Lakshana: ಲಕ್ಷಣದಲ್ಲಿ ಭರ್ಜರಿ ಟ್ವಿಸ್ಟ್: ಇನ್ನೇನು ಡೆವಿಲ್ ಸಿಕ್ಕಿಬಿದ್ದಳು ಎನ್ನುವಷ್ಟರಲ್ಲಿ ಬಚಾವ್ ಆಗಿದ್ದು ಹೇಗೆ ಗೊತ್ತೇ??

Lakshana: ಕಲರ್ಸ್ ಕನ್ನಡದಲ್ಲಿ (Colors Kannada) ರಾತ್ರಿ 8.30 ಕ್ಕೆ ಪ್ರಸಾರವಾಗುವ ಲಕ್ಷಣ (Lakshana) ದಾರಾವಾಹಿ ದಿನದಿಂದ ದಿನಕ್ಕೆ ರೋಚಕತೆಯಿಂದ ಕೂಡಿದೆ. ತೆರೆ ಮರೆಯಲ್ಲೇ ಸಿಎಸ್ ಗೆ ಕಾಟ ಕೊಡುತ್ತಿರುವ ಡೆವಿಲ್ ಅನ್ನು ಸೆರೆ ಹಿಡಿಯುವ ಟ್ರ್ಯಾಪ್ ಮಾಡಲಾಗಿತ್ತು. ನಕ್ಷತ್ರ, ಭೂಪತಿ ಡೆವಿಲ್ ಯಾರು ಎನ್ನುವುದನ್ನು ತಿಳಿದುಕೊಳ್ಳಲು ಆಕೆ ತಾವಿರುವ ಜಾಗಕ್ಕೆ ಬರುವಂತೆ ಯೋಜನೆ ಮಾಡಿದ್ದರು. ಅದೇ ರೀತಿಯಾಗಿ ಆ ಜಾಗಕ್ಕೆ ಡೆವಿಲ್ ಬಂದಿದ್ದಳು. ಆದರೆ ಕೊನೆ ಕ್ಷಣದಲ್ಲಿ ತನ್ನನ್ನು ಕಂಡುಹಿಡಿಯಲು ಇದು ನಕ್ಷತ್ರ ಭೂಪತಿ ಮಾಡಿರುವ ಪ್ಲಾನ್ ಎನ್ನುವುದು ಆಕೆ ನೇಮಿಸಿದ್ದ ಹುಡುಗನಿಂದಲೇ ತಿಳಿಯುತ್ತದೆ. ಆಗ ತಕ್ಷಣವೇ ಡೆವಿಲ್ ಪರಾರಿ ಆಗುತ್ತಾಳೆ. ನಕ್ಷತ್ರ, ಭೂಪತಿ ಬೀಸಿದ್ದ ಬಲೆಗೆ ಡೆವಿಲ್ ಭಾರ್ಗವಿ ಇನ್ನೇನು ಬೀಳಬೇಕು ಎನ್ನುವಷ್ಟರಲ್ಲಿ ಈ ತಂತ್ರ ಫೇಲ್ ಆಗಿದೆ.

ಡೆವಿಲ್ ಕಾರಿನಿಂದ ಬಂದಿಳಿದು ಎಡಿಟರ್ ಕುಮಾರ್ ಕಡೆಗೆ ತಿರುಗುವಷ್ಟರಲ್ಲಿ ಅವಳಿಗೆ ಒಂದು ಕರೆ ಬರುತ್ತದೆ. ಮೌರ್ಯನನ್ನು ಕೊಲ್ಲಲು ಕಳುಹಿಸಿದ ಹುಡುಗ ಆಗ ಅವಳಿಗೆ ಕರೆ ಮಾಡುತ್ತಾನೆ. ಆತ ಮೌರ್ಯ ಸತ್ತಿಲ್ಲ, ಇದೆಲ್ಲ ನಿಮ್ಮನ್ನು ಬಲೆ ಬೀಸಲು ಸಿಎಸ್ ಮಾಡಿದ ತಂತ್ರ. ತಕ್ಷಣವೇ ಅಲ್ಲಿಂದ ತಪ್ಪಿಸಿಕೊಳ್ಳಿ ಎಂದು ಸೂಚನೆ ನೀಡುತ್ತಾನೆ. ಇದರಿಂದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಡೆವಿಲ್ ಅಲ್ಲಿಂದ ತಕ್ಷಣವೇ ಪರಾರಿಯಾಗುತ್ತಾಳೆ. ನಕ್ಷತ್ರ, ಭೂಪತಿ ಅವಳ ಕಾರನ್ನು ಹಿಂಬಾಲಿಸುತ್ತಾರೆ. ಆದರೆ ಆಕೆ ಯಾರೆನ್ನುವುದು ಅವರಿಗೆ ತಿಳಿಯುವುದಿಲ್ಲ. ಈ ಬೆಳವಣಿಗೆಯಿಂದ ನಕ್ಷತ್ರಗೆ ಯಾರೋ ನಮ್ಮ ಜೊತೆಗೆ ಇರುವವರು ಡೆವಿಲ್ಗೆ ಮಾಹಿತಿ ನೀಡುತ್ತಿದ್ದಾರೆ ಎನ್ನುವ ಅನುಮಾನ ಮೂಡುತ್ತದೆ. ಇದನ್ನು ಓದಿ..Kannada News: ಕನ್ನಡತಿಯಲ್ಲಿ ಹೊಸ ಟ್ವಿಸ್ಟ್, ದಿಡೀರ್ ಎಂದು ಬದಲಾದ ಹರ್ಷ, ಈ ಬದಲಾವಣೆ ಇಂದೇ ಇರುವ ಪ್ಲಾನ್ ಏನು ಗೊತ್ತೇ??

