Kannada News: ತಮಿಳಿನಿಂದ ನಟಿಯನ್ನು ಕರೆತಂದ ವಿಜಯ್ ರಾಜಕುಮಾರ್: ಮುಂದಿನ ಅಪ್ಪು ಗೆ ಜೋಡಿಯಾದ ಅಪ್ಸರೆ ಯಾರು ಗೊತ್ತೇ??

Kannada News: ನಟ ವಿನಯ್ ರಾಜಕುಮಾರ್ (Vinay Rajkumar) ಇದೀಗ ಸಾಲು ಸಾಲು ಚಿತ್ರಗಳನ್ನು ಘೋಷಿಸುವ ಮೂಲಕ ನಟನೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಅವರ ಅದೊಂದಿತ್ತು ಕಾಲ ಚಿತ್ರ ಸೆಟ್ಟೆರಿತ್ತು. ಈಗ ಅವರು ಮತ್ತೆ ಹೊಸದೊಂದು ಚಿತ್ರಕ್ಕೆ ಸಹಿ ಹಾಕಿದ್ದಾರೆ. ವಿನಯ್ ಇದೀಗ ಲವ್ ಸ್ಟೋರಿ ಇರುವ ಚಿತ್ರಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅಂದ ಹಾಗೆ ಈ ಚಿತ್ರಕ್ಕೆ ಆಯ್ಕೆಯಾಗಿರುವ ನಟಿಯ ಕುರಿತಾಗಿ ಚರ್ಚೆಗಳು ಜೋರಾಗಿದೆ. ವಿನಯ್ ಅಭಿನಯಿಸುತ್ತಿರುವ ಮುಂದಿನ ಹೊಸ ಚಿತ್ರಕ್ಕಾಗಿ ತಮಿಳಿನಿಂದ ನಟಿಯನು ಕರೆದುಕೊಂಡು ಬರಲಾಗಿದೆ. ಸಾಕಷ್ಟು ಚರ್ಚೆ ಮತ್ತು ಹುಡುಕಾಟದ ನಂತರ ಈ ನಟಿಯನ್ನು ಅಂತಿಮಗೊಳಿಸಲಾಗಿದ್ದು, ಇನ್ನು ಹಾಗಿದ್ದರೆ ವಿನಯ್ ರಾಜಕುಮಾರ್ ಅವರ ಮುಂದಿನ ಚಿತ್ರದ ನಾಯಕಿಯಾಗಿ ಆಯ್ಕೆಯಾಗಿರುವ ನಟಿ ಯಾರೆಂದು ಗೊತ್ತ?

ಕಳೆದ ವರ್ಷ ವಿನಯ್ ರಾಜಕುಮಾರ್ ಅವರ ಟೆನ್ ಚಿತ್ರ ತೆರೆಕಂಡಿತ್ತು. ಆದರೆ ಆ ಚಿತ್ರಕ್ಕೆ ಹೆಚ್ಚಿನ ಪ್ರಚಾರ ಸಿಗದೇ ಒಂದೇ ವಾರಕ್ಕೆ ಆ ಚಿತ್ರ ಚಿತ್ರಮಂದಿರದಿಂದ ಅಮೆಜಾನ್ ಪ್ರೈಮ್ (Amazon Prime) ನಲ್ಲಿ ಬಿಡುಗಡೆಯಾಗಿತ್ತು. ಇನ್ನು ವರ್ಷಗಳ ಹಿಂದೆಯೇ ಶುರುವಾಗಿದ್ದ ಗ್ರಾಮಾಯಣ (Gramayana) ಚಿತ್ರದ ಕಥೆ ಎಲ್ಲಿಗೆ ಬಂತು, ಏನಾಯಿತು ಎನ್ನುವ ಅಪ್ಡೇಟ್ ಇನ್ನೂ ಸಿಕ್ಕೇ ಇಲ್ಲ. ಇನ್ನು ವಿನಯ್ ರಾಜಕುಮಾರ್ ಅವರ ಕೈಯಲ್ಲಿ ಪೆಪೆ (PePe) ಚಿತ್ರವಿದ್ದು ಈಗಾಗಲೇ ಚಿತ್ರೀಕರಣ ಮುಗಿದು ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಲವ್ ಸಬ್ಜೆಕ್ಟ್ ಇರುವ ಚಿತ್ರಗಳನ್ನು ಅವರು ಆಯ್ಕೆ ಮಾಡಿಕೊಳ್ಳುತ್ತಿದ್ದು, ಇದೀಗ ಮತ್ತೊಂದು ಚಿತ್ರಕ್ಕೆ ಅವರು ಸಹಿ ಹಾಕಿದ್ದಾರೆ. ಸಿಂಪಲ್ ಸುನಿ (Simple Suni) ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ‘ಒಂದು ಸರಳ ಪ್ರೇಮಕಥೆ’ ಎಂಬ ಚಿತ್ರ ಇನ್ನು ಕೆಲವೇ ದಿನಗಳಲ್ಲಿ ಸೆಟ್ಟರಲ್ಲಿದ್ದು, ಇದಕ್ಕೆ ತಮಿಳು ನಟಿಯನ್ನು ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಇದನ್ನು ಓದಿ..Kannada News: ದೇಶವನ್ನೇ ಶೇಕ್ ಮಾಡುವಂತೆ ಡಾನ್ಸ್ ಮಾಡಿದ್ದ ಅನುಶ್ರೀ: ವೈರಲ್ ಆಯಿತು ಅನುಶ್ರೀ ಹಳೆ ಡಾನ್ಸ್: ನೋಡಿದರೆ ಎದ್ದು ನಿಂತು ಸಲ್ಯೂಟ್ ಮಾಡ್ತೀರಾ.

