Kannada Story: ಅಂದು ಹೈವೇ ನಲ್ಲಿ ಮೂವರು ಹುಡುಗರಿಂದ ಆಕೆಯನ್ನು ಕಾಪಾಡಿದ, ಕೊನೆಗೆ ಆತನಿಗೆ ಆಕೆ ಏನು ಮಾಡಿದಳು ಗೊತ್ತೇ? ಇಂತವರು ಇರ್ತಾರ?

Kannada Story: ಶಕೀಲ್ ಎನ್ನುವ ವ್ಯಕ್ತಿಯ ಹೆಂಡತಿ ಮತ್ತು ಮಕ್ಕಳು ನಾಲ್ಕು ವರ್ಷಗಳ ಹಿಂದೆ ಅಪಘಾತದಲ್ಲಿ ವಿಧಿವಶರಾದರು. ಆಗಿನಿಂದ ಒಂಟಿಯಾಗಿದ್ದ ಶಕೀಲ್, ಟ್ರಕ್ ಓಡಿಸಿಕೊಂಡು ಜೀವನ ನಡೆಸುತ್ತಿದ್ದ. ಈ ವ್ಯಕ್ತಿ, ಉತ್ತರ ಪ್ರದೇಶದ ಹಮೀರ್ ಪುರ ಜಿಲ್ಲೆಯ ಅಹಮದ್ ಪುರ ಗ್ರಾಮದಲ್ಲಿ ವಾಸವಾಗಿದ್ದನು. ಒಂದು ದಿನ ಶಕೀಲ್, ದೆಹಲಿಗೆ ಹೋಗಬೇಕಿತ್ತು, ದಾರಿ ನಡುವೆ ಒಂದು ಕಾರ್ ನೋಡಿ ಅವನಿಗೆ ಅನುಮಾನ ಬಂದು ಟ್ರಕ್ ನಿಲ್ಲಿಸಿ, ತನ್ನ ಜೊತೆಗಿದ್ದ ಕ್ಲೀನರ್ ಜೊತೆಗೆ ಹೋಗಿ ನೋಡಿದಾಗ, ಒಂದು ಹೆಣ್ಣಿನ ಮೇಲೆ, ಅಸಭ್ಯವಾದ ಕೃತ್ಯ ನಡೆಸುತ್ತಿದ್ದರು ಮೂವರು ಗಂಡಸರು.

ಅದನ್ನು ನೋಡಿ ಶಕೀಲ್ ಮತ್ತು ಅವನ ಕ್ಲೀನರ್ ಇಬ್ಬರು ಆ ಮೂವರು ಗಂಡಸರ ಜೊತೆಗೆ ಹೊಡೆದಾಡಿ ಆ ಹುಡುಗಿಯನ್ನು ಕಾಪಾಡುತ್ತಿದ್ದರು. ಈ ಹೊಡೆದಾಟದಲ್ಲಿ ಶಕೀಲ್ ಗೆ ಪೆಟ್ಟು ಬಿದ್ದಿತ್ತು, ಆದರೆ ಅದನ್ನು ಲೆಕ್ಕಿಸದೆ, ಆ ಮೂವರಿಗೂ ಹೊಡೆದು ಜಗಳವಾಡಿ ಓಡಿಹೋಗುವ ಹಾಗೆ ಮಾಡಿದರು, ನಂತರ ಆಕೆಯನ್ನು ಹೊರಗೆ ಕರೆತಂದರು. ಆಕೆಯ ಹೆಸರು ರೇಣು ಸಿಂಗ್ ಆಗಿದ್ದು, ಅಲಿಘರ್ ನಲ್ಲಿ ಇದ್ದ ಆಕೆ, ಶಾಲೆಯಲ್ಲಿ ಟೀಚರ್ ಆಗಿದ್ದಳು. ಆಕೆಗೆ ತಂದೆ ತಾಯಿ ಇರಲಿಲ್ಲ, ಮದುವೆ ಕೂಡ ಆಗಿರಲಿಲ್ಲ. ಆ ಸಮಯದಲ್ಲಿ ಶಕೀಲ್ ಗೆ ಹೊಡೆದಾಟದಲ್ಲಿ ತೀವ್ರವಾಗಿ ಪೆಟ್ಟು ಬಿದ್ದು ರಕ್ತ ಸ್ರಾವ ಆಗುತ್ತಿದ್ದ ಕಾರಣ, ರೇಣು ಅವನನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಳು. ಇದನ್ನು ಓದಿ..Relationship: ಹೆಚ್ಚು ಬೇಡ, ಹೆಣ್ಣಿನ ಈ ಮೂರು ರಹಸ್ಯಗಳನ್ನು ತಿಳಿದುಕೊಳ್ಳಿ, ಮೋಸ ಎಂದಿಗೂ ಹೋಗುವುದಿಲ್ಲ, ನೀವೇ ಕಿಂಗ್ ಆಗಿ ಬದುಕುತ್ತೀರಾ. ಏನೇನು ಗೊತ್ತೇ??

