ಟಾಪ್ ಧಾರಾವಾಹಿಯಾಗಿ ಮೆರೆಯುತ್ತಿರುವಾಗ ಅಭಿಮಾನಿಗಳಿಗೆ ಮತ್ತೊಂದು ಸಂದೇಶ ರವಾನಿಸಿದ ಕಾವ್ಯಾಂಜಲಿ ತಂಡ. ಏನಂತೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನೀವು ಮನೆಯಲ್ಲಿ ಯಾವುದೇ ತಪ್ಪುಗಳನ್ನು ಬೇಕಾದರೂ ಮಾಡಬಹುದು ಆದರೆ ಮನೆಯಲ್ಲಿ ಅಮ್ಮ ಸೀರಿಯಲ್ ನೋಡಬೇಕಾದರೆ ಚಾನೆಲ್ ಬದಲಾಯಿಸಿದರೆ ಮಾತ್ರ ಕಂಡಿತವಾಗಿ ಆಕೆ ಸಹಿಸಲಾರಳು. ಅಷ್ಟರಮಟ್ಟಿಗೆ ಇತ್ತೀಚಿನ ದಿನಗಳಲ್ಲಿ ಧಾರವಾಹಿಯನ್ನುವುದು ಎಲ್ಲರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಎಷ್ಟರಮಟ್ಟಿಗೆ ಎಂದರೆ ಸಿನಿಮಾಗಳಿಗಿಂತ ಹೆಚ್ಚಾಗಿ ಎಂದು ನಿಸ್ಸಂಶಯವಾಗಿ ಹೇಳಬಹುದು.

ಇದರಲ್ಲೂ ನಾವು ಇಂದು ಮಾತನಾಡಲು ಹೊರಟಿರುವುದು ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಒಂದು ಧಾರವಾಹಿಯ ಕುರಿತಂತೆ. ಹೌದು ನಾವು ಮಾತನಾಡುತ್ತಿರುವುದು ಉದಯ ಟಿವಿಯ ಜನಪ್ರಿಯ ದಾರವಾಹಿ ಆಗಿರುವ ಕಾವ್ಯಾಂಜಲಿ ಧಾರಾವಾಹಿಯ ಕುರಿತಂತೆ. ಈ ದಾರವಾಹಿ ಈಗಾಗಲೇ ಅಕ್ಕತಂಗಿಯರ ಬಾಂಧವ್ಯದ ಮೇಲೆ ನಿಂತಿರುವಂತಹ ಸುಂದರ ಕಥೆಯನ್ನು ಹೊಂದಿರುವಂತಹ ಧಾರವಾಹಿ ಆಗಿದೆ. ಒಂದು ಲೆಕ್ಕದಲ್ಲಿ ಹೇಳುವುದಾದರೆ ಉದಯ ಟಿವಿ ವಾಹಿನಿಯ ಅತ್ಯಂತ ಜನಪ್ರಿಯ ಧಾರವಾಹಿ ಎಂದರೂ ಕೂಡ ತಪ್ಪಾಗಲಾರದು. ಈಗಾಗಲೇ ಈ ಧಾರವಾಹಿ ಪ್ರಾರಂಭವಾಗಿ ಎರಡು ವರ್ಷಗಳು ಪೂರ್ಣಗೊಂಡಿದೆ. ಈ ಧಾರಾವಾಹಿಯ ನಟಿಯರು ಕೂಡ ಹಲವಾರು ಜನ ಬದಲಾಗಿದ್ದಾರೆ.

ಟಾಪ್ ಧಾರಾವಾಹಿಯಾಗಿ ಮೆರೆಯುತ್ತಿರುವಾಗ ಅಭಿಮಾನಿಗಳಿಗೆ ಮತ್ತೊಂದು ಸಂದೇಶ ರವಾನಿಸಿದ ಕಾವ್ಯಾಂಜಲಿ ತಂಡ. ಏನಂತೆ ಗೊತ್ತೇ?? 2

ಆದರೂ ಕೂಡ ಈ ಧಾರವಾಹಿ ಮೇಲೆ ಜನರು ತೋರಿಸುತ್ತಿರುವ ಪ್ರೀತಿ ಇನ್ನೂ ಕಡಿಮೆಯಾಗಿಲ್ಲ ಎಂದು ಹೇಳಬಹುದು. ಅಷ್ಟರ ಮಟ್ಟಿಗೆ ಜನಪ್ರಿಯವಾಗಿತ್ತು ಈ ಧಾರವಾಹಿ. ಇನ್ನೇನು 500ನೇ ಸಂಚಿಕೆಯನ್ನು ಮುಗಿಸುವ ಹಂತದಲ್ಲಿರುವ ಹೊತ್ತಲ್ಲೇ ಧಾರವಾಹಿ ಮುಗಿಯುವ ಹಂತಕ್ಕೆ ಬಂದಿದೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಹಾಗಿದ್ದರೆ ಇದಕ್ಕೆ ಕಾರಣ ಏನೆಂದು ಹುಡುಕುವುದಾದರೆ ಅದಕ್ಕೂ ಕೂಡ ಉತ್ತರಗಳಿವೆ. ಹೌದು ಗೆಳೆಯರೇ ಅದೇನೆಂದರೆ ಕಾವ್ಯಾಂಜಲಿ ಧಾರಾವಾಹಿ ಮುಗಿಯುವುದಕ್ಕೆ ಮುಖ್ಯ ಕಾರಣ ಅದರ ಟಿಆರ್ ಪಿ ಯ ಇಳಿಕೆ. ಸಾಮಾನ್ಯವಾಗಿ 8.30 ಕ್ಕೆ ಪ್ರಸಾರವಾಗುತ್ತಿದ್ದ ಕಾವ್ಯಾಂಜಲಿ ಧಾರವಾಹಿಯನ್ನು ಕೆಲವು ಸಮಯಗಳ ಹಿಂದಷ್ಟೇ 9ಗಂಟೆಗೆ ಪ್ರಸಾರ ಮಾಡಲು ಪ್ರಾರಂಭಿಸುತ್ತಾರೆ. ಆದರೆ ನಿರೀಕ್ಷಿತ ಮಟ್ಟದ ವೀಕ್ಷಣೆಗಳು ಈ ಸಮಯದಲ್ಲಿ ದೊರಕುವುದಿಲ್ಲ. ಹೀಗಾಗಿ ಈ ಕಾರಣದಿಂದಲೇ ಧಾರವಾಹಿ ಇನ್ನೇನು ಕೆಲವೇ ದಿನಗಳಲ್ಲಿ ಮುಕ್ತಾಯವಾಗಲಿದೆಯಂತೆ. ಈಗಾಗಲೇ ಚಿತ್ರೀಕರಣ ಕೂಡ ಪೂರ್ಣವಾಗಿದೆ.