Kannada News: ನನ್ನ ಜೀವನದಲ್ಲಿ ಏನೇ ಆದರೂ ಸರಿ, ಯಾರು ಇಲ್ಲದೆ ಇದ್ದರೂ ಸರಿ, ಅದೊಂದು ಇದ್ದರೇ ಸಾಕು ಎಂದು ಇರುವುದನ್ನು ಇದ್ದ ಹಾಗೆ ಹೇಳಿದ ಸಾಯಿ ಪಲ್ಲವಿ.

Kannada News: ನಟಿ ಸಾಯಿಪಲ್ಲವಿ ಇಂದು ದಕ್ಷಿಣ ಭಾರತ ಚಿತ್ರರಂಗದಲ್ಲಿ ಲೇಡಿ ಪವರ್ ಸ್ಟಾರ್ ಎಂದು ಹೆಸರು ಪಡೆದಿದ್ದಾರೆ. ಬಡಗ ಹುಡುಗಿಯಾದ ಸಾಯಿಪಲ್ಲವಿ ಅವರು ಹುಟ್ಟಿಬೆಳೆದದ್ದು ತಮಿಳುನಾಡಿನಲ್ಲಿ, ಮೊದಲಿಗೆ ನಟಿಸಿದ್ದು ಮಲಯಾಳಂ ಸಿನಿಮಾ ಪ್ರೇಮಂ ನಲ್ಲಿ. ಮೊದಲ ಸಿನಿಮಾದಲ್ಲೇ ಸಾಯಿಪಲ್ಲವಿ ಅವರು ದೊಡ್ಡ ಮಟ್ಟದಲ್ಲಿ ಕ್ರೇಜ್ ಸೃಷ್ಟಿಸಿಕೊಂಡರು. ಇವರ ಡ್ಯಾನ್ಸ್ ನೋಡಿ ಫಿದಾ ಆಗದೆ ಇರುವವರಿಲ್ಲ ಎಂದರೆ ತಪ್ಪಲ್ಲ. ಪ್ರೇಮಂ ಬ್ಲಾಕ್ ಬಸ್ಟರ್ ಹಿಟ್ ಆದ ಕಾರಣ ಸಾಯಿಪಲ್ಲವಿ ಅವರಿಗೆ ಎಲ್ಲಾ ಭಾಷೆಗಳಲ್ಲೂ ಅವಕಾಶಗಳು ಬರಲು ಶುರುವಾದವು.

ತೆಲುಗು ಚಿತ್ರರಂಗಕ್ಕೆ ಫಿದಾ ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಈ ಸಿನಿಮಾ ಕೂಡ ಬ್ಲಾಕ್ ಬಸ್ಟರ್ ಆಗಿ, ತೆಲುಗಿನಲ್ಲಿ ಇವರಿಗೆ ಆ ಒಳ್ಳೆಯ ಅವಕಾಶಗಳು ಮತ್ತು ಜನಪ್ರಿಯತೆ ಎಲ್ಲವೂ ಸಿಕ್ಕಿತು. ಸಾಯಿಪಲ್ಲವಿ ಅವರು ತುಂಬಾ ಚೂಸಿ, ಪ್ರಾಮುಖ್ಯತೆ ಇರುವಂತಹ ಪಾತ್ರಗಳನ್ನು ಮಾತ್ರ ಆಯ್ಕೆ ಮಾಡಿಕೊಳ್ಳುತ್ತಾರೆ. ಸ್ಟಾರ್ ಹೀರೋ ಸಿನಿಮಾ ಅವಕಾಶ ಆಗಿದ್ದರು ಸಹ, ತಮ್ಮ ಪಾತ್ರಕ್ಕೆ ಪ್ರಾಮುಖ್ಯತೆ ಇದ್ದರೆ ಮಾತ್ರ ಒಪ್ಪಿಕೊಳ್ಳುತ್ತಾರೆ ಸಾಯಿಪಲ್ಲವಿ, ಇಲ್ಲವಾದರೆ ಹಿಂದುಮುಂದು ನೋಡದೆ ನೋ ಹೇಳುತ್ತಾರೆ. ಇವರು ನಟಿಸಿದ ಕೊನೆಯ ಸಿನಿಮಾಗಳು ವಿರಾಟ ಪರ್ವಂ ಮತ್ತು ಗಾರ್ಗಿ. ಈ ಎರಡು ಸಿನಿಮಾಗಳು ನಿರೀಕ್ಷೆಯ ಮಟ್ಟಕ್ಕೆ ಯಶಸ್ವಿಯಾಗಲಿಲ್ಲ. ಇದನ್ನು ಓದಿ..Kannada News: ಯಶಸ್ವಿ ನಟ: ಸಿಕ್ಕಿದ್ದೇ ಚಾನ್ಸ್ ಎಂದು ಮೂರು ಮದುವೆಯಾಗಿದ್ದು ಯಾಕೆ ಗೊತ್ತೇ?? ಅದರ ಹಿಂದಿನ ಕಾರಣವೇನು ಗೊತ್ತೇ?? ತಿಳಿದರೆ ನೀವು ಅದೇ ಕೆಲಸ ಮಾಡ್ತೀರಾ.

