ಸಾಕಷ್ಟು ಬೇರೆ ಸ್ಪಿನ್ನರ್ ಇದ್ದರೂ ಕೂಡ ವನಿಂದು ಹಸಾರಂಗ ರವರಿಗೆ ಶತ ಕೋಟಿ ಕೊಟ್ಟಿದ್ದೇಕೆ ಗೊತ್ತೇ??ಕೊನೆಗೂ ಕಾರಣ ತಿಳಿಸಿದ ಆರ್ಸಿಬಿ ಮ್ಯಾನೇಜ್ಮೆಂಟ್.

ನಮಸ್ಕಾರ ಸ್ನೇಹಿತರೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ತಂಡವೆಂದರೇ ಅದು ಆರ್ಸಿಬಿ. ಆದರೇ ಈವರೆಗೂ ಒಂದೇ ಒಂದು ಬಾರಿ ಸಹ ಕಪ್ ಗೆದ್ದಿಲ್ಲ. ಈ ಭಾರಿಯಾದರೂ ಕಪ್ ಗೆಲ್ಲಲಿದೆಯಾ ಎಂಬ ಅಭಿಮಾನಿಗಳ ಆಸೆಗೆ, ಆರ್ಸಿಬಿ ತಂಡದ ಮ್ಯಾನೆಜ್ ಮೆಂಟ್ ಸಹಕರಿಸುತ್ತಿದಯೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ.ಏಕೆಂದರೇ ಹರಾಜಿನಲ್ಲಿ ಆರ್ಸಿಬಿ ಅಭಿಮಾನಿಗಳಿಗೆ ಅನೀರಿಕ್ಷಿತ ಎಂಬಂತೆ ಹಲವು ಆಟಗಾರರನ್ನು ಖರೀದಿ ಮಾಡಲಾಗಿದೆ.

ಅದರಲ್ಲೂ ಶ್ರೀಲಂಕಾದ ಆಲ್ ರೌಂಡರ್ ವನಿಂದು ಹಸರಂಗ ರವರನ್ನು ಬರೋಬ್ಬರಿ ೧೦.೭೫ ಕೋಟಿ ರೂ ನೀಡಿ ಖರೀದಿಸಿದ್ದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಆದರೇ ಹರಾಜಿನ ನಂತರ ಈ ಬಗ್ಗೆ ಸ್ಪಷ್ಠೀಕರಣ ನೀಡಿರುವ ಆರ್ಸಿಬಿ ಮ್ಯಾನೇಜ್ ಮೆಂಟ್ ಹಸರಂಗರವರಿಗೆ ಅಷ್ಟು ದೊಡ್ಡ ಮೊತ್ತ ನೀಡಿದ ಖರೀದಿಯ ರಹಸ್ಯವನ್ನು ಬಹಿರಂಗಗೊಳಿಸಿದೆ.

ಸಾಕಷ್ಟು ಬೇರೆ ಸ್ಪಿನ್ನರ್ ಇದ್ದರೂ ಕೂಡ ವನಿಂದು ಹಸಾರಂಗ ರವರಿಗೆ ಶತ ಕೋಟಿ ಕೊಟ್ಟಿದ್ದೇಕೆ ಗೊತ್ತೇ??ಕೊನೆಗೂ ಕಾರಣ ತಿಳಿಸಿದ ಆರ್ಸಿಬಿ ಮ್ಯಾನೇಜ್ಮೆಂಟ್. 2

ಹರಾಜಿನ ಮೊದಲ ದಿನ ಕೇವಲ ಫಾಪ್ ಡು ಪ್ಲೇಸಿಸ್ ಹಾಗೂ ವನಿಂದು ಹಸರಂಗ ರವರನ್ನು ಮಾತ್ರ ಟಾರ್ಗೆಟ್ ಮಾಡಲು ನಿರ್ಧರಿಸಿತ್ತಂತೆ. ಇವರು ದೊರೆತ ನಂತರ ಹರ್ಷಲ್ ಪಟೇಲ್ ರನ್ನು ಟಾರ್ಗೇಟ್ ಮಾಡಲು ನಿರ್ಧರಿಸಿತ್ತು. ಆದರೇ ವನಿಂದು ಹಸರಂಗ ರವರನ್ನು ಖರೀದಿಸಲು ಪಂಜಾಬ್ ಕಿಂಗ್ಸ್ ಸಹ ಪೈಪೋಟಿ ನೀಡಿದ ಕಾರಣ ಅಂದುಕೊಂಡದ್ದಕ್ಕಿಂತ ಜಾಸ್ತಿ ಮೊತ್ತ ಆಯಿತು ಎಂದು ಹೇಳಿದರು.

ವನಿಂದು ಹಸರಂಗ ಸಧ್ಯ ವಿಶ್ವದ ನಂಬರ್ ೧, ಟಿ೨೦ ಬೌಲರ್. ಅವರು ತಮ್ಮ ಗೂಗ್ಲಿ ಗಳಿಂದ ಬ್ಯಾಟ್ಸ್ಮನ್ ಗಳಿಗೆ ಬಹಳಷ್ಟು ಕಾಡುತ್ತಾರೆ. ಅದಲ್ಲದೇ ಬ್ಯಾಟಿಂಗ್ ನಲ್ಲಿಯೂ ಸಹ ಉತ್ತಮವಾಗಿ ಬ್ಯಾಟ್ ಮಾಡುತ್ತಾರೆ. ಕಳೆದ ಭಾರಿ ಕೇವಲ ಎರಡು ಪಂದ್ಯವಾಡಿದ್ದರು. ಆದರೇ ಈ ಭಾರಿ ಅವರು ಮಿಂಚುವ ವಿಶ್ವಾಸವಿದೆ. ಅದಲ್ಲದೇ ಅವರು ಆರ್ಸಿಬಿ ಪರ ಮ್ಯಾಚ್ ವಿನ್ನರ್ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಹೇಳಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.