ತಮಿಳುನಾಡಿನಲ್ಲಿ ಮಹಾ ಅಸ್ತ್ರವನ್ನು ಪ್ರಯೋಗಿಸಿ ಗದ್ದುಗೆ ಏರಲು ಸಿದ್ಧವಾದ ಬಿಜೆಪಿ ! ವಿಪಕ್ಷಗಳಿಗೆ ಮರ್ಮಾಘಾತ

ನಮಸ್ಕಾರ ಸ್ನೇಹಿತರೆರೇ ಈ ಬಾರಿ ತಮಿಳುನಾಡಿನ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಶತಾಯಗತಾಯ ಸರ್ಕಾರವನ್ನು ರಚಿಸುವ ಕೆಲಸ ಮಾಡುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಾರಿ ತಮಿಳುನಾಡಿನ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳು ನಡೆಯುತ್ತಿದ್ದು ನಿಮಗೆಲ್ಲರಿಗೂ ತಿಳಿದಿರುವಂತೆ ಬಿಜೆಪಿ ಪಕ್ಷದ ಕಡೆಗೆ ಅಲೆ ಜೋರಾಗಿಯೇ ಇದೆ. ಇನ್ನು ಚುನಾವಣೆಗೆ ಹಲವಾರು ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಈ ರೀತಿಯ ಅಲೆಯನ್ನು ನೋಡುತ್ತಿದ್ದರೆ ಖಂಡಿತ ಚುನಾವಣೆಯ ಸಂದರ್ಭದಲ್ಲಿ ಇದು ಸುನಾಮಿಯಾಗಿ ಪರಿವರ್ತನೆಯಾದರೇ ಖಂಡಿತ ಬಿಜೆಪಿ ಪಕ್ಷ ಐತಿಹಾಸಿಕ ಗೆಲುವನ್ನು ದಾಖಲಿಸಲಿದೆ

ಇಂತಹ ಸಂದರ್ಭದಲ್ಲಿ ಈಗಾಗಲೇ ಯುವ ಜನತೆಯನ್ನು ಸೆಳೆಯಲು ಬಿಜೆಪಿ ಪಕ್ಷ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೆ ರವರಿಗೆ ಬಿಜೆಪಿ ಪಕ್ಷದಲ್ಲಿ ಮಹತ್ವದ ಹುದ್ದೆಯನ್ನು ನೀಡಿ ತಮಿಳುನಾಡಿನ ಗಲ್ಲಿಗಲ್ಲಿಗಳಲ್ಲಿ ಪ್ರಚಾರ ಮಾಡಲು ಅನುಮತಿ ನೀಡಿ ಎಲ್ಲಾ ಸಹಕಾರ ನೀಡುತ್ತಿದೆ. ಇಂತಹ ಸಂದರ್ಭದಲ್ಲಿ ಅಣ್ಣಾಮಲೆ ರವರನ್ನು ನೋಡಿದ ಯುವ ಜನತೆ ಸ್ವಯಂ ಪ್ರೇರೇಪಿತರಾಗಿ ಬಿಜೆಪಿ ಪಕ್ಷಕ್ಕೆ ಸೇರುತ್ತಿದ್ದಾರೆ.

ಇದನ್ನೇ ಪ್ರಮುಖ ಅಸ್ತ್ರವನ್ನಾಗಿ ಬಳಸಿಕೊಳ್ಳಲು ತಯಾರಿ ನಡೆಸಿರುವ ಬಿಜೆಪಿ ಪಕ್ಷವು ಅಣ್ಣಾಮಲೆ ರವರನ್ನು ಬಳಸಿಕೊಂಡು ಇದೀಗ ಮತ್ತೊಂದು ಹೆಜ್ಜೆ ಇಡಲು ಭರ್ಜರಿ ತಯಾರಿ ನಡೆಸಿದೆ. ಹೌದು ಸ್ನೇಹಿತರೇ ಇದೀಗ ಬಂದಿರುವ ಮೂಲಗಳ ಪ್ರಕಾರ ಬಿಜೆಪಿ ಪಕ್ಷ ಅಣ್ಣಾಮಲೆ ರವರನ್ನು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಘೋಷಿಸುವ ಕುರಿತು ಚರ್ಚೆ ಆರಂಭಿಸಿದ ಎಂಬುದು ತಿಳಿದು ಬಂದಿದೆ. ಒಂದು ವೇಳೆ ಅದೇ ನಡೆದಲ್ಲಿ ಖಂಡಿತ ಬಿಜೆಪಿ ಪಕ್ಷಕ್ಕೆ ಯುವ ಜನತೆಯ ಬೆಂಬಲ ಕಂಡು ಕೇಳರಿಯದ ಮಟ್ಟದಲ್ಲಿ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ

Comments are closed.