Kannada News: ಇರುವುದನ್ನು ಇದ್ದಹಾಗೆ ಒಪ್ಪಿಕೊಂಡ ರಶ್ಮಿಕಾ: ಆರಂಭದಲ್ಲಿಯೇ ಆ ತಪ್ಪು ಮಾಡಿಬಿಟ್ಟೆ, ಅದಾದ ಮೇಲೆ ಅಭ್ಯಾಸ ಆಗೋಯ್ತು ಎಂದಿದ್ದು ಯಾಕೆ ಗೊತ್ತೇ??

Kannada News: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಇತ್ತೀಚಿಗೆ ಬಾಲಿವುಡ್ ಸಾಂಗ್ ಮತ್ತು ಸೌತ್ ಸಾಂಗ್ಸ್ ಕುರಿತಾಗಿ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಬಾಲಿವುಡ್ ಸಾಂಗ್ ಕುರಿತಾಗಿ ಮೆಚ್ಚುಗೆ ವ್ಯಕ್ತಪಡಿಸುವ ಭರದಲ್ಲಿ ಅವರು ದಕ್ಷಿಣ ಭಾರತದ ಚಿತ್ರಗೀತೆಗಳ ಬಗ್ಗೆ ಹೇಳಿದ ಮಾತುಗಳು ಸಾಕಷ್ಟು ಟೀಕೆಗೆ ಕಾರಣವಾಗಿದ್ದವು. ಇನ್ನು ನಟಿ ರಶ್ಮಿಕ ಮಂದಣ್ಣ ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ತಾವು ಎದುರಿಸುತ್ತಿರುವ ಟ್ರೋಲ್ ಗಳು, ವಿವಾದಗಳ ಕುರಿತಾಗಿ ಮಾತನಾಡಿದ್ದಾರೆ. ಈ ವೇಳೆ ಟ್ರೋಲ್ ಮಾಡುವವರ ಕುರಿತಾಗಿ ಮಾತನಾಡಿರುವ ಅವರು ಕೆಲವು ಆಶ್ಚರ್ಯಕರ ಹೇಳಿಕೆಗಳನ್ನು ನೀಡಿದ್ದಾರೆ. ಇಷ್ಟು ಮಾತ್ರವಲ್ಲದೆ ತಮ್ಮನ್ನು ಇಷ್ಟೊಂದು ಟೀಕಿಸುತ್ತಿರುವ, ಟ್ರೋಲ್ ಮಾಡುತ್ತಿರುವುದಕ್ಕೆ ತಾವು ಮಾಡಿದ ಅದೊಂದು ತಪ್ಪು ಮುಖ್ಯ ಕಾರಣ ಎಂದು ಹೇಳಿದ್ದಾರೆ. ಹಾಗಿದ್ದರೆ ರಶ್ಮಿಕ ಅವರು ಮಾಡಿದ ಆ ತಪ್ಪು ಯಾವುದು ಗೊತ್ತಾ?

ರಶ್ಮಿಕ ಇತ್ತೀಚಿಗೆ ಸಂದರ್ಶನ ಒಂದರಲ್ಲಿ ತಮ್ಮ ಕುರಿತಾದ ಟ್ರೋಲ್ ಗಳ ಕುರಿತಾಗಿ ಪ್ರತಿಕ್ರಿಯಿಸಿದ್ದಾರೆ. ಈ ಮೊದಲು ಸಹ ಅವರು ಕೆಲವು ದಿನಗಳ ಹಿಂದೆ ಬಹಳ ದೀರ್ಘವಾಗಿ instagram ನಲ್ಲಿ ತಮ್ಮನ್ನು ಟೀಕಿಸುವವರ ಕುರಿತಾಗಿ ಬರೆದುಕೊಂಡಿದ್ದರು. ‘ನಾನು ಏನೇ ಮಾಡಿದರು ತಪ್ಪಾಗುತ್ತದೆ. ನಾನು ಯಾವುದೇ ಕೆಟ್ಟ ಉದ್ದೇಶ ಇಟ್ಟುಕೊಂಡು ಹಾಗೆ ನಡೆದುಕೊಂಡಿರುವುದಿಲ್ಲ ಅಥವಾ ಮಾತನಾಡಿರುವುದಿಲ್ಲ. ಆದರೂ ಕೂಡ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ನಾನು ಇದನ್ನು ಮೊದಲೇ ಮಾತಾಡಬೇಕಿತ್ತು, ಆದರೆ ಇಷ್ಟು ದಿನ ಬಿಟ್ಟುಕೊಂಡಿದ್ದೆ ತಪ್ಪಾಯಿತೇನೋ” ಎನ್ನುವ ರೀತಿಯ ಪೋಸ್ಟ್ ಒಂದನ್ನು ಅವರು ಹಂಚಿಕೊಂಡಿದ್ದರು. ಅದಾದ ಮೇಲೆ ಸಹ ರಶ್ಮಿಕ ಮಂದಣ್ಣ ಹಲವಾರು ಕಾರಣಗಳಿಗೆ ಟ್ರೋಲ್ ಗೆ ಒಳಗಾಗಿದ್ದಾರೆ. ಇದೆಲ್ಲದರ ಕುರಿತಾಗಿ ಅವರು ಮಾತನಾಡಿದ್ದು, ಇವೆಲ್ಲವೂ ಇಷ್ಟು ಮುಂದುವರಿಯೋದಕ್ಕೆ ತಾವು ಮಾಡಿದ ಅದೊಂದು ತಪ್ಪು ಕಾರಣವೆಂದು ಹೇಳಿದ್ದಾರೆ.

