Kannada News: ಗಂಡನನ್ನು ಬಿಟ್ಟು ಹೋಗಿ ಮತ್ತೊಬ್ಬರ ಜೊತೆ ಸಂಸಾರ ಆರಂಭಿಸಿದಳು, ಆದರೆ ಎರಡನೇ ಮದುವೆಯಾದವ ಏನು ಮಾಡಿದ್ದಾನೆ ಗೊತ್ತೇ? ಹೆಣ್ಣು ಮಕ್ಕಳಿಗೆ ಯಾಕೆ ಹೀಗೆ ಆಗುತ್ತದೆ?

Kannada News: ಈಗಿನ ಕಾಲದಲ್ಲಿ ಅನೈತಿಕ ಸಂಬಂಧಗಳಿಂದ ಆಗುತ್ತಿರುವ ಸಮಸ್ಯೆಗಳು ಒಂದೆರಡಲ್ಲ. ಸಂಬಂಧ ಇಟ್ಟುಕೊಂಡಿರುವವರಿಗೆ ಸಮಸ್ಯೆ ಆಗಬಹುದು, ಅಥವಾ ಮನೆಯವರಿಗೆ ಸಮಸ್ಯೆ ಆಗಬಹುದು..ಇಂತಹ ಹಲವು ಘಟನೆಗಳು ಬೆಳಕಿಗೆ ಬರುತ್ತಲೇ ಇರುತ್ತವೆ, ಆದರೆ ಕಡಿಮೆ ಅಂತೂ ಆಗುತ್ತಿಲ್ಲ. ಇತ್ತೀಚೆಗೆ ಇಂಥದ್ದೊಂದು ಘಟನೆ ಬೆಂಗಳೂರಿನ (Bangalore) ಆನೇಕಲ್ ತಾಲ್ಲೂಕಿನ ಹೆಬ್ಬಾಗೋಡಿ ವ್ಯಾಪ್ತಿಯಲ್ಲಿ ನಡೆದಿದೆ. ಈ ಮಹಿಳೆಯ ಹೆಸರು ಮಂಜುಳಾ.

Kannada News: ಗಂಡನನ್ನು ಬಿಟ್ಟು ಹೋಗಿ ಮತ್ತೊಬ್ಬರ ಜೊತೆ ಸಂಸಾರ ಆರಂಭಿಸಿದಳು, ಆದರೆ ಎರಡನೇ ಮದುವೆಯಾದವ ಏನು ಮಾಡಿದ್ದಾನೆ ಗೊತ್ತೇ? ಹೆಣ್ಣು ಮಕ್ಕಳಿಗೆ ಯಾಕೆ ಹೀಗೆ ಆಗುತ್ತದೆ? 2

ಈಕೆಗೆ ಹಲವು ವರ್ಷಗಳ ಹಿಂದೆಯೇ ಮದುವೆ ಆಗಿತ್ತು. ಗಂಡನ ಜೊತೆಗೆ ಚೆನ್ನಾಗಿದ್ದಾಗಲೇ ಆಕೆ 10 ವರ್ಷಗಳ ಹಿಂದೆ ನಾರಾಯಣಪ್ಪ ಎನ್ನುವ ವ್ಯಕ್ತಿಯ ಜೊತೆಗೆ ಸ್ನೇಹ ಬೆಳೆಸಿಕೊಂಡಳು. ಇವರಿಬ್ಬರ ಸ್ನೇಹ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಹೋಯಿತು. ಇಬ್ಬರು ಎಲ್ಲರ ಎದುರು ಓಡಾಡಿಕೊಂಡಿದ್ದರು. ಈ ವಿಚಾರ ವಿವಾದಕ್ಕೆ ಕಾರಣವಾಗುತ್ತಿದ್ದ ಹಾಗೆ, ನಾರಾಯಣಪ್ಪ ಪೊಲೀಸ್ ಠಾಣೆಯಲ್ಲೇ ಮಂಜುಳಾ ಕುತ್ತಿಗೆಗೆ ತಾಳಿ ಕಟ್ಟಿ ಮದುವೆಯಾಗಿದ್ದ. ಆರಂಭದಲ್ಲಿ ಇವರಿಬ್ಬರ ನಡುವೆ ಎಲ್ಲವೂ ಚೆನ್ನಾಗಿತ್ತು. ಇದನ್ನು ಓದಿ.. Kannada News: ಬೆಣ್ಣೆಯಂತಹ ಹುಡುಗಿ ಎಂದು ದುಡ್ಡು ಕೊಟ್ಟು ಮದುವೆಯಾದ, ಆದರೆ ಅದೇ ಬೆಣ್ಣೆಯಂತಹ ಹುಡುಗಿ ಕೊನೆಗೆ ಏನು ಮಾಡಿದ್ದಾಳೆ ಗೊತ್ತೆ?

