ಇಹಲೋಕ ತ್ಯಜಿಸಿದ ನಂತರವೂ ಕೂಡ ಜನರಿಗೆ ಮತ್ತೊಂದು ರೀತಿಯಲ್ಲಿ ಸಹಾಯ ಮಾಡುತ್ತಿರುವ ಅಪ್ಪು, ಹೊಸ ಸಾಹಸಕ್ಕೆ ಬೆರಗಾದ ವೈದ್ಯ ಲೋಕ.

ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಮಾಡಿರುವ ಸಮಾಜ ಸೇವೆಗಳ ಕುರಿತಂತೆ ಅವರ ಮರಣದ ನಂತರ ಎಲ್ಲರಿಗೂ ಕೂಡ ತಿಳಿದಿದೆ. ಈಗ ಮರಣಾನಂತರ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಹಲವಾರು ಜನರ ಬಾಳಿಗೆ ಬೆಳಕಾಗಿದ್ದಾರೆ.

punith kannu 1 | ಇಹಲೋಕ ತ್ಯಜಿಸಿದ ನಂತರವೂ ಕೂಡ ಜನರಿಗೆ ಮತ್ತೊಂದು ರೀತಿಯಲ್ಲಿ ಸಹಾಯ ಮಾಡುತ್ತಿರುವ ಅಪ್ಪು, ಹೊಸ ಸಾಹಸಕ್ಕೆ ಬೆರಗಾದ ವೈದ್ಯ ಲೋಕ.
ಇಹಲೋಕ ತ್ಯಜಿಸಿದ ನಂತರವೂ ಕೂಡ ಜನರಿಗೆ ಮತ್ತೊಂದು ರೀತಿಯಲ್ಲಿ ಸಹಾಯ ಮಾಡುತ್ತಿರುವ ಅಪ್ಪು, ಹೊಸ ಸಾಹಸಕ್ಕೆ ಬೆರಗಾದ ವೈದ್ಯ ಲೋಕ. 2

ನಿಮಗೆಲ್ಲ ತಿಳಿದಿರುವಂತೆ ಮರಣಾನಂತರ ನೇತ್ರದಾನ ಮಾಡಿ ಈಗಾಗಲೇ ನಾಲ್ಕು ಜನರಿಗೆ ಅಂಧತ್ವದಿಂದ ಮುಕ್ತಿ ನೀಡಿದ್ದಾರೆ ನಮ್ಮ ಅಪ್ಪು. ಆದರೆ ಈಗ ಕೇಳಿಬರುತ್ತಿರುವ ಸುದ್ದಿಯ ಪ್ರಕಾರ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕಣ್ಣಿನಿಂದಾಗಿ ಇನ್ನೂ ಹತ್ತು ಜನಕ್ಕೆ ದೃಷ್ಟಿ ನೀಡುವ ಸಿದ್ಧತೆಗಳು ನಡೆಯುತ್ತಿವೆಯಂತೆ. ಪುನೀತ್ ರಾಜಕುಮಾರ್ ಅವರ ಕಣ್ಣಿನ ಕಾರ್ನಿಯಾ ಭಾಗಗಳನ್ನು ಉಪಯೋಗಿಸಿಕೊಂಡು ನಾಲ್ಕು ಜನರಿಗೆ ದೃಷ್ಟಿಯನ್ನು ನೀಡಲಾಗಿತ್ತು. ಸದ್ಯಕ್ಕೆ ನಾರಾಯಣ ನೇತ್ರಾಲಯ ಆಸ್ಪತ್ರೆಯಲ್ಲಿ ಪುನೀತ್ ರಾಜಕುಮಾರ್ ರವರ ಕಣ್ಣುಗಳಿಂದ ಸ್ಟೆಮ್ ಸೆಲ್ ಗಳನ್ನು ಮಲ್ಟಿಪಲ್ ಮಾಡಲು ಪ್ರಯತ್ನಗಳು ನಡೆಯುತ್ತಿವೆ.

ಇದು ಯಶಸ್ವಿಯಾದರೆ ಇದನ್ನು ಪಟಾಕಿ ಸಂಭ್ರಮಿಸುವ ಸಂದರ್ಭದಲ್ಲಿ ಕಣ್ಣು ಕಳೆದುಕೊಂಡವರಿಗೆ, ಇನ್ನು ಹಲವಾರು ಜನರು ವಂಶವಾಹಿನಿಯಿಂದಾಗಿ ಅಂಧತ್ವವನ್ನು ಪಡೆದುಕೊಂಡವರಿಗೆ ಕಸಿ ಮಾಡಬಹುದಾಗಿದೆ ಹಾಗೂ ಅವರ ದೃಷ್ಟಿಯನ್ನು ಮತ್ತೆ ಮರುಕಳಿಸಬಹುದಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಪುನೀತ್ ರಾಜಕುಮಾರ್ ಅವರ ಕಣ್ಣುಗಳ ಬಿಳಿಗುಡ್ಡೆಯಿಂದ ತೆಗೆದಂತಹ ಸ್ಟೆಮ್ ಸೆಲ್ ಗಳನ್ನು ಹತ್ತು ಜನರ ವರೆಗೆ ಅಳವಡಿಸಬಹುದಾಗಿದೆ. ಹಾಗೂ ಅವರಿಗೆ ದೃಷ್ಟಿಯನ್ನು ನೀಡಬಹುದಾಗಿದೆ. ಮರಣದ ನಂತರವೂ ಕೂಡ ಪುನೀತ್ ರಾಜಕುಮಾರ್ ರವರಿಂದ ನಡೆಯುತ್ತಿರುವ ಈ ಮಹಾನ್ ಕಾರ್ಯಕ್ಕೆ ಖಂಡಿತವಾಗಿಯೂ ನಾವು ತಲೆಬಾಗಲೇಬೇಕು. ಈ ಕಾರ್ಯ ಇನ್ನೂ ಹೆಚ್ಚಿನ ಯುವಜನತೆಗೆ ನೇತ್ರದಾನ ಮಾಡಲು ಪ್ರೇರೇಪಿಸಿದೆ.

Comments are closed.