Kannada Story: ಅಂದು ಹೈವೇ ನಲ್ಲಿ ಮೂವರು ಹುಡುಗರಿಂದ ಆಕೆಯನ್ನು ಕಾಪಾಡಿದ, ಕೊನೆಗೆ ಆತನಿಗೆ ಆಕೆ ಏನು ಮಾಡಿದಳು ಗೊತ್ತೇ? ಇಂತವರು ಇರ್ತಾರ? 2

ವೈದ್ಯರು ಶಕೀಲ್ ಗೆ ಟ್ರೀಟ್ಮೆಂಟ್ ಕೊಡುತ್ತಾರೆ. ಬಳಿಕ ಶಕೀಲ್ ತನ್ನ ಜೀವನದಲ್ಲಿ ನಡೆದಿದ್ದನ್ನು ಹೇಳಿದಾಗ, ರೇಣು ಕಣ್ಣೀರು ಹಾಕುತ್ತಾಳೆ. ಬಳಿಕ ಶಕೀಲ್ ರೇಣು ಜೊತೆಗೆ ವಾಸವಿದ್ದರು. ಶಕೀಲ್ ಅನ್ನು ತನ್ನ ಸ್ವಂತ ತಂದೆಯ ಹಾಗೆ ನೋಡಿಕೊಳ್ಳುತ್ತಿದ್ದಾರೆ ರೇಣು. 2019ರ ಸೆಪ್ಟೆಂಬರ್ 11ರಂದು ತಮ್ಮ ಮದುವೆಯ ದಿನ ಎಲ್ಲರ ಎದುರು ಈ ಕಥೆಯನ್ನು ಹೇಳಿದಳು. ದಾರಿಯಲ್ಲಿ ತನ್ನನ್ನು ಕಾಪಾಡಿದ ಶಕೀಲ್ ತಂದೆ ತಾಯಿ ಇಲ್ಲದ ರೇಣು ಪಾಲಿಗೆ ತಂದೆಯಾದರು. ಈಗ ರೇಣು ತನ್ನ ಗಂಡ ಮತ್ತು ಶಕೀಲ್ ಇಬ್ಬರ ಜೊತೆಯಲ್ಲೂ ವಾಸ ಮಾಡುತ್ತಿದ್ದಾರೆ. ಕುಟುಂಬವನ್ನು ಕಳೆದುಕೊಂಡಿದ್ದ ಶಕೀಲ್ ಗೆ ರೇಣು ಮಗಳಾಗಿದ್ದಾರೆ. ಇಂತಹ ವ್ಯಕ್ತಿಗಳು ಇನ್ನು ಕೂಡ ಪ್ರಪಂಚದಲ್ಲಿ ಇದ್ದಾರೆ ಎನ್ನುವುದು ಸಂತೋಷದ ವಿಚಾರ ಆಗಿದೆ. ಇದನ್ನು ಓದಿ..Kannada Story: ಸುಂದರಿ ಎಂದು ಹಿಂದೆ ಬಿದ್ದು ಪ್ರೀತಿ ಮಾಡಿದನು, ಆಕೆ ಕೂಡ ಪ್ರೀತಿ ಮಾಡಿದಳು, ಆದರೆ ಒಂಟಿಯಾಗಿ ಕರೆಸಿ ಏನು ಮಾಡಿದ್ದಾಳೆ ಗೊತ್ತೇ? ಸುಂದರಿಯ ಮತ್ತೊಂದು ಮುಖ.