kannada news vinay rajkumar swathishta krishnan ondu sarala premakathe | Kannada News: ತಮಿಳಿನಿಂದ ನಟಿಯನ್ನು ಕರೆತಂದ ವಿಜಯ್ ರಾಜಕುಮಾರ್: ಮುಂದಿನ ಅಪ್ಪು ಗೆ ಜೋಡಿಯಾದ ಅಪ್ಸರೆ ಯಾರು ಗೊತ್ತೇ??
Kannada News: ತಮಿಳಿನಿಂದ ನಟಿಯನ್ನು ಕರೆತಂದ ವಿಜಯ್ ರಾಜಕುಮಾರ್: ಮುಂದಿನ ಅಪ್ಪು ಗೆ ಜೋಡಿಯಾದ ಅಪ್ಸರೆ ಯಾರು ಗೊತ್ತೇ?? 2

ಕೆಲವು ದಿನಗಳ ಹಿಂದಷ್ಟೇ ವಿನಯ್ ಅದೊಂದಿತ್ತು ಕಾಲ ಎನ್ನುವ ತಮ್ಮ ಹೊಸ ಚಿತ್ರವನ್ನು ಘೋಷಿಸಿದರು. ಅದಾದ ನಂತರ ಇದೀಗ ತಮ್ಮ ಮತ್ತೊಂದು ಹೊಸ ಚಿತ್ರದ ಬಗ್ಗೆ ಅವರು ತಿಳಿಸಿದ್ದಾರೆ. ಸಿಂಪಲ್ ಸುನಿ ನಿರ್ದೇಶನದ ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ ಚಿತ್ರದ ರೀತಿಯೇ ಈ ಹೊಸ ಚಿತ್ರವು ಇರಲಿದೆ ಎಂದು ಅಭಿಪ್ರಾಯಪಡಲಾಗಿದೆ. ಚಿತ್ರದ ಮುಹೂರ್ತ ಸಮಾರಂಭ ನೆನ್ನೆಯಷ್ಟೇ ನಡೆದಿದೆ. ಇನ್ನೂ ಚಿತ್ರದ ನಾಯಕಿಯಾಗಿ ವಿಕ್ರಮ್ (Vikram) ಖ್ಯಾತಿಯ ಸ್ವಾತಿಷ್ಠ ಕೃಷ್ಣನ್ (Swatishta Krishnan) ಕಾಣಿಸಿಕೊಳ್ಳಲಿದ್ದಾರೆ. ಕಳೆದ ವರ್ಷ ತಮಿಳಿನಲ್ಲಿ ತೆರೆಕಂಡು ಗಲ್ಲಾಪೆಟ್ಟಿಗೆ ಲೂಟಿ ಮಾಡಿದ್ದ ವಿಕ್ರಮ್ ಚಿತ್ರದಲ್ಲಿ ಕಮಲ್ ಹಾಸನ್ ಪುತ್ರನ ಪಾತ್ರಧಾರಿಯ ಪತ್ನಿಯ ಪಾತ್ರದಲ್ಲಿ ಮಿಂಚಿದ್ದ ನಟಿ ಸ್ವಾದಿಷ್ಟ ಈ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಗೊಂಡಿದ್ದಾರೆ. ಮೂಲತಹ ಬೆಂಗಳೂರಿನವರೇ ಆದ ನಟಿ ಸ್ವಾದಿಷ್ಟ ‘ಒಂದು ಸರಳ ಪ್ರೇಮಕಥೆ’ ಚಿತ್ರದಲ್ಲಿ ವಿನಯ್ ರಾಜಕುಮಾರ್ ಅವರಿಗೆ ಜೋಡಿಯಾಗುವ ಮೂಲಕ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ಇದನ್ನು ಓದಿ..Kannada News: ದರ್ಶನ್ ಗೆ ಬಿಗ್ ಶಾಕ್ ಕೊಟ್ಟ ಪಠಾಣ್: ನಂಬರ್ 1 ಆಗಿದ್ದ ದರ್ಶನ್ ರವರ ಕ್ರಾಂತಿ ಸಿನಿಮಾ ಪಾಡು ಏನಾಗಿದೆ ಗೊತ್ತೇ? ಕನ್ನಡ ಓಲಾಟಗಾರರೇ ಕಾಣಿಸುತ್ತಿಲ್ಲವೇ?

Comments are closed.