Kannada News: ಮೊದಲ ಪಾದಾರ್ಪಣೆ ವಿಚಾರದಲ್ಲಿಯೇ ಪ್ರೇಮ್ ಮಗಳಿಗೆ ವಿವಾದ ಸೃಷ್ಟಿ: ಅಪ್ಪು, ದರ್ಶನ್ ರವರ ವಿಚಾರ ತೆಗೆದು ಪ್ರೇಮ್ ಹೇಳಿದ್ದೇನು ಗೊತ್ತೇ?

Kannada News: ನಟ ನೆನಪಿರಲಿ ಪ್ರೇಮ್ (Nenapirali Prem) ಅವರ ಪುತ್ರಿ ಅಮೃತ ಪ್ರೇಮ್ (Amrutha Prem) ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಅವರು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ವಿಷಯ ಎಲ್ಲೆಡೆ ಸದ್ದು ಮಾಡಿತ್ತು. ಡಾಲಿ ಧನಂಜಯ್ (Daali Dhananjay)ಅವರ ನಿರ್ಮಾಣ ಸಂಸ್ಥೆಯಾದ ಡಾಲಿ ಪಿಕ್ಚರ್ಸ್ (Daali Pictures) ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಚಿತ್ರಕ್ಕೆ ನಾಯಕಿಯಾಗಿ ನೆನಪಿರಲಿ ಪ್ರೇಮ್ ಪುತ್ರಿ ಅಮೃತ ಆಯ್ಕೆಯಾಗಿದ್ದಾರೆ. ಮಗಳನ್ನು ನಾಯಕಿಯಾಗಿ ಲಾಂಚ್ ಮಾಡುವುದರ ಕುರಿತು ದೊಡ್ಡ ಸುದ್ದಿಗೋಷ್ಠಿಯನ್ನು ಪ್ರೇಮ್ ಆಯೋಜಿಸಿದ್ದರು. ಈ ವೇಳೆ ಬಹಳ ಖುಷಿಯಿಂದ ಮಗಳ ಕುರಿತು ಅವರು ಮಾತನಾಡಿದರು. ಇದೇ ವೇಳೆ ಅವರು ವಿವಾದಿತ ಪ್ರಶ್ನೆ ಒಂದಕ್ಕೆ ಉತ್ತರಿಸಿದ್ದಾರೆ. ನೆಪೋಟಿಸಂ (Nepotism) ಬಗ್ಗೆ ಮಾತನಾಡಿರುವ ಅವರು ದರ್ಶನ್ (Darshan), ಪುನೀತ್ ರಾಜಕುಮಾರ್ (Puneeth Rajkumar), ಶಿವರಾಜ್ ಕುಮಾರ್ (Shiva Rajkumar) ಹೆಸರು ಹೇಳಿ ಸಮರ್ಥಿಸಿಕೊಂಡಿದ್ದಾರೆ.

ಡಾಲಿ ಪಿಚ್ಚರ್ಸ್ ನಿರ್ಮಾಣ ಸಂಸ್ಥೆಯ ಅಡಿಯಲ್ಲಿ ತಯಾರಾಗುತ್ತಿರುವ ಟಗರು ಪಲ್ಯ ಚಿತ್ರಕ್ಕೆ ಚೊಚ್ಚಲ ಬಾರಿಗೆ ನಾಯಕಿಯಾಗಿ ನೆನಪಿರಲಿ ಪ್ರೇಮ್ ಪುತ್ರಿ ಅಮೃತ ಆಯ್ಕೆಯಾಗಿದ್ದಾರೆ. ಮಗಳನ್ನು ಚಿತ್ರರಂಗಕ್ಕೆ ನಾಯಕಿಯಾಗಿ ಲಾಂಚ್ ಮಾಡಲು ದೊಡ್ಡ ಕಾರ್ಯಕ್ರಮವನ್ನು ಪ್ರೇಮ್ ಆಯೋಜಿಸಿದ್ದರು. ಈ ವೇಳೆ ಮಾಧ್ಯಮದವರ ಎಲ್ಲ ಪ್ರಶ್ನೆಗೆ ಪ್ರೇಮ್ ಮತ್ತು ಪುತ್ರಿ ಅಮೃತ ಉತ್ತರಿಸಿದ್ದರೆ. ಈ ಮಾಧ್ಯಮಗೋಷ್ಠಿಯಲ್ಲಿ ಡಾಲಿ ಧನಂಜಯ್ ಸೇರಿದಂತೆ ಇಡೀ ಚಿತ್ರತಂಡ ಹಾಜರಿತ್ತು. ಅಮೃತ “ನಾಯಕಿಯಾಗಿ ಆಯ್ಕೆಯಾಗಿರುವುದಕ್ಕೆ ಸಂತೋಷವಾಗುತ್ತಿದೆ. ನನ್ನ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕೆ ತಕ್ಕ ಹಾಗೆ ಕೆಲಸ ಮಾಡುತ್ತೇನೆ. ನನಗೆ ನನ್ನ ತಂದೆಯೇ ಗುರುವಾಗಿದ್ದಾರೆ” ಎಂದು ಅವರು ಸಂತಸ ವ್ಯಕ್ತಪಡಿಸಿದರು. ಇದನ್ನು ಓದಿ.. Kannada News: ಮೊದಲ ಸಿನೆಮಾದ ಮುಹೂರ್ತದಲ್ಲಿಯೇ ಖಡಕ್ ಮಾತು ಹೇಳಿದ ಪ್ರೇಮ್ ಮಗಳು ಅಮೃತ ಹೇಳಿದ್ದೇನು ಗೊತ್ತೇ??