Lakshana: ಲಕ್ಷಣದಲ್ಲಿ ಭರ್ಜರಿ ಟ್ವಿಸ್ಟ್: ಇನ್ನೇನು ಡೆವಿಲ್ ಸಿಕ್ಕಿಬಿದ್ದಳು ಎನ್ನುವಷ್ಟರಲ್ಲಿ ಬಚಾವ್ ಆಗಿದ್ದು ಹೇಗೆ ಗೊತ್ತೇ?? 2

ಎಡಿಟರ್ ಕುಮಾರ್ ಈ ಕೆಲಸ ಮಾಡಿರಬಹುದು ಎಂದು ಸಂದೇಹ ವ್ಯಕ್ತವಾಗುತ್ತದೆ. ನಾನು ಬೆಳಿಗ್ಗೆಯಿಂದಲೂ ನಿಮ್ಮೊಂದಿಗೆ ಇದ್ದೇನೆ, ನಾನು ಈ ಕೆಲಸವನ್ನು ಮಾಡಲು ಹೇಗೆ ಸಾಧ್ಯ ಎಂದು ಅವನು ಹೇಳುತ್ತಾನೆ. ಕೊನೆ ಕ್ಷಣದಲ್ಲಿ ಸಿಎಸ್ ಮಾಡಿದ್ದ ಪ್ಲಾನ್ ಟುಸ್ ಆಗುತ್ತದೆ. ತಪ್ಪಿಸಿಕೊಂಡು ಮರಳಿ ಬರುವ ಡೆವಿಲ್ ಭಾರ್ಗವಿ ಸಿಎಸ್ ಮಾಡಿದ್ದ ಪ್ಲಾನ್ ಬಗ್ಗೆ ಕೋಪಗೊಳ್ಳುತ್ತಾಳೆ. ನನಗೆ ಮೋಸ ಮಾಡಲು ನೀನು ಪ್ರಯತ್ನಿಸಿರಬಹುದು. ನಿನ್ನನ್ನು ನಾನು ಸುಮ್ಮನೆ ಬಿಡುವುದಿಲ್ಲ. ಸಂಸಾರ ಪ್ರವಾಹದಲ್ಲಿ ನರಕ ಅನುಭವಿಸುವ ಹಾಗೆ ಮಾಡುತ್ತೇನೆ. ಇನ್ನು ಮುಂದೆ ನನ್ನ ಆಟವನ್ನು ನೋಡುತ್ತಿರು ಎಂದೆಲ್ಲ ಒಬ್ಬಳೇ ಮಾತನಾಡಿಕೊಳ್ಳುತ್ತಾಳೆ. ಇನ್ನು ಇತ್ತ ಕಡೆ ಮೌರ್ಯ ಪರಾರಿಯಾಗಿದ್ದಾನೆ. ಮುಂದಿನ ಸಂಚಿಕೆಗಳಲ್ಲಿ ಮೌರ್ಯ ಏನೆಲ್ಲಾ ಅವಾಂತರ ಮಾಡುತ್ತಾನೆ ಮತ್ತು ಡೆವಿಲ್ ಏನೆಲ್ಲಾ ಕೆಡುಕುಗಳನ್ನು ಮಾಡುತ್ತಾಳೆ ಎನ್ನುವುದನ್ನು ಕಾದು ನೋಡಬೇಕಿದೆ. ಇದನ್ನು ಓದಿ.. Kantara: ಕಾಂತಾರ 2 ಮಾಡಲು ಸಿದ್ದರಾಗಿ, ದೈವದ ಬಳಿ ಅನುಮತಿ ಕೇಳಿದ ರಿಷಬ್ ಶೆಟ್ಟಿ ಗೆ ಹೇಳಿದ್ದೇನು ಗೊತ್ತೇ?? ಬರುವುದಿಲ್ಲವೇ ಕಾಂತಾರ 2??