ಗೀತಾ ಯಾವುದೋ ಶಾಸ್ತ್ರ ಕೇಳುವುದಕೆಂದು ಅರ್ಚಕರೊಬ್ಬರ ಮನೆಗೆ ತೆರಳಿದ್ದಾಳೆ. ಈ ವೇಳೆ ಅಲ್ಲಿ ಅರ್ಚಕರ ಮಗನಾದ ರಮೇಶ್ ನನ್ನು ನೋಡಿದ್ದಾಳೆ. ಇಬ್ಬರಿಗೂ ಹೇಗೋ ಪರಸ್ಪರ ಆಕರ್ಷಣೆಯಾಗಿದೆ. ನಂತರ ಇಬ್ಬರೂ ಪರಿಚಯ ಮಾಡಿಕೊಂಡಿದ್ದಾರೆ, ಇಬ್ಬರು ಕೂಡ ಮನೆಯವರ ಕಣ್ತಪ್ಪಿಸಿ ಹಲವಾರು ಬಾರಿ ಸಾಕಷ್ಟು ಕಡೆ ತಿರುಗಾಡಿದ್ದಾರೆ, ಸುತ್ತಾಡಿದ್ದಾರೆ. ಕೊನೆಗೆ ರಮೇಶ್ ಗೀತಾಳನ್ನು ಮದುವೆಯಾಗುವ ಭರವಸೆ ಹುಟ್ಟಿಸಿದ್ದಾನೆ. ಈ ಮಾತನ್ನು ಕೇಳಿ ಗೀತಾ ಖುಷಿ ಪಟ್ಟು ತನ್ನ ಗಂಡ, ಮನೆ, ಮಕ್ಕಳು ಎಲ್ಲವನ್ನು ಮರೆತು ಇವನ ಹಿಂದೆ ಓಡಿ ಬಂದಿದ್ದಾಳೆ. ಇವರಿಬ್ಬರ ನಡುವೆ ಯಾವ ಪ್ರೀತಿಯು ಇಲ್ಲ, ಕೇವಲ ಆ ಕ್ಷಣದ ದೈಹಿಕ ಸುಖದ ಬಯಕೆ ಎನ್ನುವುದು ಎಂಥವರಿಗೂ ಅರ್ಥವಾಗುತ್ತದೆ. ಊರು ಬಿಟ್ಟು ಓಡಿ ಹೋದ ಈ ಇಬ್ಬರು ಕೆಲವು ದಿನ ಎಲ್ಲೋ ತಲೆಮೆಲೆಸಿಕೊಂಡಿದ್ದಾರೆ. ಇದನ್ನು ಓದಿ..Relationship: ಅತ್ತೆಯ ಡಿಂಗ್ ಡಾಂಗ್ ಆಟವನ್ನು ಹೊರತೆಗೆದ ಮನೆಗೆ ಬಂದ ಹೊಸ ಸೊಸೆಗೆ, ಕುಟುಂಬ ಸೇರಿಕೊಂಡು ಏನು ಮಾಡಿದ್ದಾರೆ ಗೊತ್ತೇ??

Kannada News: ಕ್ಷಣಿಕ ಸುಖಕ್ಕಾಗಿ ಗಂಡ ಮಕ್ಕಳನ್ನು ಬಿಟ್ಟು ಮತ್ತೊಬ್ಬನ ಜೊತೆ ಕುಣಿದುಕೊಂಡು ಹೋದಳು: ಆದರೆ ನಂತರ ಏನಾಯ್ತು ಗೊತ್ತೇ?? 2

ಎಲ್ಲ ಮುಗಿದ ಮೇಲೆ ರಮೇಶ್ಗೆ ಗೀತಾ ಮೇಲಿನ ಆಕರ್ಷಣೆ ಹೊರಟು ಹೋಗುತ್ತದೆ. ಹೊರಗೆ ಎಲ್ಲಾದರೂ ಸುತ್ತಾಡಿಕೊಂಡು ಬರೋಣ ಎಂದು ಆತ ಆಕೆಯನ್ನು ದೊಡ್ಡದೊಂದು ಕಾಡಿನ ಮಧ್ಯಕ್ಕೆ ಕರೆದುಕೊಂಡು ಹೋಗಿದ್ದಾನೆ. ಆಗಲೇ ಸಂಜೆಯಾಗಿ ಇನ್ನೇನು ಕತ್ತಲೆಯಾಗುವ ಹೊತ್ತಿನಲ್ಲಿ ಆತ ನೀನು ಇಲ್ಲೇ ಇರು, ಸ್ವಲ್ಪ ಹೊತ್ತು ಬರುತ್ತೇನೆ ಎಂದು ಪರಾರಿಯಾಗಿದ್ದಾನೆ. ಇತ್ತ ಗೀತಾಳಿಗೆ ತಾನು ಎಲ್ಲಿದ್ದೇನೆ ಎನ್ನುವುದೇ ಗೊತ್ತಾಗದೆ ರಮೇಶ್ ಬರುತ್ತಾನೆ ಎಂದು ಕಾದು ಕುಳಿತಿದ್ದಾಳೆ. ಆದರೆ ಕತ್ತಲಾಗಿ ಬೆಳಕಾದರು ರಮೇಶ ಪತ್ತೆ ಇಲ್ಲ. ಆನಂತರ ಅಲ್ಲಿನ ಸ್ಥಳೀಯರು ಆಕೆಯನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಪೊಲೀಸರಿಗೆ ಎಲ್ಲಾ ಸತ್ಯಾಸತ್ಯತೆ ತಿಳಿದಿದೆ. ಹೀಗಿದ್ದರೂ ಕೂಡ ಗೀತಾ ತನಗೆ ರಮೇಶ್ ಬೇಕು ಎಂದು ಪಟ್ಟು ಹಿಡಿದಿದ್ದಾಳೆ. ತಾನು ಆತನನ್ನೇ ಮದುವೆಯಾಗಬೇಕೆಂದು ಇಚ್ಛಿಸಿದ್ದಾಳೆ. ಇನ್ನೂ ಇತ್ತ ರಮೇಶ್ ಕೂಡ ಇಲ್ಲ, ಅತ್ತ ಮತ್ತೆ ತನ್ನ ಮನೆಗೆ ವಾಪಸ್ ಹೋಗುವುದಕ್ಕೂ ಆಗದ ಪರಿಸ್ಥಿತಿಯಲ್ಲಿ ಈ ಮಹಿಳೆ ಇದ್ದಾಳೆ. ಈ ರೀತಿಯಾಗಿ ಕ್ಷಣಿಕ ಸುಖಕ್ಕಾಗಿ ತನ್ನ ಉತ್ತಮ ಜೀವನವನ್ನು ಸ್ವತಃ ತಾನೇ ಸರ್ವನಾಶ ಮಾಡಿಕೊಂಡಿದ್ದಾಳೆ. ಇದನ್ನು ಓದಿ.. Kannada News: ಮದುವೆಯಾಗಿ ಸುಖ ಸಂಸಾರದ ನಡುವೆ ಗರ್ಭಿಣಿಯಾದ ಹೆಂಡತಿ: ಆದರೆ ಗಂಡನ ಆಲೋಚನೇನೇ ಬೇರೆಯಾಗಿತ್ತು. ಕೊನೆಗೆ ಆಕೆಯನ್ನು ಏನು ಮಾಡಿದ್ದಾನೆ ಗೊತ್ತೇ?