ನಮಸ್ಕಾರ ಸ್ನೇಹಿತರೇ ಯಾವ ವಯಸ್ಸಿನಲ್ಲಿ ಏನು ಕಾರ್ಯ ನಡೆಯಬೇಕೋ ಆಯಾಯ ವಯಸ್ಸಿನಲ್ಲಿ ನಡೆಯಬೇಕು ಇಲ್ಲದಿದ್ದರೆ ಅದರ ಪರಿಣಾಮ ಎನ್ನುವುದು ಸಾಕಷ್ಟು ವ್ಯತಿರಿಕ್ತವಾಗಿ ಇರುತ್ತದೆ ಎಂಬುದನ್ನು ಇಂದಿನ ನೈಜ ಘಟನೆಯ ಮೂಲಕ ನೀವು ತಿಳಿದುಕೊಳ್ಳಬಹುದಾಗಿದೆ. ಹೌದು ಗೆಳೆಯರೆ 60ರ ವಯಸ್ಸಿನ ಮಾಜಿ ನಿವೃತ್ತ ವಿದ್ಯುತ್ ಕೆಲಸಗಾರ ಆಗಿರುವ ರೂಪ್ ದಾಸ್ ರವರು ಅರವತ್ತರ ವಯಸ್ಸಿನಲ್ಲಿ ಮಾಡಲು ಹೊರಟಿರುವ ಕೆಲಸ ಅವರಿಗೆ ಯಾವ ಪರಿಣಾಮವನ್ನು ತಂದಿಟ್ಟಿತ್ತು ಎಂಬುದನ್ನು ನೋಡಿದರೆ ನೀವು ಕೂಡ ನಿಬ್ಬೆರಗಾಗುತ್ತೀರಿ. 92ರ ಇಸವಿಯಲ್ಲಿ ಅವರು ತಮ್ಮ ಪತ್ನಿಯನ್ನು ಕಳೆದುಕೊಳ್ಳುತ್ತಾರೆ.
ಹೆಂಡತಿ ಹೋದ ನಂತರ ಅವರ ಜೊತೆಗೆ ಮಕ್ಕಳಾಗಲಿ ಅಥವಾ ಬೇರೆ ಯಾವ ಸಂಬಂಧಿಗಳಾಗಿರಲಿ ಇರಲಿಲ್ಲ. ಹೀಗಾಗಿ ಅವರು ತಮ್ಮ ಸ್ನೇಹಿತನ ಮೂಲಕ ಮದುವೆ ಆಗುವ ಆಸೆಯನ್ನು ವ್ಯಕ್ತಪಡಿಸುತ್ತಾರೆ. ಸ್ನೇಹಿತ ಆಗಿರುವ ಅಶೋಕ್ ಪೂಜಾ ಎನ್ನುವ 45 ವರ್ಷದ ಮಹಿಳೆಯನ್ನು ರೂಪ್ ದಾಸ್ ರವರಿಗೆ ಮದುವೆಯಾಗಲು ಸೂಚಿಸುತ್ತಾನೆ. ಇಬ್ಬರು ಭೇಟಿಯಾದ ನಂತರ ಅತಿಶೀಘ್ರದಲ್ಲೇ ಮದುವೆ ಆಗುತ್ತಾರೆ. ಮದುವೆಯಾದ ನಂತರ ರೂಪದಾಸ್ ಮನೆಯ ಬೀಗದ ಕೀಯನ್ನು ಆಕೆಗೆ ನೀಡುತ್ತಾರೆ. ಒಂದು ದಿನ ಮದುವೆಯಾದ ನಂತರ ರೂಪದಾಸ್ ಅವರು ಎರಡನೇ ಮಹಡಿಯಲ್ಲಿ ಇದ್ದ ಸಂದರ್ಭದಲ್ಲಿ ಸಹಾಯಕ್ಕಾಗಿ ತನ್ನ ಪತ್ನಿಯನ್ನು ಕರೆಯುತ್ತಾರೆ.
ಆಗ ಯಾವುದೇ ಪ್ರತಿಕ್ರಿಯೆ ಬರೆದಿದ್ದ ಕಾರಣ ಕೆಳಗೆ ಹೋಗಿ ಗಮನಿಸಿದಾಗ ಬೀರುವಿನಲ್ಲಿ ಇದ್ದ ಎಲ್ಲಾ ಹಣ ಹಾಗೂ ಚಿನ್ನಾಭರಣಗಳನ್ನು ಆಕೆ ದೋಚಿಕೊಂಡು ಓಡಿ ಹೋಗಿರುತ್ತಾಳೆ. ಕೂಡಲೇ ರೂಪದಾಸ್ ಪೊಲೀಸ್ ಕಂಪ್ಲೇಂಟ್ ನೀಡುತ್ತಾರೆ. ತನಿಖೆಯಲ್ಲಿ ರೂಪ ದಾಸ್ ಅವರ ಗೆಳೆಯ ಆಗಿರುವ ಅಶೋಕ್ ನೇ ಈ ಎಲ್ಲ ಅವಾಂತರಗಳಿಗೆ ಕಾರಣ ಆಗಿದ್ದಾನೆ ಎಂಬುದಾಗಿ ತಿಳಿದುಬಂದಿದ್ದು ಪೂಜೆ ಎಂದು ಹೇಳಿಕೊಂಡು ಬಂದ ಮಹಿಳೆಯ ನಿಜವಾದ ಹೆಸರು ಹೇಮಾ ಆಗಿರುತ್ತದೆ ಇಬ್ಬರಿಂದಲೂ ಕೂಡ ಈಗಾಗಲೇ ಪೊಲೀಸರು ಹಣ ಹಾಗೂ ಆಭರಣಗಳನ್ನು ವಶಪಡಿಸಿಕೊಂಡಿದ್ದು ಅವರನ್ನು ಜೈಲಿನ ಹಿಂದೆ ಅಟ್ಟಿದ್ದಾರೆ. ಆದರೆ 60ರ ವಯಸ್ಸಿನ ರೂಪದಾಸ್ ರವರಿಗೆ ಈ ಇಳಿವಯಸ್ಸಿನಲ್ಲಿ ಮದುವೆಯಾದದ್ದು ಸಾಕಷ್ಟು ಸಂಕಷ್ಟಕ್ಕೆ ತಳ್ಳಿದೆ ಎನ್ನುವುದು ಮಾತ್ರ ಸತ್ಯ.