ಎಂಗೇಜ್ ಆದ ಪ್ರೇಮ ಪಕ್ಷಿಗಳು ! ಕವಿತಾ-ಚಂದನ್ ನಿಶ್ಚಿತಾರ್ಥಕ್ಕೆ ಯಾರ್ಯಾರು ಬಂದಿದ್ದರು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಹಲವಾರು ವರ್ಷಗಳಿಂದ ಸ್ನೇಹಿತರು ಎಂದು ಹೇಳಿ ಕೊಂಡು ಪ್ರೇಮ ಪಕ್ಷಿಗಳಾಗಿ ಹಾರಾಟ ನಡೆಸಿದ್ದ ಕಿರುತೆರೆಯ ಖ್ಯಾತ ಜೋಡಿಗಳಲ್ಲಿ ಒಂದಾಗಿರುವ ಚಂದನ್ ಹಾಗೂ ಕವಿತ ಗೌಡ ರವರು ನಿಶ್ಚಿತಾರ್ಥ ಮಾಡಿ ಕೊಂಡಿದ್ದಾರೆ. ಅದ್ದೂರಿಯಾಗಿ ನಡೆದ ಈ ಸಮಾರಂಭದಲ್ಲಿ ಉಂಗುರ ಬದಲಾಯಿಸಿ ಕೊಂಡಿರುವ ಈ ಜೋಡಿಗೆ ಅಭಿಮಾನಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಕೇವಲ ಅಭಿಮಾನಿಗಳು ಅಷ್ಟೇ ಅಲ್ಲದೇ, ವಿವಿಧ ಸೆಲೆಬ್ರೆಟಿ ಗಳು ಕೂಡ ಶುಭಾಶಯಗಳನ್ನು ತಿಳಿಸಿದ್ದಾರೆ.

ಏಪ್ರಿಲ್ ಒಂದರಂದು ಫೂಲ್ ಆಗುತ್ತೇನೆ ಎಂದು ಕಳೆದ ಎರಡು ದಿನಗಳ ಹಿಂದಷ್ಟೇ ಚಂದನ್ ರವರು ಅಧಿಕೃತವಾಗಿ ಕವಿತಾ ಗೌಡ ರವರ ಜೊತೆ ಮದುವೆ ಯಾಗುವುದಾಗಿ ತಿಳಿಸಿದ್ದರು, ಸಾಕಷ್ಟು ವರ್ಷಗಳಿಂದ ಇವರ ಬಗ್ಗೆ ಪ್ರೀತಿ ಇದೆ ಎಂಬ ಮಾತುಗಳು ಕೇಳಿ ಬರುತ್ತಿತ್ತು ಆದರೆ ಈ ಜೋಡಿಯು ಎಲ್ಲಿಯೂ ಕೂಡ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ.

ಇಂದು ಬಹಳ ವಿಜೃಂಭಣೆಯಿಂದ ನಿಶ್ಚಿತಾರ್ಥ ಕಾರ್ಯಕ್ರಮ ನಡೆದಿದ್ದು, ಯಾರ್ಯಾರು ಬಂದಿದ್ದರು ಎಂಬುದನ್ನು ನಾವು ನೋಡುವುದಾದರೇ ಬಿಗ್ ಬಾಸ್ ಸೀಸನ್ 6 ರಲ್ಲಿ ಸ್ಪರ್ಧಿಯಾಗಿ ಕಾಣಿಸಿ ಕೊಂಡಿದ್ದ ಧನರಾಜ್ ಹಾಗೂ ಧನರಾಜ್ ರವರ ಪತ್ನಿ, ಅರ್ಚನಾ ಶರ್ಮಾ ಸೇರಿದಂತೆ ಎರಡು ಕುಟುಂಬದ ಆಪ್ತರು ಮಾತ್ರ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು, ಕಾರಣಾಂತರಗಳಿಂದ ಹೆಚ್ಚಿನ ಜನರನ್ನು ಆಹ್ವಾನಿಸದೇ ಈ ಜೋಡಿಯ ನಿಶ್ಚಿತಾರ್ಥ ಮಾಡಿಕೊಂಡಿದೆ. ಬಹುಶಃ ಕೋರೋಣ ಕಾರಣದಿಂದ ಕಡಿಮೆ ಜನರನ್ನು ಕರೆದಿರಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ.

Comments are closed.