ರಾಜಕೀಯದಿಂದ ಬಹುತೇಕ ದೂರ ಉಳಿದಿರುವ ಯಡಿಯೂರಪ್ಪ ರವರು ಮನೆಯಲ್ಲಿ ಟೈಮ್ ಪಾಸ್ ಹೇಗೆ ಮಾಡುತ್ತಿದ್ದಾರೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸದ್ಯ ರಾಜಕಾರಣದಿಂದ ದೂರ ಉಳಿದಿದ್ದಾರೆ. ಮೊದಲಿನಂತೆ ಪ್ರವಾಸಗಳಿಲ್ಲ, ಸದಾ ಗಿಜಿಗುಡುತ್ತಿದ್ದ ಜನಜಂಗುಳಿ ಈಗ ಇಲ್ಲ. ಹಾಗಾಗಿ ಅವರು ನೆಮ್ಮದಿಯಾಗಿ ಟೈಂ ಪಾಸ್ ಮಾಡುತ್ತಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಯಡಿಯೂರಪ್ಪ ಒಬ್ಬ ಪುಸ್ತಕ ಪ್ರೇಮಿ. ಬಿಡುವಿದ್ದಾಗಲೆಲ್ಲಾ ಅವರು ಪುಸ್ತಕಗಳನ್ನ ಓದುವಲ್ಲಿ ತಲ್ಲೀನರಾಗಿ ಬಿಡುತ್ತಿದ್ದರು. ಈಗ ಬಿಡುವಿನ ಸಮಯವನ್ನು ಕಳೆಯಲು ಯಡಿಯೂರಪ್ಪನವರು ಹೊಸ ದಾರಿಯನ್ನು ಹುಡುಕಿ ಕೊಂಡಿದ್ದಾರೆ. ಅದು ಯಾವುದೆಂದರೇ ಧಾರಾವಾಹಿಗಳ ವೀಕ್ಷಣೆ.
ಕನ್ನಡದಲ್ಲಿ ಪ್ರಸಾರವಾಗುವ ಹಲವು ಧಾರಾವಾಹಿಗಳು ಯಡಿಯೂರಪ್ಪನವರಿಗೆ ಇಷ್ಟವಂತೆ. ಈ ಹಿಂದೆ ಲಾಕ್ ಡೌನ್ ಸಮಯದಲ್ಲಿ ಪ್ರಸಾರವಾಗುತ್ತಿದ್ದ ಮಹಾಭಾರತ ಧಾರಾವಾಹಿಯನ್ನು ಒಂದು ಎಪಿಸೋಡ್ ಸಹ ಬಿಡದೇ ವೀಕ್ಷಿಸಿದ್ದು ಸುದ್ದಿಯಾಗಿತ್ತು. ಈಗ ಮೊದಲು ಪ್ರಸಾರವಾಗಿದ್ದ ಟಿ.ಎನ್.ಸೀತಾರಾಂ ಧಾರಾವಾಹಿಗಳೆಂದರೇ ಯಡಿಯೂರಪ್ಪನವರಿಗೆ ಬಲು ಇಷ್ಟವಂತೆ.
ಮನೆಮಂದಿಯನ್ನೆಲ್ಲಾ ಒಂದು ಕಾಲದಲ್ಲಿ ಟಿ.ಎನ್.ಸೀತಾರಾಂ ಧಾರಾವಾಹಿಗಳು ಸೆಳೆಯುತ್ತಿದ್ದವು. ಅದೇ ರೀತಿಯ ಧಾರಾವಾಹಿಗಳಾದ ಮಾಯಾಮೃಗ,ಮುಕ್ತ ಮುಕ್ತ, ಮಗಳು ಜಾನಕಿ ಧಾರಾವಾಹಿಗಳ ಸಿಡಿಯನ್ನ ತರಿಸಿಕೊಂಡು ನೋಡುತ್ತಿದ್ದಾರಂತೆ. ಮಗಳು ಜಾನಕಿ ಧಾರಾವಾಹಿಯ ಸಿಡಿಯನ್ನು ಸ್ವತಃ ನಿರ್ದೇಶಕ ಟಿ.ಎನ್.ಸೀತಾರಾಂರವರೇ ತಂದು ಯಡಿಯೂರಪ್ಪನವರಿಗೆ ನೀಡಿದ್ದಾರಂತೆ. ಯಡಿಯೂರಪ್ಪನವರ ರಾಜಕೀಯ ನಿವೃತ್ತಿ ಜೀವನ ಸುಖಕರವಾಗಿರಲೆಂದು ಹಾರೈಸೋಣ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.
Comments are closed.