ಇನ್ನು ಮುಂದೆ ಚಿರುಸರ್ಜಾ ರವರ ಮನೆಗೆ ಹೋಗುವುದಿಲ್ಲವೆ?? ಎಂದಿದ್ದಕ್ಕೆ ಮೇಘನಾ ರಾಜ್ ಹೇಳಿದ ಉತ್ತರವೇ ಬೇರೆ, ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಟಿ ಮೇಘನರಾಜ್ ರವರು ಚಿರು ಸರ್ಜಾ ಅವರನ್ನು ಕಳೆದುಕೊಂಡ ಮೇಲೆ ಜೀವನದಲ್ಲಿ ಎಲ್ಲಾ ಆಸೆಗಳನ್ನು ಕೂಡ ಬಿಟ್ಟಿದ್ದರು. ಆದರೆ ಅವರ ಜೀವನದ ಆಸೆಯ ಹೊಂಗಿರಣ ವಾಗಿ ಮೂಡಿಬಂದಿದ್ದು ಅವರ ಮಗ ರಾಯನ್ ಚಿರು ಸರ್ಜಾ. ಹೌದು ಗೆಳೆಯರೆ ಚಿರು ಸರ್ಜಾ ರವರನ್ನು ಕಳೆದುಕೊಂಡ ಮೇಲೆ ಚಿತ್ರರಂಗದಿಂದ ಸಂಪೂರ್ಣವಾಗಿ ದೂರವಾಗಿದ್ದ ಮೇಘನರಾಜ್ ರವರು ಮಗನ ಆಗಮನದಿಂದಾಗಿ ಆತನಿಗೋಸ್ಕರ ಬದುಕಲು ಪ್ರಾರಂಭಿಸುತ್ತಾರೆ.

ಈಗಾಗಲೇ ಎರಡು ಸಿನಿಮಾಗಳಿಗೆ ಸಹಿ ಹಾಕಿ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಡ್ಯಾನ್ಸಿಂಗ್ ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಕೂಡ ಕಾಣಿಸಿಕೊಳ್ಳುತ್ತಿದ್ದಾರೆ. ಇಷ್ಟು ಮಾತ್ರವಲ್ಲದೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕೂಡ ಪ್ರಮೋಷನ್ ಹಾಗೂ ಕೊಲಬರೇಷನ್ ಮಾಡಿಕೊಳ್ಳುತ್ತಿದ್ದಾರೆ. ಮಗನಿಗಾಗಿ ಚಿರುಸರ್ಜ ರವರು ಕನಸು ಕಂಡಿರುವ ಒಳ್ಳೆಯ ಗುಣಮಟ್ಟದ ಶಿಕ್ಷಣವನ್ನು ಕೂಡ ಕೊಡಿಸಲು ಮೇಘನರಾಜ್ ಹಗಲಿರುಳೆನ್ನದೆ ಶ್ರಮಪಡುತ್ತಿದ್ದಾರೆ.

ಇನ್ನು ಮುಂದೆ ಚಿರುಸರ್ಜಾ ರವರ ಮನೆಗೆ ಹೋಗುವುದಿಲ್ಲವೆ?? ಎಂದಿದ್ದಕ್ಕೆ ಮೇಘನಾ ರಾಜ್ ಹೇಳಿದ ಉತ್ತರವೇ ಬೇರೆ, ಏನು ಗೊತ್ತೇ?? 2

ಇತ್ತೀಚಿಗಷ್ಟೇ ಮೇಘನಾ ರಾಜ್ ಅವರು ಸಂದರ್ಶನವೊಂದರಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮೇಘನಾ ರಾಜ್ ರವರು ಮತ್ತೆ ಚಿರುಸರ್ಜ ರವರ ಮನೆಗೆ ಹೋಗುತ್ತಾರೋ ಇಲ್ಲವೋ ಎನ್ನುವುದರ ಕುರಿತಂತೆ ಚರ್ಚೆಗಳು ಎದ್ದಿವೆ ಇದಕ್ಕೆ ನಿಮ್ಮ ಅಭಿಪ್ರಾಯಗಳೇನು ಎಂಬುದನ್ನು ಸಂದರ್ಶಕರು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಮೇಘನರಾಜ್ ರವರು ನಾವು ಎರಡೂ ಕುಟುಂಬದವರು ಕೂಡ ಒಂದಾಗಿದ್ದೇವೆ. ಇದರ ಕುರಿತಂತೆ ಮೂರನೇ ವ್ಯಕ್ತಿಗಳು ಹರಡುತ್ತಿರುವ ಗಾಳಿಸುದ್ದಿಗಳನ್ನು ನಂಬುವುದು ಬೇಡ ಎಂಬುದಾಗಿ ಹೇಳಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಇದು ನನ್ನ ನಿರ್ಧಾರವಾಗಿದ್ದು ಚಿರು ಸರ್ಜಾ ಅವರ ಕುಟುಂಬದವರು ಕೂಡ ಇದಕ್ಕೆ ನನಗೆ ಪೂರ್ಣ ಅಧಿಕಾರವನ್ನು ನೀಡಿದ್ದಾರೆ ಎಂಬುದಾಗಿ ಹೇಳಿದ್ದಾರೆ. ಜೂನಿಯರ್ ಚಿರು ಸರ್ಜಾ ಜನಿಸಿದ ಮೇಲೆ ಅದು ನನಗೆ ರ’ಕ್ತಸಂಬಂಧದ ಕುಟುಂಬವಾಗಿದೆ ಎಂಬುದಾಗಿ ಕೂಡ ಹೇಳಿದ್ದಾರೆ.