Kannada Astrology: ಪ್ರತಿಯೊಂದು ಗ್ರಹದ ಸ್ಥಾನ ಬದಲಾವಣೆ ಕೂಡ ಬಹಳ ಮಹತ್ವವಾದದ್ದು, ಕೆಲವು ಸಾರಿ ಗ್ರಹಗಳ ಮೈತ್ರಿ ಕೂಡ ಆಗುತ್ತದೆ, ಆಗ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಇತ್ತೀಚೆಗೆ ಗ್ರಹಗಳ ರಾಜ ಸೂರ್ಯನು ಕುಂಭ ರಾಶಿಗೆ ಪ್ರವೇಶ ಮಾಡಿದ್ದಾಗ, ಸೂರ್ಯದೇವ ಮತ್ತು ಶನಿದೇವರ ಸಂಯೋಗವಾಗಿದ್ದು, ಇವರಿಬ್ಬರು ತಂದೆ ಮಗ ಆದರೂ ಇಬ್ಬರ ನಡುವೆ ವೈರತ್ವದ ಸಂಬಂಧವಿದೆ. ಆದರೆ ಈಗ ಮಾರ್ಚ್ 16ರಂದು ಸೂರ್ಯದೇವ ಕುಂಭ ರಾಶಿ ಬಿಟ್ಟು ಮೀನ ರಾಶಿಗೆ ಪ್ರವೇಶ ಮಾಡಿರುವುದರಿಂದ ಮೂರು ರಾಶಿಗಳಿಗೆ ಭಾರಿ ಅದೃಷ್ಟ ಶುರುವಾಗಿದೆ. ಆ ರಾಶಿಗಳು ಯಾವುವು? ಅವುಗಳಿಗೆ ಏನೆಲ್ಲಾ ಒಳ್ಳೆಯದಾಗುತ್ತದೆ? ತಿಳಿಸುತ್ತೇವೆ ನೋಡಿ..
ಕುಂಭ ರಾಶಿ :- ಈ ರಾಶಿಯಲ್ಲೇ ಶನಿ ಮತ್ತು ಸೂರ್ಯನ ಸಂಯೋಗವಾಗಿತ್ತು, ಈಗ ಸೂರ್ಯದೇವನ ಸ್ಥಾನ ಬದಲಾವಣೆ ಆಗಿದೆ. ಈ ರಾಶಿಗೆ ಅಧಿಪತಿ ಶನಿದೇವ, ಈ ರಾಶಿಯಿಂದ ಸೂರ್ಯದೇವ ಸ್ಥಾನ ಬದಲಾಯಿಸಿದ ನಂತರ ಮಾಲವ್ಯ ಮತ್ತು ಶಶ್ ರಾಜಯೋಗ ರೂಪುಗೊಳ್ಳುತ್ತಿದೆ. ಇದರಿಂದ ನಿಮಗೆ ಹೆಚ್ಚು ಹಣ ಸಿಗುತ್ತದೆ, ನಿಮ್ಮ ಸಂಪತ್ತು ಹೆಚ್ಚಾಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರಿಗೆ ಆರ್ಡರ್ ಜಾಸ್ತಿ ಸಿಕ್ಕಿ ಲಾಭ ಜಾಸ್ತಿಯಾಗುತ್ತದೆ. ವಾಹನ ಅಥವಾ ಆಸ್ತಿ ಖರೀದಿ ಮಾಡಲು ಇದು ಒಳ್ಳೆಯ ಸಮಯ.
ಮೇಷ ರಾಶಿ :- ಶನಿ ಮತ್ತು ಸೂರ್ಯ ದೂರ ಆಗುವುದರಿಂದ ಈ ರಾಶಿಯವರಿಗೆ ಹೆಚ್ಚು ಒಳಿತಾಗುತ್ತದೆ, ಈ ಕಾರಣದಿಂದ ನಿಮಗೆ ಸಿಗುವ ಲಾಭ ಜಾಸ್ತಿಯಾಗುತ್ತದೆ. ಹಾಗೆಯೇ ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ನಿಮ್ಮದಾಗುತ್ತದೆ. ಒಂದು ವೇಳೆ ನಿಮ್ಮ ಬ್ಯುಸಿನೆಸ್ ಬೇರೆ ದೇಶಕ್ಕೆ ಸಂಬಂಧಿಸಿದ್ದಾಗಿದ್ದರೆ ನಿಮಗೆ ಲಾಭ ಹೆಚ್ಚಾಗುತ್ತದೆ. ಶೇರ್ ಮಾರ್ಕೆಟ್ ನಲ್ಲಿ ಹೂಡಿಕೆ, ಬೆಟ್ಟಿಂಗ್ ಲಾಟರಿ ಇದೆಲ್ಲದರಿಂದ ಲಾಭ ಸಿಗುತ್ತದೆ.
ವೃಷಭ ರಾಶಿ :- ಶನಿ ಮತ್ತು ಸೂರ್ಯದೇವರ ಸಂಯೋಗ ಕೊನೆಯಾಗಿ ನಿಮಗೆ ಒಳ್ಳೆಯದಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಲಾಭವಾಗುತ್ತದೆ. ನಿಮ್ಮ ಜಾತಕದಲ್ಲಿ ತ್ರಿಕೋನ ರಾಜಯೋಗ, ಶಶ ರಾಜಯೋಗ ರೂಪುಗೊಳ್ಳಲಿದ್ದು, ಇದರಿಂದ ನಿಮಗೆ ದಿಢೀರ್ ಧನಲಾಭ ಉಂಟಾಗುತ್ತದೆ. ಬ್ಯುಸಿನೆಸ್ ಮಾಡುತ್ತಿರುವವರ ಹಣ ಸಿಕ್ಕಿಹಾಕಿಕೊಂಡಿದ್ದರೆ ಅದು ನಿಮ್ಮ ಕೈಗೆ ವಾಪಸ್ ಸಿಗುತ್ತದೆ. ಈ ಸಮಯದಲ್ಲಿ ಹೊಸ ಅಗ್ರಿಮೆಂಟ್ ಗಳಿಗೆ ಸೈನ್ ಹಾಕಬಹುದು.. ಹಣಕಾಸಿನ ವಿಚಾರದಲ್ಲಿ ಲಾಭ ಹೆಚ್ಚಾಗುತ್ತದೆ. ಕೆಲಸ ಇಲ್ಲದೆ ಇರುವವರಿಗೆ ಹೊಸ ಕೆಲಸ ಸಿಗಬಹುದು, ಕೆಲಸ ಮಾಡುತ್ತಿರುಬವರಿಗೆ ಬಡ್ತಿ ಇನ್ಕ್ರಿಮೆಂಟ್ ಸಿಗಬಹುದು.