Kannada News: ಮೊದಲ ಪಾದಾರ್ಪಣೆ ವಿಚಾರದಲ್ಲಿಯೇ ಪ್ರೇಮ್ ಮಗಳಿಗೆ ವಿವಾದ ಸೃಷ್ಟಿ: ಅಪ್ಪು, ದರ್ಶನ್ ರವರ ವಿಚಾರ ತೆಗೆದು ಪ್ರೇಮ್ ಹೇಳಿದ್ದೇನು ಗೊತ್ತೇ? 2

ಇದೇ ವೇಳೆ ನೆನಪಿರಲಿ ಪ್ರೇಮ್ ಅವರಿಗೆ ಪ್ರಶ್ನೆಯೊಂದು ಎದುರಾಗಿದೆ. ಅದರಂತೆ ಎಲ್ಲ ದೊಡ್ಡ ದೊಡ್ಡ ಮಕ್ಕಳು ಕೂಡ ಚಿತ್ರ ರಂಗಕ್ಕೆ ಬರುತ್ತಾರೆ. ಇದು ನೆಪೋಟಿಸಂ ಎಂಬ ಮಾತುಗಳು ಕೇಳಿ ಬಂದಿವೆ. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರೇಮ್ “ಎಲ್ಲವನ್ನು ನೆಪೊಟಿಸಂ ಎಂದುಕೊಂಡರೆ ಪುನೀತ್ ರಾಜಕುಮಾರ್, ಶಿವರಾಜ್ ಕುಮಾರ್, ದರ್ಶನ್ ಅಂತಹ ದೊಡ್ಡ ಅದ್ಭುತ ನಟರು ನಮಗೆ ಸಿಗುತ್ತಿರಲಿಲ್ಲ. ಎಂತಹ ಸ್ಟಾರ್ ಮಕ್ಕಳೇ ಆಗಲಿ ಅವರು ಚೆನ್ನಾಗಿ ನಟಿಸಿದರೆ, ಅವರು ಎಂತಹ ವ್ಯಕ್ತಿ ಎನ್ನುವುದರ ಮೇಲೆ ಹೆಸರು ಮಾಡುತ್ತಾರೆ. ಹೊರತು ಸ್ಟಾರ್ ನಟರ ಮಕ್ಕಳು ಎನ್ನುವ ಕಾರಣಕ್ಕೆ ಅವರ ಸಿನಿಮಾಗಳನ್ನು ಜನರು ನೋಡಲು ಬರುವುದಿಲ್ಲ. ಪ್ರತಿಭೆ ಇದ್ದರೆ ಜನರು ಬೆಳೆಸುತ್ತಾರೆ. ತಾನಾಗಿಯೇ ಆಗ ಹೆಸರು ಬರುತ್ತದೆ” ಎಂದು ಅವರು ಪ್ರತಿಕ್ರಿಯಿಸಿದ್ದಾರೆ. ಈ ಮೂಲಕ ಟೀಕಾಕಾರರಿಗೆ ಸರಿಯಾಗಿ ಉತ್ತರಿಸಿದ್ದಾರೆ. ಇದನ್ನು ಓದಿ..Kannada News: ಅಭಿಶೇಷ್ ಅಂಬರೀಷ್ ರವರು ಮಾಡುವೆಯಾಗುತ್ತಿರುವ ಹುಡುಗಿ ಆಸ್ತಿ ಎಷ್ಟು ಗೊತ್ತೇ?? ಯಾರಿಗೂ ಏನು ಕಡಿಮೆ ಏನಿಲ್ಲ ಸ್ವಾಮಿ.