kannada news rashmika vijay rakshith shetty | Kannada News: ಇರುವುದನ್ನು ಇದ್ದಹಾಗೆ ಒಪ್ಪಿಕೊಂಡ ರಶ್ಮಿಕಾ: ಆರಂಭದಲ್ಲಿಯೇ ಆ ತಪ್ಪು ಮಾಡಿಬಿಟ್ಟೆ, ಅದಾದ ಮೇಲೆ ಅಭ್ಯಾಸ ಆಗೋಯ್ತು ಎಂದಿದ್ದು ಯಾಕೆ ಗೊತ್ತೇ??
Kannada News: ಇರುವುದನ್ನು ಇದ್ದಹಾಗೆ ಒಪ್ಪಿಕೊಂಡ ರಶ್ಮಿಕಾ: ಆರಂಭದಲ್ಲಿಯೇ ಆ ತಪ್ಪು ಮಾಡಿಬಿಟ್ಟೆ, ಅದಾದ ಮೇಲೆ ಅಭ್ಯಾಸ ಆಗೋಯ್ತು ಎಂದಿದ್ದು ಯಾಕೆ ಗೊತ್ತೇ?? 2

ಮೊದಲಿನಿಂದಲೂ ನನ್ನನ್ನು ಯಾರು ಎಷ್ಟೇ ಟ್ರೋಲ್ ಮಾಡಿದರು ನಾನು ತಲೆಕೆಡಿಸಿಕೊಳ್ಳುತ್ತಿರಲಿಲ್ಲ, ಸುಮ್ಮನಿರುತ್ತಿದ್ದೆ. ನಾನು ಎಲ್ಲರನ್ನೂ ಪ್ರೀತಿಸುತ್ತೇನೆ ಹಾಗೂ ಗೌರವಿಸುತ್ತೇನೆ. ಹಾಗಾಗಿ ಅದೇ ಕಾರಣಕ್ಕಾಗಿ ನಾನು ಏನನ್ನು ಮಾತನಾಡದೆ ಸುಮ್ಮನಾಗಿ ಬಿಟ್ಟೆ. ಟ್ರೋಲ್ ಗಳನ್ನು ಸ್ವೀಕರಿಸುವುದು ನನಗೆ ಅಭ್ಯಾಸವಾಗಿಬಿಟ್ಟಿದೆ. ಆದರೆ ಅದೇ ನನ್ನ ದೊಡ್ಡ ತಪ್ಪು. ಆ ಒಂದು ತಪ್ಪಿನಿಂದಾಗಿ ನಾನು ಇಂದು ಇಷ್ಟೆಲ್ಲಾ ಅನುಭವಿಸಬೇಕಾಗಿದೆ. ಆದರೆ ಇನ್ನು ಮುಂದೆಯೂ ಸಹ ಸುಮ್ಮನಿರುವುದು ಸರಿಯಲ್ಲ. ಏಕೆಂದರೆ ಇದು ಕೇವಲ ನನ್ನ ಕುರಿತಾಗಿದ್ದರೆ ಅಥವಾ ಕೇವಲ ನನಗೆ ಸಮಸ್ಯೆ ಆಗಿದ್ದರೆ ನಾನು ಸಹಿಸಿಕೊಳ್ಳುತ್ತಿದ್ದೆ. ಆದರೆ ಈ ರೀತಿಯ ಟ್ರೋಲ್ಗಳು ನನ್ನ ಕುಟುಂಬದವರಿಗೆ ಕೂಡ ನೋವು ನೀಡುತ್ತಿದೆ. ನಾನು ಅದನ್ನು ಯಾವುದೇ ಕಾರಣಕ್ಕೂ ಸ್ವೀಕರಿಸುವುದಿಲ್ಲ. ಏನು ಮಾತನಾಡದೆ ಸುಮ್ಮನೆ ಇದ್ದಿದ್ದೆ ಇಷ್ಟೆಲ್ಲದಕ್ಕೂ ಕಾರಣ. ಆದರೆ ಇನ್ನು ಮುಂದೆ ನಾನು ಎಲ್ಲದಕ್ಕೂ ಉತ್ತರಿಸುತ್ತೇನೆ ಎಂದು ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ.

Comments are closed.