ಆದರೆ ಬರುಬರುತ್ತಾ ಇಬ್ಬರ ನಡುವೆ ಜಗಳಗಳು ಶುರುವಾಗಿದೆ. ನಾರಾಯಣಪ್ಪ ಹಣ ತರಬೇಕು ಎಂದು ಮಂಜುಳಾಗೆ ಪೀಡಿಸಿ ಜಗಳ ಆಡುತ್ತಿದ್ದು, ಹಣ ತರದೆ ಹೋದರೆ ಸುಟ್ಟುಬಿಡುತ್ತೇನೆ ಎಂದು ಎಲ್ಲರ ಎದುರು ಬೆದರಿಕೆ ಕೂಡ ಹಾಕಿದ್ದಾನೆ. ಮಾರ್ಚ್ 29ರಂದು ಮಂಜುಳಾ ಅವರನ್ನು ತನ್ನ ಆಕ್ಟಿವಾ ಗಾಡಿ ಮೇಲೆ ಕೂರಿಸಿಕೊಂಡು ಹೋಗಿ, ಜನರಿಲ್ಲದ ಜಾಗದಲ್ಲಿ ಆಕೆಯನ್ನು ಮುಗಿಸಿಬಿಟ್ಟಿದ್ದಾನೆ. ಆಕೆಯ ದೇಹ ಸುಟ್ಟು ಹೋಗಿತ್ತು. ಪೊಲೀಸರು ದೇಹವನ್ನು ಗುರುತಿಸಲು ಮಂಜುಳಾ ಅವರ ತಂಗಿಯನ್ನು ಕರೆಸಿದರು.

ಕಿವಿಯ ಓಲೆ ಹಾಗೂ ಕತ್ತಿನ ಸರ ಎರಡನ್ನು ನೋಡಿ ಅದು ಮಂಜುಳಾ ಎಂದು ಗುರುತಿಸಿದ್ದಾರೆ. ಅಕ್ಕಪಕ್ಕದವರು ನಾರಾಯಣಪ್ಪ ಮಂಜುಳಾರನ್ನು ಹೊರಗಡೆ ಕರೆದುಕೊಂಡು ಹೋಗಿ, ಬಹಳ ಹೊತ್ತಾದಮೇಲೆ ಬರುವಾಗ ಒಬ್ಬರೇ ಬಂದಿದ್ದನ್ನು ಗಮನಿಸಿದ್ದಾರೆ. ಇದೆಲ್ಲವನ್ನು ಪೊಲೀಸರಿಗೆ ತಿಳಿಸಿದ್ದು, ಪೊಲೀಸರು ನಾರಾಯಣಪ್ಪನನ್ನು ಬಂಧಿಸಿದ್ದಾರೆ. ಇದನ್ನು ಓದಿ..Kannada News: ಆನ್ಲೈನ್ ಜಾಹೀರಾತು ನೋಡಿ, ಇರಲಾರದೆ ಇರುವೆ ಬಿಟ್ಕೊಂಡ ಯುವತಿಯ ಪಾಡು ಕೊನೆಗೆ ಏನಾಯ್ತು ಗೊತ್ತೇ?? ಇವೆಲ್ಲ ಬೇಕಿತ್ತಾ? ಆದರೂ ಹೀಗೆ ಆಗಬಾರದಿತ್ತು.