Tulasi Plant: ನಮ್ಮ ಭಾರತ ದೇಶದ ಹಿಂದೂ ಸಂಪ್ರದಾಯ ಪಾಲಿಸುವ ಬಹುತೇಕ ಎಲ್ಲರ ಮನೆಯಲ್ಲಿ ತುಳಸಿ ಗಿಡ ಇರುತ್ತದೆ. ತುಳಸಿ ಗಿಡಕ್ಕೆ ಪ್ರತಿದಿನ ಪೂಜೆ ಮಾಡುತ್ತಾರೆ, ಗಿಡದ ಹತ್ತಿರ ದೀಪ ಬೆಳಗುತ್ತಾರೆ. ತುಳಸಿ ಗಿಡ ಮನೆಯಲ್ಲಿದ್ದರೆ ಅದು ಶುಭ ಸಂಕೇತ ಎನ್ನುತ್ತಾರೆ. ತುಳಸಿ ಲಕ್ಷ್ಮೀದೇವಿಯ ಸ್ವರೂಪ. ಹಾಗಾಗಿ ತುಳಸಿ ಗಿಡ ಮನೆಯಲ್ಲಿದ್ದರೆ ಲಕ್ಷ್ಮೀದೇವಿಯ ಅನುಗ್ರಹವೇ ಮನೆಯಲ್ಲಿ ಇದ್ದ ಹಾಗೆ.
ತುಳಸಿ ಗಿಡದ ಇದ್ದ ಮನೆಯೊಳಗೆ ನೆಗಟಿವ್ ಎನರ್ಜಿಗಳು ಸುಳಿಯುವುದಿಲ್ಲ ಎಂದು ಹೇಳುತ್ತಾರೆ. ತುಳಸಿ ಗಿಡಕ್ಕೆ ಕೆಲವೊಮ್ಮೆ ಎಷ್ಟೇ ಆರೈಕೆ ಮಾಡಿದರು ಸಹ ಗಿಡ ಒಣಗಿ ಹೋಗುತ್ತದೆ, ಇದು ಸಾಮಾನ್ಯವಾಗಿ ನಡೆಯುವ ವಿಷಯವೇ ಎಂದು ಅನ್ನಿಸಿದರು ಸಹ ಕೆಲವೊಮ್ಮೆ ತುಳಸಿ ಗಿಡ ಒಣಗುವುದು ಒಳ್ಳೆಯದಲ್ಲ, ಕೆಟ್ಟದ್ದೇನೋ ಸಂಭವಿಸುವುದರ ಮುನ್ಸೂಚನೆ ಎಂದು ಪರಿಗಣಿಸುತ್ತಾರೆ. ಈ ರೀತಿ ತುಳಸಿ ಗಿಡ ಒಣಗಿದರೆ, ಗಿಡವನ್ನು ಕೀಳುವಾಗ ನೀವು ಕೆಲವು ಮಾರ್ಗಗಳನ್ನು ಅನುಸರಿಸಬೇಕಾಗುತ್ತದೆ. ಅವುಗಳ ಬಗ್ಗೆ ಇಂದು ನಿಮಗೆ ತಿಳಿಸುತ್ತೇವೆ ನೋಡಿ.. ಇದನ್ನು ಓದಿ..Horoscope: ಶನಿ ದೇವ- ಸೂರ್ಯ ದೇವ ಒಟ್ಟಾಗಿ ನಿಂತು ಅದೃಷ್ಟ ಕೊಡುತ್ತಿರುವುದು ಯಾವ ರಾಶಿಗಳಿಗೆ ಗೊತ್ತೇ? ಮುಟ್ಟಿದೆಲ್ಲಾ ಚಿನ್ನ ಆಗುವ ಕಾಲ ಬಂದೆ ಬಿಡ್ತು
*ನೀವು ಸ್ನಾನ ಮಾಡಿದ ನಂತರವೇ ತುಳಸಿ ಗಿಡವನ್ನು ಕೇಳಬೇಕು.
*ನೀವು ತುಳಸಿ ಗಿಡವನ್ನು ಕೀಳುವುದಕ್ಕಿಂತ ಮೊದಲು ಗಿಡಕ್ಕೆ ಸ್ವಲ್ಪ ನೀರನ್ನು ಚಿಮುಕಿಸಬೇಕು, ಆಗ ಸುತ್ತ ಇರುವ ಮಣ್ಣು ಒದ್ದೆಯಾಗುತ್ತದೆ.
*ಹಾಗೆಯೇ ಗಿಡವನ್ನು ಕೀಳುವುದಕ್ಕಿಂತ ಮೊದಲು ತಾಯಿ ಲಕ್ಷ್ಮಿ ಹಾಗೂ ಭಗವಾನ್ ವಿಷ್ಣು ಅವರ ಸ್ಮರಣೆ ಮಾಡಬೇಕು.
*ತುಳಸಿ ಗಿಡವನ್ನು ಕಿತ್ತು ಹಾಕಿದ ನಂತರ ಎಲ್ಲೆಲ್ಲೋ ಅದನ್ನು ಬಿಸಾಕಬಾರದು.
*ತುಳಸಿ ಗಿಡವನ್ನು ಹರಿಯುವ ನೀರಿನಲ್ಲಿ ಬಿಡಬೇಕು.
*ತುಳಸಿ ಪವಿತ್ರವಾದ ಗಿಡ, ಹಾಗಾಗಿ ಮರೆತು ಕೂಡ ತುಳಸಿ ಗಿಡವನ್ನು ಕಸದ ಹತ್ತಿರ ಹಾಕಬೇಡಿ.
ಒಂದು ಮನೆಯಲ್ಲಿ ತುಳಸಿ ಗಿಡಕ್ಕೆ ತೊಂದರೆ ಆದರೆ ಅಲ್ಲಿ ಸಂತೋಷ ಸಮೃದ್ಧಿಗೆ ಯಾವುದೇ ತೊಂದರೆ ಆಗುವುದಿಲ್ಲ. ಹಾಗಾಗಿ ತುಳಸಿ ಗಿಡವನ್ನು ಸೂರ್ಯಗ್ರಹಣ, ಏಕಾದಶಿ, ಅಮಾವಾಸ್ಯೆ, ಚಂದ್ರಗ್ರಹಣ, ಹುಣ್ಣಿಮೆ, ಭಾನುವಾರ, ಸೂತಕ, ಪಿತೃಪಕ್ಷ ಇಂಥ ದಿನಗಳಲ್ಲಿ ಕೀಳಬಾರದು. ಬೇರೆ ದಿನಗಳಲ್ಲಿ ಈ ನಿಯಮಗಳನ್ನು ಅನುಸರಿಸಿ ತುಳಸಿ ಗಿಡವನ್ನು ಕೀಳಬಹುದು. ಇದನ್ನು ಓದಿ..Astrology: ಕೊನೆಗೂ ಈ ರಾಶಿಗಳಿಗೆ ಅದೃಷ್ಟದ ಸಮಯ ಬಂದೆ ಬಿಡ್ತು- ಸರ್ಕಾರೀ ನೌಕರಿ, ಉದ್ಯೋಗ, ಹಣ ಸಂಪತ್ತು ಎಲ್ಲವೂ ಇವರಿಗೆ ಮಾತ್ರ. ಯಾವ ರಾಶಿಯವರಿಗೆ ಗೊತ್ತೆ?