ನಮಸ್ಕಾರ ಸ್ನೇಹಿತರೆ ಪ್ರತಿಯೊಬ್ಬ ವ್ಯಕ್ತಿ ಕೂಡ ತನ್ನ ಜೀವನದಲ್ಲಿ ಹಣವನ್ನು ಗಳಿಸಿ ಐಷಾರಾಮಿಯಾಗಿ ತಾನಂದುಕೊಂಡ ಹಾಗೆ ತನ್ನ ಕನಸಿನ ಜೀವನವನ್ನು ನಡೆಸಬೇಕು ಎನ್ನುವುದಾಗಿ ಭಾವಿಸಿರುತ್ತಾನೆ. ಇದಕ್ಕಾಗಿ ಹಣವನ್ನು ಗಳಿಸುವುದು ಅತ್ಯಂತ ಪ್ರಮುಖವಾಗಿರುತ್ತದೆ. ದುಡ್ಡೇ ದೊಡ್ಡಪ್ಪ ಎನ್ನುವ ಕಾಲವಿದು ಎನ್ನುವುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾಗಿಲ್ಲ.
ಚೆನ್ನಾಗಿ ದುಡಿದು ಹಣವನ್ನು ಸಂಪಾದಿಸಿ ತನ್ನ ಹೆಂಡತಿಯನ್ನು ಹಾಗೂ ತಂದೆ ತಾಯಿಯರನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬುದಾಗಿ ಪ್ರತಿಯೊಬ್ಬ ಪುರುಷನು ಕೂಡ ಕನಸನ್ನು ಕಂಡಿರುತ್ತಾನೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಕೆಲವೊಂದು ವಸ್ತುಗಳನ್ನು ಕೆಲವೊಂದು ದಿಕ್ಕಿನಲ್ಲಿ ಇಟ್ಟರೆ ಮಾತ್ರ ಹಣದ ಹರಿವು ಮೂಡಿ ಬರುತ್ತದೆ ಎಂಬುದಾಗಿ ಉಲ್ಲೇಖವಾಗಿದೆ. ಇನ್ನು ಅದರಲ್ಲಿ ಪ್ರಮುಖವಾಗಿ ವಾಸ್ತುಶಾಸ್ತ್ರದ ಪ್ರಕಾರ ವಿಘ್ನಾಮಿನಾಶಕ ಹಾಗೂ ಪ್ರತಿಯೊಂದು ಶುಭ ಕೆಲಸಗಳ ಮುನ್ನ ಪೂಜಿಸಬೇಕಾದ ಗಣೇಶನನ್ನು ನೀವು ಮನೆಯಲ್ಲಿ ಮೂರ್ತಿಯ ರೂಪದಲ್ಲಿ ತಂದಿಟ್ಟುಕೊಂಡು ಪೂಜಿಸಲೇಬೇಕು ಎನ್ನುವುದಾಗಿ ವಾಸ್ತುಶಾಸ್ತ್ರದಲ್ಲಿ ಪ್ರಮುಖವಾಗಿ ಹೇಳಲಾಗುತ್ತದೆ. ಹೀಗಾಗಿ ಮನೆಯಲ್ಲಿ ವಿಜ್ಞಾನ ವಿನಾಶಕ ಶುಭಕಾರಕ ಪಾರ್ವತಿ ತನಯ ಗಣೇಶನ ಸುಂದರ ಮೂರ್ತಿಯನ್ನು ದೇವರ ಕೋಣೆಯಲ್ಲಿಟ್ಟು ದೈನಂದಿನ ಪೂಜೆ ಮಾಡಬೇಕು.
ಆದರೆ ಅದರಲ್ಲಿಯೂ ಕೂಡ ವಿಶೇಷವಾಗಿ ನಿಗಾ ವಹಿಸಿ ವಾಸ್ತು ಶಾಸ್ತ್ರದ ಪ್ರಕಾರ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ ಗಣಪತಿ ದೇವನ ಮೂರ್ತಿಯನ್ನು ಮೂರ್ತಿಯ ಮುಖ ಮನೆಯ ಮುಖ್ಯದ್ವಾರವನ್ನು ನೋಡುವ ಹಾಗೆ ಪ್ರತಿಷ್ಠಾಪಿಸಿ ದಿನಾಲು ಪೂಜೆ ಮಾಡಬೇಕು. ಇದರಿಂದಾಗಿ ನಿಮ್ಮ ಮನೆಯಲ್ಲಿರುವ ಎಲ್ಲಾ ನಕಾರಾತ್ಮಕ ಗುಣಗಳು ದೂರ ಹೋಗಿ ಸಕಾರಾತ್ಮಕತೆ ಎನ್ನುವುದು ಹೆಚ್ಚಾಗಿ ಮನೆಯಲ್ಲಿ ಲಕ್ಷ್ಮೀದೇವಿ ಪ್ರಸನ್ನಗೊಂಡು ನಿಮ್ಮ ಜೀವನದಲ್ಲಿ ಹಣದ ಹರಿವು ಹೆಚ್ಚಾಗಿ ನೀವು ಹಣವಂತರಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ನೀವು ಕೂಡ ಈ ವಿಚಾರವನ್ನು ಒಪ್ಪಿಕೊಳ್ಳುವುದಾದರೆ ತಪ್ಪದೇ ಓಂ ಗಣೇಶಾಯ ನಮಃ ಎಂಬುದಾಗಿ ಕಾಮೆಂಟ್ ಮೂಲಕ ಹಂಚಿಕೊಳ್ಳಿ.