Kannada News: ನನ್ನ ಜೀವನದಲ್ಲಿ ಏನೇ ಆದರೂ ಸರಿ, ಯಾರು ಇಲ್ಲದೆ ಇದ್ದರೂ ಸರಿ, ಅದೊಂದು ಇದ್ದರೇ ಸಾಕು ಎಂದು ಇರುವುದನ್ನು ಇದ್ದ ಹಾಗೆ ಹೇಳಿದ ಸಾಯಿ ಪಲ್ಲವಿ. 2

ಹಾಗಾಗಿ ಸಾಯಿಪಲ್ಲವಿ ಅವರು ನಟನೆಯನ್ನು ಬಿಟ್ಟುಬಿಡುತ್ತಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಸಾಯಿಪಲ್ಲವಿ ಅವರು ಎಂಬಿಬಿಎಸ್ ಓದಿದ್ದಾರೆ, ಹಾಗಾಗಿ ಚಿತ್ರರಂಗ ಬಿಟ್ಟು, ಹಾಸ್ಪಿಟಲ್ ತೆರೆಯುತ್ತಾರೆ, ಶೀಘ್ರದಲ್ಲೇ ಮದುವೆಯಾಗುತ್ತಾರೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ಅದೆಲ್ಲದಕ್ಕೂ ಸಾಯಿಪಲ್ಲವಿ ಅವರು ಕ್ಲಾರಿಟಿ ನೀಡಿದ್ದಾರೆ, ಇತ್ತೀಚೆಗೆ ಇನ್ಸ್ಟಾಗ್ರಾಮ್ ನಲ್ಲಿ ಫೋಟೋ ಶೇರ್ ಮಾಡಿರುವ ಸಾಯಿಪಲ್ಲವಿ ಅವರು “ನಗು, ಭರವಸೆ ಮತ್ತು ಕೃತಜ್ಞತೆ.. ಸಂತೋಷದ ಜೀವನ ನಡೆಸಲು ಇಷ್ಟು ಸಾಕು..”ಎಂದು ಬರೆದುಕೊಂಡಿದ್ದಾರೆ. ಈ ಮೂಲಕ ಸಾಯಿಪಲ್ಲವಿ ಅವರು ಬೇರೆ ನಟಿಯರಿಗಿಂತ ಭಿನ್ನ ಎಂದು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಇದನ್ನು ಓದಿ..Kannada News: ಸಿನೆಮಾಗಳಲ್ಲಿ ಅವಕಾಶ ಬಂದರು ಬೇಡ ಎನ್ನವೇ ಹೊಸ ಕೆಲಸ ಆರಂಭಿಸಿದ ಶ್ರುತಿ ಹರಿಹರನ್. ಏನು ಮಾಡಲು ಹೊರಟಿದ್ದಾರೆ ಗೊತ್ತೇ?? ಕಣ್ಣೀರಿನಲ್ಲಿ ಫ್ಯಾನ್ಸ್.